Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆಯಬ್ಬರ...

ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆಯಬ್ಬರ : ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿ

► ನೀರುಮಾರ್ಗ ರಸ್ತೆ ಸಂಪೂರ್ಣ ಕಡಿತ ►ಉಕ್ಕಿ ಹರಿದ ಪ್ರಮುಖ ನದಿಗಳು ► ಏರ್‌ಪೋರ್ಟ್ ರಸ್ತೆ ಬಂದ್

ವಾರ್ತಾಭಾರತಿವಾರ್ತಾಭಾರತಿ20 Sept 2020 9:45 PM IST
share
ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆಯಬ್ಬರ : ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿ

ಮಂಗಳೂರು, ಸೆ.20: ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವರ್ಷಧಾರೆ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಜಿಲ್ಲೆಯು ಅಕ್ಷರಶಃ ತತ್ತರಿಸಿದೆ. ಜಿಲ್ಲೆಯ ವಿವಿಧೆಡೆ ರಸ್ತೆ ಕಡಿತ, ಗುಡ್ಡ, ಬಂಡೆ ಕುಸಿತ, ಮನೆ-ತಡೆಗೋಡೆಗಳು, ಮರ-ಗಿಡಗಳು ಧರಾಶಾಹಿಯಾಗಿದ್ದು, ರವಿವಾರ ಜನಜೀವನ ಸಂಫೂರ್ಣ ಅಸ್ತವ್ಯಸ್ತಗೊಂಡಿತು.

ಜಿಲ್ಲೆಯಾದ್ಯಂತ ಒಂಬತ್ತು ಮನೆಗಳು ಸಂಪೂರ್ಣ ಹಾನಿಯಾಗಿದ್ದು, 16 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಳೆದ 24 ಗಂಟೆಯಲ್ಲಿ ವ್ಯಕ್ತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಜಿಲ್ಲೆಯ ಪ್ರಮುಖ ನದಿಗಳು ಕುಮಾರಧಾರ, ನೇತ್ರಾವತಿ, ಫಲ್ಗುಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯ ಹೊಲ-ಗದ್ದೆಗಳು ಮಳೆನೀರಿನಿಂದ ಸಂಪೂರ್ಣ ಜಲಾವೃತಗೊಂಡಿವೆ.

ಕಾಳಜಿ ಕೇಂದ್ರ ಆರಂಭ: ದ.ಕ. ಜಿಲ್ಲೆಯಲ್ಲಿ ವ್ಯಾಪಕಗೊಂಡಿರುವ ಮಳೆಗೆ ಜನತೆ ಸಮಸ್ಯೆಯ ಸುಳಿಗೆ ಸಿಕ್ಕಿಹಾಕಿಕೊಂಡಿದ್ದು, ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಮೂರು ಕಾಳಜಿ ಕೇಂದ್ರ ತೆರೆಯಲಾಗಿದೆ.

ದ.ಕ. ಜಿಲ್ಲೆಯ ಜಿಪಂ ಬೋರ್ಡ್ ಶಾಲೆ ಕಾಶಿಮಠದಲ್ಲಿ ಏಳು ಜನ, ಮುಲ್ಕಿಯ ಕಿಲ್ಲಜಾರು ಗ್ರಾಮ ನಂದಗೋಖುಲ ಭವನದಲ್ಲಿ 15 ಮಂದಿ, ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ 12 ಮಂದಿಗೆ ಆಶ್ರಯ ನೀಡಲಾಗಿದೆ. ಮಂಗಳೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಇನ್ನಿತರ ಯಾವುದೇ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಮೂಲ್ಕಿ ಪ್ರದೇಶದಲ್ಲಿ ಶಾಂಭವಿ ನದಿ ನೀರಿನ ಮಟ್ಟ ಏರಿ ವ್ಯಾಪಕ ಪ್ರವಾಹ ಉಂಟಾಗಿದ್ದರಿಂದ ಎನ್‌ಡಿಆರ್‌ಎಫ್ ತಂಡದ ಸಹಕಾರದಲ್ಲಿ ಒಟ್ಟು 27 ಮಂದಿಯನ್ನು ಎರಡು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಮಲ್ಲೂರಿನಲ್ಲಿ ಗುಡ್ಡದ ಬಂಡೆಯೊಂದು ಕುಸಿಯುವ ಮುನ್ನೆಚ್ಚರಿಕೆಯಾಗಿ 5 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.

