ದ.ಕ. ನಿರ್ಮಿತಿ ಕೇಂದ್ರದಿಂದ ಇಂಜಿನಿಯರ್ಸ್ ಡೇ ಕಾರ್ಯಕ್ರಮ
ಮಂಗಳೂರು, ಸೆ.16: ದ.ಕ. ನಿರ್ಮಿತಿ ಕೇಂದ್ರದಲ್ಲಿ ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರ 160ನೇ ಜನ್ಮ ದಿನದ ಸ್ಮರಣಾರ್ಥ ಇಂಜಿನಿಯರ್ಸ್ ಡೇ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಅತಿಥಿಯಾಗಿ ಜಿ.ಎಂ. ಟೆಕ್ ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಎಸಿಸಿಇಐ ಅಧ್ಯಕ್ಷ ಅರುಣ್ ಪ್ರಭಾ, ಮಂಗಳೂರು ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೋಜಾ ಹಾಗೂ ಸುರತ್ಕಲ್ ಎನ್ಐಟಿಕೆ ಮಾಜಿ ಡೀನ್ ಡಾ.ಬಿ.ಆರ್. ಸಮಾಗಾ ಭಾಗವಹಿಸಿದ್ದರು.
ನಿರ್ಮಿತಿ ಕೇಂದ್ರದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಲೆಕ್ಕಾಧಿಕಾರಿ ಉಷಾ, ಪ್ರಧಾನ ತರಬೇತುದಾರ ಯೋಗೀಶ್ ಎಂ. ಹಾಗೂ ನಿರ್ಮಿತಿ ಕೇಂದ್ರದ ಉತ್ಪಾದನಾ ಘಟಕದ ಸಿಬ್ಬಂದಿಗಳಾದ ಗಂಗಯ್ಯ ಮತ್ತು ಶಿವಾನಂದ ಅವರನ್ನು ಸನ್ಮಾನಿಸಲಾಯಿತು.
ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ಹರೀಸ್ ಸ್ವಾಗತಿಸಿದರು. ಸೌಮ್ಯ ವಂದಿಸಿದರು.
Next Story