Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ನಿಮ್ಮ ಹೇಳಿಕೆ ಕೀಳು ಅಭಿರುಚಿಯಿಂದ...

ನಿಮ್ಮ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ: ಗವಾಸ್ಕರ್ ವಿರುದ್ಧ ಹರಿಹಾಯ್ದ ಅನುಷ್ಕಾ ಶರ್ಮ

ವಾರ್ತಾಭಾರತಿವಾರ್ತಾಭಾರತಿ25 Sept 2020 3:51 PM IST
share
ನಿಮ್ಮ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ: ಗವಾಸ್ಕರ್ ವಿರುದ್ಧ ಹರಿಹಾಯ್ದ ಅನುಷ್ಕಾ ಶರ್ಮ

ಮುಂಬೈ :ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ  ವಿರಾಟ್‌ ಕೊಹ್ಲಿ ಕಳಪೆ ಫೀಲ್ಡಿಂಗ್, ಬ್ಯಾಟಿಂಗ್  ಪ್ರದರ್ಶಿಸಿ ತಂಡದ ಸೋಲಿಗೆ ಕಾರಣರಾದ ನಂತರ ಸಾಕಷ್ಟು ಟ್ರೋಲ್‌ಗೊಳಗಾಗಿದ್ದಾರೆ. ಇದು ಸಾಲದೆಂಬಂತೆ ಕೊಹ್ಲಿ ಅವರು ಕೆ.ಎಲ್‌.ರಾಹುಲ್‌ ಅವರು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಕ್ಕಾಗಿ ವೀಕ್ಷಕವಿವರಣೆ ನೀಡುತ್ತಿದ್ದ ಸುನೀಲ್ ಗವಾಸ್ಕರ್ ನೀಡಿದ ಒಂದು ಹೇಳಿಕೆಯಂತೂ  ಭಾರೀ ಗದ್ದಲವನ್ನೇ ಸೃಷ್ಟಿಸಿದೆ. ಗವಾಸ್ಕರ್‌ ಅವರ ಮಾತುಗಳು ಇದೀಗ ನೆಟ್ಟಿಗರ ಆಕ್ರೋಶಕ್ಕೂಗುರಿಯಾಗಿದ್ದು ಹಲವರು ಅವರನ್ನು ವೀಕ್ಷಕ ವಿವರಣೆಯಿಂದ ಹೊರಹಾಕಬೇಕೆಂದು ಆಗ್ರಹಿಸಿದ್ದಾರೆ.

ಈ ನಡುವೆ ವಿರಾಟ್‌ ಅವರ ನಿರ್ವಹಣೆಯಲ್ಲಿ ತಮ್ಮನ್ನೂ ಎಳೆದು ತಂದಿದ್ದಕ್ಕೆ ವಿರಾಟ್ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

‘‘ಮಿಸ್ಟರ್‌  ಗವಾಸ್ಕರ್ ನಿಮ್ಮ ಮಾತುಗಳು ಕೀಳು ಅಭಿರುಚಿಯಿಂದ ಕೂಡಿದೆ ಎಂಬುದು ವಾಸ್ತವ. ಆದರೆ ಪತಿಯ ಆಟದ ವಿಚಾರದಲ್ಲಿ ಪತ್ನಿಯ ಕುರಿತಂತೆ ಇಂತಹ ಹೇಳಿಕೆ ನೀಡಲು ನೀವೇಕೆ ಮನಸ್ಸು ಮಾಡಿದಿರಿ ಎಂದು ನೀವು ವಿವರಿಸಬೇಕೆಂದು ನಾನು ಬಯಸುತ್ತೇನೆ. ವೀಕ್ಷಕ ವಿವರಣೆ ವೇಳೆ ಹಲವು ವರ್ಷಗಳಿಂದ ನೀವು ಕ್ರಿಕೆಟಿಗರ ಖಾಸಗಿ ಬದುಕನ್ನು ಗೌರವಿಸಿದ್ದೀರಿ ಎಂದು ಭಾವಿಸಿದ್ದೇನೆ. ನೀವು ನನಗೂ, ನಮಗೂ ಅಷ್ಟೇ ಗೌರವ ತೋರಿಸಬೇಕೆಂದು ಅನಿಸುವುದಿಲ್ಲವೇ?,’’ ಎಂದು ಅನುಷ್ಕಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದಿದ್ದಾರೆ.