ಎಕ್ಕೂರು, ಜಪ್ಪಿನ ಮೊಗರು ಪ್ರದೇಶದಲ್ಲಿ ಶನಿವಾರ ಸಾಕಷ್ಟು ಮಳೆ ನೀರಿನಿಂದ ಸಮಸ್ಯೆಯಾಗಿ ಅಲ್ಲಿನ 15ಕ್ಕೂ ಹೆಚ್ಚಿನ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ರವಿವಾರ ಮಳೆ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಅವರು ಮತ್ತೆ ಮನೆಗೆ ಮರಳಿದ್ದಾರೆ.

ರಸ್ತೆ ಸಂಪರ್ಕ ಕಡಿತ: ಮಂಗಳೂರು ತಾಲೂಕಿನ ನೀರುಮಾರ್ಗ ಕೆಲರಾಯಿ ರಸ್ತೆಯಲ್ಲಿ ಸುಮಾರು ಮೀಟರ್‌ಗಳಷ್ಟು ಉದ್ದಕ್ಕೆ ರಸ್ತೆಯೇ ಪ್ರಪಾತಕ್ಕೆ ಜರಿದು ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದ್ದು, ಸ್ಥಳೀಯರಿಗೆ ತೀವ್ರ ಅನನುಕೂಲವಾಗಿದೆ.

ನೀರುಮಾರ್ಗದಿಂದ-ಕಟಿಂಜ-ಪಡು ಬಿತ್ತ್‌ಪಾದೆ ಸಂಪರ್ಕ ರಸ್ತೆ ಇದಾಗಿದ್ದು, ಮೂರು ವರ್ಷಗಳ ಹಿಂದೆ ಕಾಂಕ್ರಿಟೀಕರಣಗೊಂಡಿತು. ಪಿಎಂಜಿಎಸ್‌ವೈ ಯೋಜನೆಯಡಿ ನಿರ್ಮಾಣವಾದ ಈ ರಸ್ತೆಯ ಕೆಳಭಾಗದಲ್ಲಿ ಖಾಸಗಿ ಜಮೀನಿನವರು ಸಮತಟ್ಟು ಮಾಡಿದ್ದರು. ಇದರ ಪರಿಣಾಮ ಈ ವರ್ಷದ ಮೊದಲ ಮಳೆಗೆ ರಸ್ತೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದನ್ನು ನೀರುಮಾರ್ಗ ಗ್ರಾಮ ಪಂಚಾಯತ್ ಅಧಿಕಾರಿಗಳು ಪಿಎಂಜಿಎಸ್‌ವೈ ಇಂಜಿನಿಯರ್‌ಗಳ ಗಮನಕ್ಕೆ ತಂದು ದುರಸ್ತಿಗೆ ಮನವಿ ಮಾಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ತಡೆಗೋಡೆ ಕಾಮಗಾರಿ ಅಂದಾಜು ಮೊತ್ತ ರೂಪಿಸಿ, ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ರಸ್ತೆಯ ಮೇಲ್ಭಾಗ ಗುಡ್ಡ ಪ್ರದೇಶವಾಗಿದ್ದು, ಅಲ್ಲಿಯ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎಡಭಾಗಕ್ಕೆ ಚರಂಡಿ ನಿರ್ಮಾಣ ವಾಗಲಿಲ್ಲ. ಇದರಿಂದ ಕುಸಿತ ಆಗಿರುವ ಸಾಧ್ಯತೆಯಿದೆ. ಈ ಕುಸಿತಕ್ಕೆ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಸ್ತೆ ಆತಂಕದ ಬಗ್ಗೆ ಪಂಚಾಯತ್ ಅಧಿಕಾರಿಗಳು ಈ ಹಿಂದೆಯೇ ಮುನ್ಸೂಚನೆ ನೀಡಿದ್ದರು. ಸ್ಥಳಕ್ಕೆ ಮಂಗಳೂರು ಮೇಯರ್ ದಿವಾಕರ್, ನೀರುಮಾರ್ಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್, ಸಿಬ್ಬಂದಿ ಉಮಾನಾಥ್ ಕೋನಿಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ಸಲ್ಲಿಸಿದರು.

