ಕುಂದಾಪುರ ಮಹಾಕಾಳಿ ದೇವಸ್ಥಾನದನೂತನ ಅಧ್ಯಕ್ಷರಾಗಿ ಜಯಾನಂದ ಖಾರ್ವಿ
ಜಯಾನಂದ
ಕುಂದಾಪುರ, ಸೆ.15: ಪ್ರಕಾಶ್ ಆರ್. ಖಾರ್ವಿ ಇವರ ಸಭಾಧ್ಯಕ್ಷತೆಯಲ್ಲಿ ಇಲ್ಲಿನ ಶ್ರೀಮಹಾಕಾಳಿ ದೇವಳದ ವಾರ್ಷಿಕ ಮಹಸಭೆಯು ದೇವಸ್ಥಾನದ ವಠಾರದಲ್ಲಿ ಜರಗಿತು.
ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ. ಕೇಶವ ಖಾರ್ವಿ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ರತ್ನಾಕರ ಖಾರ್ವಿ ಮಂಡಿಸಿದರು. ನಂತರ 2020-22ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಜಯಾನಂದ ಖಾರ್ವಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೇಶವ ಖಾರ್ವಿ ಹಾಗೂ ಖಜಾಂಚಿಯಾಗಿ ರತ್ನಾಕರ ಖಾರ್ವಿ ಪುನರಾಯ್ಕೆಗೊಂಡರು. ಸಮಿತಿಯ ಸದಸ್ಯರಾಗಿ 32 ಜನರನ್ನು ಸಭೆಯು ಸೂಚಿಸಿ ಅನುಮೋದಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ರಾಜು ನಾಯ್ಕ್ ಪ್ರಾರ್ಥಿಸಿ, ಅಶೋಕ ಖಾರ್ವಿ ಮದ್ದುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ನಾಮದೇವ ಖಾರ್ವಿ ವಂದಿಸಿದರು.
Next Story