ರಾಜ್ಯದಲ್ಲಿ ಹೊಸದಾಗಿ 9,217 ಮಂದಿಗೆ ಕೊರೋನ ಸೋಂಕು ದೃಢ: 129 ಮಂದಿ ಸಾವು
ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.10: ರಾಜ್ಯದಲ್ಲಿ ಗುರುವಾರ 9,217 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 129 ಜನರು ಸೋಂಕಿಗೆ ಬಲಿಯಾಗಿದ್ದು, 7,021 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 4,30,947ಕ್ಕೆ ತಲುಪಿದ್ದು, 768 ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 6,937ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,01,537ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
129 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ -7, ಬೆಳಗಾವಿ-2, ಬೆಂಗಳೂರು ನಗರ 33, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 9, ದಾವಣಗೆರೆ 3, ಧಾರವಾಡ 8, ಗದಗ 2, ಹಾಸನ 9, ಹಾವೇರಿ 1, ಕಲಬುರ್ಗಿ 2, ಕೊಡಗು 1, ಕೋಲಾರ 2, ಕೊಪ್ಪಳ 4, ಮಂಡ್ಯ 3, ಮೈಸೂರು 13, ರಾಯಚೂರು 3, ಶಿವಮೊಗ್ಗ 5, ತುಮಕೂರು 2, ಉಡುಪಿ 4, ಉತ್ತರ ಕನ್ನಡ 8, ವಿಜಯಪುರ 3, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,217 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 77, ಬಳ್ಳಾರಿ 375, ಬೆಳಗಾವಿ 263, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 3,161, ಬೀದರ್ 98, ಚಾಮರಾಜನಗರ 62, ಚಿಕ್ಕಬಳ್ಳಾಪುರ 167, ಚಿಕ್ಕಮಗಳೂರು 111, ಚಿತ್ರದುರ್ಗ 142, ದಕ್ಷಿಣ ಕನ್ನಡ 350, ದಾವಣಗೆರೆ 297, ಧಾರವಾಡ 264, ಗದಗ 180, ಹಾಸನ 218, ಹಾವೇರಿ 190, ಕಲಬುರ್ಗಿ 243, ಕೊಡಗು 61, ಕೋಲಾರ 104, ಕೊಪ್ಪಳ 139, ಮಂಡ್ಯ 249, ಮೈಸೂರು 635, ರಾಯಚೂರು 107, ರಾಮನಗರ 126, ಶಿವಮೊಗ್ಗ 539, ತುಮಕೂರು 365, ಉಡುಪಿ 227, ಉತ್ತರ ಕನ್ನಡ 214, ವಿಜಯಪುರ 63, ಯಾದಗಿರಿ ಜಿಲ್ಲೆಯಲ್ಲಿ 103 ಪ್ರಕರಣಗಳು ಪತ್ತೆಯಾಗಿವೆ.