ಏರ್‌ಪೋರ್ಟ್ ರಸ್ತೆ ಬಂದ್ : ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿ-ಏರ್‌ಪೋರ್ಟ್ ರಸ್ತೆಗೆ ಗುಡ್ಡದಿಂದ ಬೃಹತ್ ಮುರಬಂಡೆ ಹಾಗೂ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಪ್ರದೇಶಕ್ಕೆ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಪಂಚಾಯತ್ ಮಾಜಿ ಸದಸ್ಯ ಶಿವಶಂಕರ್, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್ ಮತ್ತಿತರರು ಭೇಟಿ ನೀಡಿ, ಸಂಬಂಧಿತ ಇಲಾಖೆಗಳಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದರು. ಇದೇ ರೀತಿ ಬಜ್ಪೆ ಸಮೀಪದ ಕೊಂಚಾರು ಸೇತುವೆ ಸಮೀಪದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಉಳ್ಳಾಲದ ಮಂಜನಾಡಿಯಲ್ಲಿ ಮನೆಯೊಂದು ಸಂಪೂರ್ಣ ಹಾನಿಯಾದರೆ, ಅಳಪೆಯಲ್ಲಿ ಗೋಡೆ ಕುಸಿತವಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಕದ್ರಿಯಲ್ಲಿ ಗೋಡೆ ಜರಿದುಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಹರೇಕಳದಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಅಳಪೆಯಲ್ಲಿ ದಾಮೋದರ್ ಎಂಬವರ ಮನೆ ಸಂಪೂರ್ಣ ಧರಾಶಾಹಿಯಾಗಿದೆ. ನಗರದ ಹೊರವಲಯದ ಸರಿಪಳ್ಳ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಕುಳಾಯಿ ಬಳಿಯೂ ಧರೆ ಕುಸಿದು ಮನೆ ಜಖಂಗೊಂಡಿದೆ.

ಫಲ್ಗುಣಿ ನದಿಪಾತ್ರದಲ್ಲಿ ಆತಂಕ: ಮಂಗಳೂರು ನಗರದ ಹೊರವಲಯದ ಗುರುಪುರ ವ್ಯಾಪ್ತಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ಆತಂಕದ ಸ್ಥಿತಿ ಉಂಟಾಗಿದ್ದರೆ, ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಕೆಲವೆಡೆ ಗುಡ್ಡ ಕುಸಿತ, ಬಂಡೆ ಕುಸಿದು ರಸ್ತೆ ಸಂಚಾರ ಸ್ಥಗಿತ, ಆವರಣ ಗೋಡೆ ಕುಸಿದು ಮನೆಗಳಿಗೆ ಭಾರೀ ಅಪಾಯ ಸಂಭವಿಸಿದೆ.

ಭತ್ತದ ಬೆಳೆ ಮುಳುಗಡೆ: ವಾಮಂಜೂರು ಸಮೀಪದ ಮೂಡುಶೆಡ್ಡೆ ಭಾಗದಲ್ಲಿ ಫಲ್ಗುಣಿ ನದಿ ತುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಅಧಿಕ ಪ್ರಮಾಣದ ಭತ್ತದ ಬೆಳೆ ಮುಳುಗಡೆಯಾಗಿದೆ. ಕೃಷಿಕ ರಮಾನಾಥ ಎಂಬವರು ಐದು ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಕೃಷಿ ಪ್ರವಾಹ ದಿಂದ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ಲಕ್ಷಾಂತರ ರೂ. ವೌಲ್ಯದ ಬೆಳೆ ನೀರುಪಾಲಾಗಿದೆ. ಗುರುಪುರ ಕುಕ್ಕುದಕಟ್ಟೆಯಲ್ಲಿ ಭತ್ತದ ನೇಜಿ ಪ್ರವಾಹದಲ್ಲಿ ಹರಿದು ಹೋಗಿದ್ದು, ಕೆಲವರು ಈಜಿ ಒಂದಷ್ಟು ನೇಜಿ ಹಿಡಿದಿದ್ದಾರೆ. ಇಲ್ಲಿನ ತಗ್ಗುಪ್ರದೇಶದಲ್ಲೂ ಪ್ರವಾಹ ಭೀತಿ ಉಂಟಾಗಿದೆ.
ಮರವೂರು ಅಣೆಕಟ್ಟು ಸುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಕೃಷಿ ಬೆಳೆಗೆ ಹಾನಿಯಾಗಿದೆ. ಮೂಲ್ಕಿಯ ಕಿನ್ನಿಗೋಳಿ, ಕಿಲೆಂಜೂರು, ಪಂಜ, ಬಳ್ಕುಂಜೆ, ಅತ್ತೂರು ಪ್ರದೇಶದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ಸೂರಿಂಜೆ, ಚೇಳ್ಯಾರು ಪ್ರದೇಶದಲ್ಲೂ ಬತ್ತದ ಗದ್ದೆಗಳಲ್ಲಿ ಮಳೆ ನೀರು ನಿಂತು ನಷ್ಟ ಸಂಭವಿಸಿದೆ.

