Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನಾನು ಈಗಲೂ ಬ್ಯುಝಿಯಾಗಿದ್ದೇನೆ:...

ನಾನು ಈಗಲೂ ಬ್ಯುಝಿಯಾಗಿದ್ದೇನೆ: ಪ್ರಿಯಾಮಣಿ

ಸಂದರ್ಶನ: ಶಶಿಕರ ಪಾತೂರುಸಂದರ್ಶನ: ಶಶಿಕರ ಪಾತೂರು20 Sept 2020 12:10 AM IST
share
ನಾನು ಈಗಲೂ ಬ್ಯುಝಿಯಾಗಿದ್ದೇನೆ: ಪ್ರಿಯಾಮಣಿ

ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು ಹಲವರು. ಇನ್ನು ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡವರು. ಆದರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಈ ಎರಡೂ ತೊಂದರೆಗಳನ್ನು ಅನುಭವಿಸಿಲ್ಲ. ಅವರು ಮುಂಬೈನ ಗಂಡನ ಮನೆಯಲ್ಲಿ ಪತಿ ಮುಸ್ತಫಾ ರಾಜ್ ಮತ್ತು ಕುಟುಂಬದ ಜತೆಗೆ ಮನೆಯ ಸದಸ್ಯೆಯಾಗಿ ಕಾಲಕಳೆದಿದ್ದಾರೆ. ಮಾತ್ರವಲ್ಲ ಮದುವೆಯ ಬಳಿಕ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಬರುತ್ತಿದ್ದು ಅವುಗಳಲ್ಲಿ ಬ್ಯುಝಿಯಾಗಿರುವುದಾಗಿ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಪ್ರ: ಪ್ರಸ್ತುತ ಯಾವುದಾದರೂ ಭಾಷೆಯ ಸಿನೆಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರ?
ಪ್ರಿಯಾಮಣಿ: ಇಲ್ಲ. ಜೂನ್ ತಿಂಗಳಿನಿಂದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದೇನೆ. ತೆಲುಗು ‘ಢೀ’ ಎನ್ನುವ ಡಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಲ್ಲಿ ನಾನೂ ಒಬ್ಬಳು. ಸರಕಾರದ ಸೂಚನೆಗೆ ಅನುಸಾರವಾಗಿ ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಶೂಟಿಂಗ್ ನಡೀತಿದೆ. ಮುಂದಿನ ತಿಂಗಳಿನಿಂದ ನನ್ನ ಸಿನೆಮಾ ಚಿತ್ರೀಕರಣ ಕೂಡ ಆರಂಭವಾಗುವ ಲಕ್ಷಣಗಳಿವೆ. ಹಾಗಂತ ಈಗ ಬಿಡುವಿನಲ್ಲಿದ್ದೇನೆ ಎಂದು ಖಂಡಿತವಾಗಿ ಅಂದುಕೊಳ್ಳಬೇಡಿ. ಹಿಂದಿಯಲ್ಲಿ ‘ಮೈದಾನ್’, ತೆಲುಗಲ್ಲಿ ವೆಂಕಟೇಶ್ ಅವರೊಂದಿಗೆ ‘ನಾರಪ್ಪ’, ರಾಣಾ ದಗ್ಗುಬಾಟಿ ಜತೆಗೆ ‘ವಿರಾಟಪರ್ವಂ’ ಮೊದಲಾದ ಚಿತ್ರಗಳಲ್ಲಿ ಭಾಗಿಯಾಗಿದ್ದೇನೆ. ಆ ಯಾವುದೇ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಿರ್ಮಾಣ ಸಂಸ್ಥೆಯ ಜತೆಗೆ ಕಾಂಟ್ರಾಕ್ಟ್ ಆಗಿದೆ. ಅವರಿಂದ ಒಪ್ಪಿಗೆ ಸಿಕ್ಕ ಮೇಲೆಯೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ. ವಿರಾಟಪರ್ವಂನಲ್ಲಿ ನಕ್ಸಲೈಟ್ ಪಾತ್ರ ಮಾಡುತ್ತಿದ್ದೇನೆ. ಅದರ ಬಗ್ಗೆ ಕೂಡ ಹೆಚ್ಚು ಮಾತನಾಡಲಾರೆ. ಅದು ಕೂಡ ಒಂದು ಡಿಗ್ಲಾಮರೈಸ್ಡ್ ಪಾತ್ರ. ಇವಲ್ಲದೆ ಎರಡು ಮೂರು ಹೊಸ ಪ್ರಾಜೆಕ್ಟ್‌ಗಳಿಗೆ ಕಮಿಟ್ ಆಗಿದ್ದೀನಿ. ಅವುಗಳ ಬಗ್ಗೆ ಸದ್ಯದಲ್ಲಿ ಏನೂ ಹೇಳಲಾರೆ.

