ತೋಡಾರು : 'ಬಿಡಿಎಂ'ನ 244ನೇ ರಕ್ತದಾನ ಶಿಬಿರ
ಮಂಗಳೂರು : ಬಾಮಾ ಫ್ಯಾಮಿಲಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಸಹಭಾಗಿತ್ವದಲ್ಲಿ ಬಿಡಿಎಂ 244 ನೇ ಬೃಹತ್ ರಕ್ತದಾನ ಶಿಬಿರವು ತೋಡಾರಿನಲ್ಲಿ ನಡೆಯಿತು.
ಶಿಬಿರವನ್ನು ಬದ್ರಿಯಾ ಜುಮಾ ಮಸೀದಿ ಮುಅಲ್ಲಿಂ ಅಲ್ತಾಫ್ ದುಆ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಾಮಾ ಫ್ಯಾಮಿಲಿಯ ಗೌರವಾಧ್ಯಕ್ಷರಾದ ಮುಹಮ್ಮದ್ ಮುಚ್ಚೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬದ್ರಿಯಾ ಸುನ್ನೀ ಜುಮಾ ಮಸೀದಿ ತೋಡಾರ್ ಅಧ್ಯಕ್ಷರಾದ ಡಿ.ಎ ಉಸ್ಮಾನ್ ಅವರು ಮರ್ಹೂಂ ಜಮಾಲುದ್ದೀನ್ ಕಳಾಯಿ ಅವರ ವ್ಯಕ್ತಿತ್ವವನ್ನು ಬಿಂಬಿಸುವಂತಹ ಕಾರ್ಯವನ್ನು ರಕ್ತದಾನ ಶಿಬಿರದಂತಹ ಉತ್ತಮ ಕಾರ್ಯಕ್ರಮ ದೊಂದಿಗೆ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಬಾಮಾ ಫ್ಯಾಮಿಲಿಯ ಅಧ್ಯಕ್ಷರಾದ ಬಿ.ಮುಹಮ್ಮದ್ ,ಯೇನಪೋಯ ವೈದ್ಯಕೀಯ ಸಿಬ್ಬಂದಿ ನವಾಝ್ ಕುತ್ತಾರ್ ಉಪಸ್ಥಿತರಿದ್ದರು.
ಸನ್ಮಾನ
ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಕ್ಕೆ ಪಾತ್ರರಾದ ಆದರ್ಶ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಟಿ.ಎ ಮೊಹಮ್ಮದ್ ಆಸಿಫ್ ಸೂರಲ್ಪಾಡಿ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಬಿರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರುಗಳಾದ ಫಾರೂಕ್ ಬಿಗ್ ಗ್ಯಾರೇಜ್, ಹಫೀಝ್ ಒಮನ್,ಶಾಹುಲ್ ಹಮೀದ್ ಕಾಶಿಪಟ್ಣ ,ಸಮೀರ್ ನಾರಾವಿ ಭಾಗವಹಿಸಿದ್ದರು. ಬಾಮಾ ಫ್ಯಾಮಿಲಿಯ ಸದಸ್ಯರಾದ ಅಝರ್ ತೋಡಾರ್ ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರಾದ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.