ಇನ್ನು ಬೆಳ್ತಂಗಡಿಯ ಪಾಣಿಮೇರು, ಕೊಡಮಾಣಿ ಭಾಗದಲ್ಲಿ ಹೊಳೆ ನೀರು ನುಗ್ಗಿ ಅಡಕೆ ತೋಟಗಳಲ್ಲಿನ ಅಪಾರ ಪ್ರಮಾಣದ ಹಣ್ಣಡಿಕೆಗಳು ಕೊಚ್ಚಿಹೋಗಿವೆ. ಕಾಶಿಪಟ್ಣ, ಗುಂಡಡಪ್ಪು, ಆರ್ಲಡ್ಕ, ಸಂಪಿಗೆದಡಿ, ಹೊಸಂಗಡಿ ದೇವಾಲಯ, ಮಸೀದಿ, ಅರಮನೆ ಸುತ್ತಮುತ್ತ ಕೂಡ ತೋಟ ಗಳಿಗೆ ಪ್ರವಾಹ ನುಗ್ಗಿ ಲಕ್ಷಾಂತರ ರೂ. ಅಡಕೆ ನಷ್ಟವಾಗಿದೆ.

ಮಂಗಳೂರು ನಗರದಲ್ಲಂತೂ ಯಥಾಪ್ರಕಾರ ಹಲವು ಕಡೆಗಳಲ್ಲಿ ಕೃತಕ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ನಗರದಲ್ಲಿ ವಾಹನ- ಜನ ಸಂಚಾರ ತೀರ ವಿರಳವಾಗಿತ್ತು. ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಮುರನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವು ಮನೆಯೊಳಗೆ ನೀರು ತುಂಬಿದೆ. ಮುರನಗರದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಗೋಪಾಲ ಬೆಲ್ಚಡ, ಕವಿತಾ ಎಂ, ಸುನಂದಾ, ಸೇಸಮ್ಮ, ಸೀತಮ್ಮ, ಭಾಸ್ಕ ಮೂಲ್ಯ, ಸುಲೋಚನಾ ಮನೆಯೊಳಗೆ ಹತ್ತಿರದ ಪವರ್ ಹೌಸ್-ಸಾಯಿಧಾಮ ಕಟ್ಟಡದ ಕಡೆಯಿಂದ ಮಳೆ ಹಾಗೂ ಚರಂಡಿ ನೀರಿಂದ ಕೃತಕ ನೆರೆ ಸೃಷ್ಟಿಯಾಗಿದೆ.

ಮನೆಗಳು ಧರಾಶಾಹಿ: ಕೊಳಂಬೆ ಗ್ರಾಮದ ಕೊಪ್ಪಲದಲ್ಲಿ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ಯಮುನಾ ಪೂಜಾರ್ತಿ ಎಂಬವರ ಮನೆ ಆವರಣ ಗೋಡೆಯು ಪಕ್ಕದ ಗುಲಾಬಿ ಎಂಬವರ ಮನೆಯ ಹಿಂಭಾಗಕ್ಕೆ ಬಿದ್ದಿದೆ. ಪರಿಣಾಮ ಮನೆ ಗೋಡೆ ಸಂಪೂರ್ಣ ಕುಸಿದಿದೆ. ಎರಡೂ ಮನೆಗೆ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಕೊಳಂಬೆ ಜಿಪಂ ಸರಕಾರಿ ಶಾಲೆಗೆ ಗುಲಾಬಿ ಕುಟುಂಬ ಸ್ಥಳಾಂತರಗೊಳಿಸಲಾಗಿದೆ.

