Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಕೊರೋನ ಆತಂಕಿತರಿಗೆ ಆತ್ಮಸ್ಥೈರ್ಯ ತುಂಬುವ...

ಕೊರೋನ ಆತಂಕಿತರಿಗೆ ಆತ್ಮಸ್ಥೈರ್ಯ ತುಂಬುವ ‘ಕೊರೋನ ಹೆದರದಿರೋಣ’

ಕಾರುಣ್ಯಾಕಾರುಣ್ಯಾ26 Sept 2020 12:10 AM IST
share
ಕೊರೋನ ಆತಂಕಿತರಿಗೆ ಆತ್ಮಸ್ಥೈರ್ಯ ತುಂಬುವ ‘ಕೊರೋನ ಹೆದರದಿರೋಣ’

ನಾಡಿನ ಜನತೆ ಕೊರೋನ ಸೋಂಕಿಗೆ ಬಲಿಯಾಗಿರುವುದಕ್ಕಿಂತ ಅದರ ವದಂತಿಗಳಿಗೆ ಬಲಿಯಾಗಿರುವುದೇ ಹೆಚ್ಚು. ಕೊರೋನದ ಕುರಿತಂತೆ ಜನರ ಮಾಹಿತಿ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಬೃಹತ್ ಆಸ್ಪತ್ರೆಗಳು, ರಾಜಕಾರಣಿಗಳು ಸಾಕಷ್ಟು ಲಾಭ ಮಾಡಿಕೊಂಡರು. ಹೇರಿದ ಲಾಕ್‌ಡೌನ್ ಅಂತೂ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿಯಾಗಿ ಜನರನ್ನು ಕಾಡಿತು. ಇಂತಹ ಸಂದರ್ಭದಲ್ಲಿ, ಕೊರೋನದ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಬಿತ್ತಿದವರಲ್ಲಿ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಮುಖರು.

ರಾಜಕಾರಣಿಗಳ ಬೇಜವಾಬ್ದಾರಿ, ವೈದ್ಯರ ಸ್ವಾರ್ಥ, ಜನರ ವೌಢ್ಯ ಮೊದಲಾದವುಗಳ ಬಗ್ಗೆ ಜಾಗೃತಿಯನ್ನು ಬಿತ್ತುತ್ತಾ ಬಂದರು. ಕೊರೋನ ಮಾರಣಾಂತಿಕ ಕಾಯಿಲೆಯೆಂದು ಸರಕಾರದ ನೇತೃತ್ವದಲ್ಲೇ ಪ್ರಚಾರ ನಡೆಯುತ್ತಿರುವಾಗ, ಅದು ಮಾರಣಾಂತಿಕ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ಈ ನಿಟ್ಟಿನಲ್ಲಿ ಅವರು ಬರೆದ ಲೇಖನಗಳ ಸಂಗ್ರಹವೂ ಪ್ರಕಟವಾಯಿತು. ‘ಕೊರೋನ ