Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಗೋಡೆಗಳ ನಡುವಿನಿಂದಲೇ, ಗೋಡೆ ಒಡೆಯುವ...

ಗೋಡೆಗಳ ನಡುವಿನಿಂದಲೇ, ಗೋಡೆ ಒಡೆಯುವ ಕನಸು

-ಕಾರುಣ್ಯಾ-ಕಾರುಣ್ಯಾ20 Sept 2020 12:10 AM IST
share
ಗೋಡೆಗಳ ನಡುವಿನಿಂದಲೇ, ಗೋಡೆ ಒಡೆಯುವ ಕನಸು

ಕಾವ್ಯದ ಬಹುಮುಖ್ಯ ಉದ್ದೇಶವೇ ಗೋಡೆಗಳನ್ನು ಕೆಡಹುವುದು. ಅದು ಕುಕ್ಕರಿನ ಒಳಗೆ ಆವಿ ಧಗಧಗಿಸುತ್ತಿರುವ ಹೊತ್ತಿನಲ್ಲೇ ಹೊರ ಬರುವ ಸೀಟಿಯಂತೆ. ಆ ಸೀಟಿ ಹೊರಬರುವ ಅವಕಾಶವಿಲ್ಲದೆ ಇದ್ದರೆ ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಸೀಟಿ ಎನ್ನುವುದು ಉಳಿದವರಿಗೆ ನೀಡುವ ಸಂದೇಶ ಮಾತ್ರವಲ್ಲ, ಒಳಗಿನ ಬೇಗುದಿಯನ್ನು ಹೊರ ಹಾಕುವ ಒಂದು ದಾರಿ. ಸೀಟಿಯ ಸದ್ದುಗಳೇ ಒಳಗೆ ಬೆಂದ ಅನ್ನದ ಸೂಚನೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲೇ ಮುಂಬೈಯ ಕವಯಿತ್ರಿ ಗಿರಿಜಾಶಾಸ್ತ್ರಿಯವರು ಹೆಣ್ಣನ್ನು ‘ಕುಕ್ಕರ್’ಗೆ ಹೋಲಿಸಿ ಒಂದು ಕವಿತೆಯನ್ನು ಬರೆದಿದ್ದಾರೆ. ಈ ಹಿನ್ನೆಲೆ ಆಯಿಶಾ ಯು. ಕೆ. ಎನ್ನುವ ಮಹಿಳಾ ಕವಯತ್ರಿಯ ಚೊಚ್ಚಲ ಕೃತಿ ಕುತೂಹಲ ಕೆರಳಿಸುತ್ತದೆ.

ಇಂದು ಗೋಡೆ ನಮ್ಮನ್ನೆಲ್ಲ ಹಲವು ರೀತಿಯಲ್ಲಿ ಆವರಿಸಿಕೊಂಡಿದೆ. ಜಾತಿ, ಮತ, ಧರ್ಮ ಇಷ್ಟೇ ಅಲ್ಲ, ಹೆಣ್ಣುಗಳಿಗಾಗಿಯೇ ಒಂದು ಪ್ರತ್ಯೇಕ ಗೋಡೆಯನ್ನು ನಿರ್ಮಿಸಿ, ಅದರೊಳಗೆ ಇನ್ನೂ ಒಳಗೋಡೆಗಳನ್ನು ಕಟ್ಟಲಾಗಿದೆ. ಅನೇಕ ಸಂದರ್ಭಗಳಲ್ಲಿ ಈ ಗೋಡೆಗಳಿಗೆ ಬಿರುಕು ಕೊರೆಯಲು ಕವಿತೆ ನೆರವಾಗುತ್ತದೆ. ಯುವ ಕವಯಿತ್ರಿ ಆಯಿಶಾ ಯು.ಕೆ. ಅವರು ಗೋಡೆಗಳನ್ನು ಕೆಡಹುವ ಉದ್ದೇಶದಿಂದಲೇ ‘ಗೋಡೆಗಳನ್ನು ಕಟ್ಟುವವರು’ ಕವನ ಸಂಕಲನಗಳ ಕೃತಿಯನ್ನು ಹೊರತಂದಿದ್ದಾರೆ. ಇದು ಲೇಖಕಿಯ ಚೊಚ್ಚಲ ಕವನ ಸಂಕಲನ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ವೇಳೆ ಗುಜರಾತ್‌ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಗೋಡೆ ಇಲ್ಲಿರುವ ಒಂದು ಕವಿತೆಗೆ ಸ್ಫೂರ್ತಿಯಾಗಿದ್ದರೂ, ಎಲ್ಲ ಬಗೆಯ ಗೋಡೆಗಳಿಗೂ ಇದು ರೂಪಕವಾಗಿ ನಿಲ್ಲುತ್ತದೆ. ಇಡೀ ದೇಶದ ಜನರನ್ನೇ ಅಕ್ಷರಶಃ ಬೇರ್ಪಡಿಸಿದ ಲಾಕ್‌ಡೌನ್ ಎನ್ನುವ ಗೋಡೆಯ ಮಧ್ಯದಲ್ಲಿ ಅರಳಿದ ಕೃತಿಯಿದು. ಇಲ್ಲಿ ಒಟ್ಟು 50 ಕವಿತೆಗಳಿವೆ.