‘‘ನನ್ನ ಪತಿಯ ಗುರುವಾರದ ಪಂದ್ಯದಲ್ಲಿನ ನಿರ್ವಹಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ನಿಮ್ಮಲ್ಲಿ ಹಲವಾರು ಇತರ ಪದಗಳು ಹಾಗೂ ವಾಕ್ಯಗಳಿರಬಹುದೆಂದು ನನಗೆ ತಿಳಿದಿದೆ ಅಥವಾ ನೀವು ನಿಮ್ಮಅಭಿಪ್ರಾಯ ವ್ಯಕ್ತಪಡಿಸುವ ವೇಳೆ ನನ್ನ ಹೆಸರನ್ನು ಬಳಸಿದರೆ ಮಾತ್ರ ನಿಮ್ಮ ಮಾತುಗಳು ಪ್ರಸ್ತುತವಾಗುತ್ತವೆಯೇ? ಇದು 2020 ಆದರೂ ಯಾವುದೂ ನನಗೆ ಬದಲಾಗಿಲ್ಲ. ನನ್ನನ್ನು ಕ್ರಿಕೆಟ್‌ಗೆ ಎಳೆದು ತರುವುದು ಯಾವಾಗ ನಿಲ್ಲಲಿದೆ?,’’ ಎಂದು ಬರೆದಿರುವ ಅನುಷ್ಕಾ ತಮ್ಮ ಪೋಸ್ಟ್ ಅಂತ್ಯಗೊಳಿಸುತ್ತಾ ‘‘ಗೌರವಾನ್ವಿತ ಮಿಸ್ಟರ್ ‌ಗವಾಸ್ಕರ್ ನೀವೊಬ್ಬ ದಂತಕಥೆ, ನೀವು ಈಗಲೂ ಈ ಆಟದಲ್ಲಿ ಆಳೆತ್ತರಕ್ಕೆ ನಿಲ್ಲುತ್ತೀರಿ. ನೀವು ಇಂತಹ ಮಾತುಗಳನ್ನು ಹೇಳಿದಾಗ ನನಗನಿಸದ್ದನ್ನು ಹೇಳಬೇಕೆನಿಸಿತು ಅಷ್ಟೇ,’’ ಎಂದು ಬರೆದಿದ್ದಾರೆ.

ಟ್ರೆಂಡಿಂಗ್‌ ಆಗಿದ್ದ  ‘ಐ ಡ್ರಿಂಕ್‌ ಕಾಫಿ’ ಟ್ವೀಟ್ :

ಈ ವಿವಾದದ ನಡುವೆ ಅನುಷ್ಕಾ ಅವರು ಕಳೆದ ವರ್ಷ ಮಾಜಿ ಕ್ರಿಕೆಟಿಗ ಫಾರೂಕ್‌ ಇಂಜಿನಿಯರ್‌ ಅವರು ತಮ್ಮನ್ನು ಗುರಿಯಾಗಿಸಿ ‘‘ಅವರು(ಆಯ್ಕೆಗಾರರು) ಅನುಷ್ಕಾ ಶರ್ಮ ಅವರಿಗೆ ಚಹಾ ತರಿಸುವುದರಲ್ಲಿಯೇ ವ್ಯಸ್ತರಾಗಿದ್ದಾರೆ. ದಿಲೀಪ್ ವೆಂಗ್  ಸರ್ಕಾರ್‌ ಅವರಂತಹವರು ಆಯ್ಕೆ ಸಮಿತಿಯಲ್ಲಿರಬೇಕಿತ್ತು,’’ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ‘‘ನನ್ನ ಮೌನವನ್ನು ನನ್ನದೌರ್ಬಲ್ಯವೆಂದು ಪರಿಗಣಿಸಬೇಡಿ, ನಿಮ್ಮ ಗಮನಕ್ಕೆ ತರಲೆಂದು ನಾನು ಕುಡಿಯುವುದು ಕಾಫಿ.’’ ಎಂದು ಅನುಷ್ಕಾ ಉತ್ತರಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X