ರಾಜ್ಯದಲ್ಲಿ ಹೊಸದಾಗಿ 7,576 ಕೊರೋನ ಪ್ರಕರಣಗಳು ದೃಢ: 97 ಮಂದಿ ಸಾವು

ಬೆಂಗಳೂರು, ಸೆ.15: ರಾಜ್ಯದಲ್ಲಿ ಮಂಗಳವಾರ 7,576 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 97 ಜನರು ಸೋಂಕಿಗೆ ಬಲಿಯಾಗಿದ್ದು, 7,406 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 4,75,265ಕ್ಕೆ ತಲುಪಿದ್ದು, 794 ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 7,481ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 98,536ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
97 ಸೋಂಕಿತರು ಬಲಿ: ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 41, ಬೀದರ್ 1, ಚಾಮರಾಜನಗರ 2, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 5, ದಾವಣಗೆರೆ 1, ಗದಗ 2, ಹಾವೇರಿ 3, ಕಲಬುರಗಿ 3, ಕೋಲಾರ 2, ಕೊಪ್ಪಳ 2, ಮೈಸೂರು 12, ರಾಯಚೂರು 3, ತುಮಕೂರು 5, ಉತ್ತರ ಕನ್ನಡ 2, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 7,576 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 54, ಬೆಳಗಾವಿ 249, ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 3,084, ಬೀದರ್ 50, ಚಾಮರಾಜನಗರ 38, ಚಿಕ್ಕಬಳ್ಳಾಪುರ 150, ಚಿಕ್ಕಮಗಳೂರು 262, ಚಿತ್ರದುರ್ಗ 127, ದಕ್ಷಿಣ ಕನ್ನಡ 316, ದಾವಣಗೆರೆ 405, ಧಾರವಾಡ 56, ಗದಗ 39, ಹಾಸನ 291, ಹಾವೇರಿ 180, ಕಲಬುರ್ಗಿ 144, ಕೊಡಗು 72, ಕೋಲಾರ 69, ಕೊಪ್ಪಳ 103, ಮಂಡ್ಯ 200, ಮೈಸೂರು 312, ರಾಯಚೂರು 160, ರಾಮನಗರ 78, ಶಿವಮೊಗ್ಗ 368, ತುಮಕೂರು 223, ಉಡುಪಿ 1, ಉತ್ತರ ಕನ್ನಡ 195, ವಿಜಯಪುರ 131, ಯಾದಗಿರಿ ಜಿಲ್ಲೆಯಲ್ಲಿ 76 ಪ್ರಕರಣಗಳು ಪತ್ತೆಯಾಗಿವೆ.