ಪ್ರ: ಲಾಕ್‌ಡೌನ್ ದಿನಗಳನ್ನು ಹೇಗೆ ನಿಭಾಯಿಸಿದಿರಿ?
ಪ್ರಿಯಾಮಣಿ: ಲಾಕ್‌ಡೌನ್ ದಿನಗಳನ್ನು ನಿಭಾಯಿಸುವುದು ನನಗೆ ಕಷ್ಟದ ವಿಚಾರವೇನೂ ಆಗಿರಲಿಲ್ಲ. ಆ ಸಂದರ್ಭದಲ್ಲಿ ನಾನು ಮುಂಬೈನಲ್ಲಿ ಗಂಡನ ಮನೆಯಲ್ಲಿದ್ದೆ. ಬಿಡುವಿನ ವೇಳೆಯಲ್ಲಿ ನನಗೆ ಮುಂಚಿನಿಂದಲೂ ಮನೆಯೊಳಗಿದ್ದು ಅಭ್ಯಾಸ ಇದೆ. ಮನೆಯಲ್ಲಿರುವುದು ಅಂದರೆ ನನಗೆ ಇಷ್ಟ ಕೂಡ. ಹಾಗಾಗಿ ಲಾಕ್‌ಡೌನ್ ದಿನಗಳನ್ನು ಫ್ಯಾಮಿಲಿ ಜೊತೆಗೆ ಮನೆಯಲ್ಲಿ ಆರಾಮಾಗಿಯೇ ಕಳೆದೆ. ಆನ್‌ಲೈನ್‌ನಲ್ಲಿ ಸಿನೆಮಾ, ಸೀರೀಸ್ ನೋಡಿಕೊಂಡು ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ. ಮೂರು ತಿಂಗಳಕಾಲ ಅಲ್ಲಿ ಮನೆಗೆಲಸದವರನ್ನು ಕೂಡ ಇರಿಸಿಕೊಳ್ಳುವಂತೆ ಇರಲಿಲ್ಲ. ಹಾಗಾಗಿ ನಾನೇ ಮನೆಗೆಲಸ ಮಾಡುತ್ತಿದ್ದೆ. ಇದೆಲ್ಲ ನನಗೆ ಹೊಸದೇನೂ ಅಲ್ಲ. ಮದುವೆಗಿಂತ ತುಂಬ ಮೊದಲೇ ನಮ್ಮ ಮನೆಯಲ್ಲಿ ನಾನು ಕಸ ಗುಡಿಸುವುದು ಇತ್ಯಾದಿ ಕೆಲಸಗಳ ಮೂಲಕ ನನ್ನ ತಾಯಿಗೆ ಸಹಾಯ ಮಾಡಿದ್ದೇನೆ! ಆದರೆ ಗಂಡನ ಮನೆಯ ಅಡುಗೆ ವಿಚಾರದಲ್ಲಿ ನಾನು ತಲೆ ಹಾಕಿಲ್ಲ. ಯಾಕೆಂದರೆ ಅಡುಗೆ ವಿಭಾಗವನ್ನು ಅವರೇ ನೋಡಿಕೊಂಡಿದ್ರು. ಮನೆ ಕ್ಲೀನ್ ಮಾಡುವುದು ಸೇರಿದಂತೆ ಉಳಿದ ವಿಚಾರವನ್ನೆಲ್ಲ ನಾನು ನನ್ನ ಗಂಡ ಮಾಡಿದ್ದೇವೆ.