ಇಲ್ಲಿನ ಮಹಾಬಲ ಬೆಲ್ಚಡ ಎಂಬವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಕೆಳಗಿನ ಮನೆ (ಮೋನಪ್ಪ ಪೂಜಾರಿ) ಅಂಗಳಕ್ಕೆ ಬಿದ್ದಿದೆ. ಇವೆರಡು ಮನೆಗಳಿಗೂ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

ಅಪಾಯ ಸಂಭವಿಸಿರುವ ಮನೆಗಳಿಗೆ ಗುರುಪುರ ನಾಡ ಕಚೇರಿ ಉಪ-ತಹಶೀಲ್ದಾರ್ ಶಿವಪ್ರಸಾದ್, ಗ್ರಾಮ ಲೆಕ್ಕಿಗ ಯುಮುನಪ್ಪ, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಮುಖಂಡರಾದ ಶಿವಶಂಕರ್, ಕವಿತಾ, ದೇವೇಂದ್ರ, ಅಡ್ವೊಕೇಟ್ ವಿನೋದ್ ಪೂಜಾರಿ ಮತ್ತಿತರರು ಭೇಟಿ ನೀಡಿದರು. ‘ಅಪಾಯದಲ್ಲಿರುವ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುವ ಹಾಗೂ ಪರಿಹಾರದ ಬಗ್ಗೆ ವರದಿಯೊಂದಿಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು. ಇಲ್ಲಿನ ಕೆಲವು ಮನೆ ಅಪಾಯದಲ್ಲಿವೆ’ ಎಂದು ಉಪ-ತಹಶಿಲ್ದಾರ್ ಶಿವಪ್ರಸಾದ್ ತಿಳಿಸಿದರು.

3 ದೇವಾಲಯ ಜಲಾವೃತ: ಕಾಸರಗೋಡಿನ ಇತಿಹಾಸ ಪ್ರಸಿದ್ಧ ಮಧೂರು ಮಹಾಗಣಪತಿ ದೇವಾಲಯ ಜಲಾವೃತವಾಗಿದ್ದರೆ, ಬಪ್ಪನಾಡು, ಶಿಮಂತೂರು ದೇವಾಲಯಗಳು ಕೂಡ ಈ ಮಳೆಗಾಲದಲ್ಲಿ 2ನೇ ಬಾರಿಗೆ ಜಲಾವೃತವಾದವು.

ಮೃತ ಕುಟುಂಬಕ್ಕೆ ಚೆಕ್ ವಿತರಣೆ

ಕೂಳೂರು ಬಳಿ ಶನಿವಾರ ತಡೆಗೋಡೆ ಕುಸಿತವಾಗಿ ಶನಿವಾರ ಮೃತಪಟ್ಟ ನೀರು ಮಾರ್ಗ ಸರಿಪಳ್ಳ ನಿವಾಸಿ ಉಮೇಶ್ ಅವರ ಪತ್ನಿ ಮೋಹಿನಿ ಅವರಿಗೆ ಪ್ರಾಕೃತಿಕ ವಿಕೋಪ ಪರಿಹಾರದಡಿ ಐದು ಲಕ್ಷ ರೂ. ಚೆಕ್‌ನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ತಹಶೀಲ್ದಾರ್ ಗುರುಪ್ರಸಾದ್ ವಿತರಿಸಿದರು.

ಕಾರ್ಮಿಕ ಇಲಾಖೆಯಿಂದ ಎರಡು ಲಕ್ಷ ರೂ. ನೀಡುವ ಭರವಸೆ ನೀಡಲಾಯಿತು. ಜತೆಗೆ ಮೋಹಿನಿ ಅವರಿಗೆ ವಿಧವಾ ವೇತನ ಸೇರಿದಂತೆ ನಾನಾ ಯೋಜನೆಗಳಿಂದ 25 ಸಾವಿರ ರೂ. ಮೊತ್ತವನ್ನು ನೀಡಲಾಯಿತು.

ಇನ್ನೆರಡು ದಿನ ರೆಡ್ ಅಲರ್ಟ್:

ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಇನ್ನೆರಡು ದಿನಗಳ ಕಾಲ (ಸೆ.21, 22)ಭಾರೀ ಮಳೆ ಮುನ್ಸೂಚನೆಯ ರೆಡ್ ಅಲರ್ಟ್ ಘೋಷಣೆ ಮಾಡಿದೆ. ವಿಶೇಷವಾಗಿ ದ.ಕ ಹಾಗೂ ಉಡುಪಿಯಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯನ್ನು ಹೇಳಿದೆ. ಇದರ ಜತೆಗೆ ಕಡಲಿನ ಅಬ್ಬರ ಕೂಡ ಜಾಸ್ತಿ ಇರುವುದರಿಂದ ಮೀನುಗಾರಿಕೆಗೆ ಹೋಗದಂತೆ ಇಲಾಖೆ ಎಚ್ಚರಿಕೆ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X