‘ಸಾಹಿತ್ಯ ವಿರಳವಾದ/ಸರಳ ಭಾಷೆ ನನ್ನ ಕವಿತೆ’ ಎನ್ನುವ ಮೂಲಕ ಆರಂಭದಲ್ಲೇ ಕವಯಿತ್ರಿ ತನ್ನ ಕವಿತೆಗಳ ಕುರಿತಂತೆ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುತ್ತಾರೆ. ಮನದ ಭಾವನೆಗಳ ಪಲ್ಲವಿಸಿದ ಪದಗಳೇ ನನ್ನ ಕವಿತೆ ಎನ್ನುತ್ತಾ...ನಾನೇಕೆ ಪದ್ಯ ಬರೆಯುತ್ತೇನೆ ಎನ್ನುವುದನ್ನು ‘ನನ್ನ ಕವಿತೆ’ ಪದ್ಯದಲ್ಲಿ ಸರಳವಾಗಿ ನೇರವಾಗಿ ಹೇಳುತ್ತಾರೆ. ಗೋಡೆಗಳನ್ನು ಒಡೆಯುವ ಉದ್ದೇಶದಿಂದಲೇ ಪ್ರತಿ ಪದ್ಯಗಳು ಹುಟ್ಟಿವೆಯಾದರೂ, ತನ್ನ ಧರ್ಮ, ಸಂಪ್ರದಾಯ, ಆಚರಣೆಗಳ ಗೋಡೆಗಳ ಒಳಗಿನಿಂದಲೇ ತಮ್ಮ ಪಿಸು ಮಾತುಗಳನ್ನು ಹೊರಗೆಡಹುತ್ತಾರೆ. ಧರ್ಮದ ಒಳಿತುಗಳು, ನಂಬಿಕೆಗಳು ಹಲವು ಪದ್ಯಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ದೇವರ ಮೇಲಿನ ನಂಬಿಕೆ ಇಲ್ಲಿರುವ ಪದ್ಯಗಳ ಆಧಾರ ಸ್ತಂಭವಾಗಿದೆ. ಇದೇ ಸಂದರ್ಭದಲ್ಲಿ ಧರ್ಮದ ದುರುಪಯೋಗಗಳ ಬಗ್ಗೆ, ಅವುಗಳನ್ನು ರಾಜಕಾರಣಕ್ಕೆ ಬಳಸುವ, ಹೆಣ್ಣನ್ನು ಶೋಷಣೆಗೆ ಬಳಸುವ ಗೋಡೆಗಳ ಕುರಿತಂತೆ ಬರೆಯುವ ಧೈರ್ಯವನ್ನು ಇನ್ನೂ ಮೈಗೂಡಿಸಿಕೊಂಡಿಲ್ಲ. ಇಷ್ಟಾದರೂ, ‘ಅವನು’ ಎನ್ನುವ ಪುಟ್ಟ ಹನಿ ಎದೆಗೆ ಸಣ್ಣಗೆ ಬಂದು ತಾಕುತ್ತದೆ ‘ಅವನೆಂದರೆ...!

ಅವ-
ನೆಂದರೆ

ಬೈರಾಸಿಗಾಗಿ ನನ್ನ ಕರೆಯುವವ!!’  ದಾಂಪತ್ಯದಲ್ಲಿ ಕೆಲವೊಮ್ಮೆ ಪತ್ನಿಯ ಸ್ಥಾನ ಹೇಗೆ ಸಂಕುಚಿತಗೊಳ್ಳಬಹುದು ಎನ್ನುವ ಆಶಯವನ್ನೂ ಈ ಹನಿ ಹೊಂದಿದೆ. ಆಯಿಶಾ ಅವರು ಇನ್ನಷ್ಟು ತೀವ್ರವಾಗಿ ಬದುಕುತ್ತಾ, ಓದುತ್ತಾ ಇನ್ನಷ್ಟು, ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ಬೆಳೆಯಬೇಕು. ಈ ನಿಟ್ಟಿನಲ್ಲಿ ಈ ಚೊಚ್ಚಲ ಸಂಕಲನ ಒಂದು ಸಣ್ಣ ಕವಾಯತು ಎಂದು ತಿಳಿದುಕೊಳ್ಳಬಹುದು.

ಭಾರತ ಪ್ರಕಾಶನ, ಮಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 112. ಮುಖಬೆಲೆ 120 ರೂಪಾಯಿ. ಆಸಕ್ತರು 90601 02626 ದೂರವಾಣಿಯನ್ನು ಸಂಪರ್ಕಿಸಬಹುದು. 

share
-ಕಾರುಣ್ಯಾ
-ಕಾರುಣ್ಯಾ
Next Story
X