ಪ್ರ: ಗಂಡನ ಮನೆಯಲ್ಲಿ ಅವರ ಉತ್ತರ ಭಾರತೀಯ ಆಹಾರ ಶೈಲಿಗೆ ಹೊಂದಿಕೊಂಡಿದ್ದೀರ?
ಪ್ರಿಯಾಮಣಿ: ಹೌದು ಆಹಾರದಲ್ಲಿ ಒಂದಷ್ಟು ವ್ಯತ್ಯಾಸ ಇದೆ. ಆದರೆ ಅಷ್ಟು ಹೊಂದಾಣಿಕೆ ಸಾಧ್ಯವಾಗಲ್ಲ ಅಂದರೆ ಮದುವೆಯಾಗುವುದರಲ್ಲಿ ಅರ್ಥ ಏನಿದೆ? ನನ್ನ ಗಂಡ ಮತ್ತು ಮನೆಯವರು ಹೆಲ್ತೀ ಫುಡ್ ಬಗ್ಗೆ ತುಂಬ ಆಸಕ್ತಿ ವಹಿಸುತ್ತಾರೆ. ಯಾವಾಗಲೂ ಚೆನ್ನಾಗಿರುವ ಆಹಾರವನ್ನೇ ಸೇವಿಸಬೇಕು, ಜಂಕ್ ಫುಡ್ ತಿನ್ನಬಾರದು ಎನ್ನುವುದು ಚಾಲೆಂಜ್ ಅನಿಸಬಹುದು. ಆದರೆ ನಮ್ಮೆಲ್ಲರ ಆದ್ಯತೆಯೂ ಅದೇ ಆಗಿರುವ ಕಾರಣ ಅದರಲ್ಲಿ ಸಮಸ್ಯೆ ಏನೂ ಇಲ್ಲ. ರೋಟಿ, ದಾಲ್ ಹೀಗೆ ಮುಖ್ಯವಾಗಿ ಸಸ್ಯಾಹಾರವೇ ಆಹಾರವಾಗಿತ್ತು. ವಾರಕ್ಕೊಮ್ಮೆ ಹೋಗಿ ಮನೆಗೆ ದಿನಸಿ ತರುವ ಕೆಲಸವನ್ನು ನಾನೇ ಮಾಡುತ್ತಿದ್ದೆ.

ಪ್ರ: ಹೊಂದಾಣಿಕೆಯ ವಿಚಾರಕ್ಕೆ ಬಂದರೆ ಎರಡು ಧರ್ಮಗಳ ಸಂಗಮ ಹೇಗೆ ಅನಿಸಿದೆ?
ಪ್ರಿಯಾಮಣಿ: ಇಲ್ಲಿ ಧರ್ಮಗಳಿಗಿಂತ ಮನುಷ್ಯರಾಗಿ, ಸ್ನೇಹಿತರಾಗಿ ಮತ್ತು ದಂಪತಿಯಾಗಿ ನಾವು ಚೆನ್ನಾಗಿ ಬೆರೆತಿದ್ದೇವೆ. ಧರ್ಮದ ವಿಷಯದಲ್ಲಿ ಹೇಳುವುದಾದರೆ ನಾನು ಮದುವೆಯ ಸಮಯದಲ್ಲೇ ಈ ಬಗ್ಗೆ ಗಂಡನಿಗೆ ತುಂಬ ಸ್ಪಷ್ಟವಾಗಿ ಹೇಳಿಕೊಂಡಿದ್ದೆ. ಧರ್ಮ ಬದಲಾಯಿಸುವುದು ಎನ್ನುವುದು ವೈಯಕ್ತಿಕ ಆಯ್ಕೆಯ ವಿಚಾರ. ಅವರ ಧರ್ಮವನ್ನು ನಾನು ಗೌರವಿಸುತ್ತೇನೆ. ಅವರು ಕೂಡ ನನ್ನ ಧರ್ಮವನ್ನು ಗೌರವಿಸುತ್ತಾರೆ.

share
ಸಂದರ್ಶನ: ಶಶಿಕರ ಪಾತೂರು
ಸಂದರ್ಶನ: ಶಶಿಕರ ಪಾತೂರು
Next Story
X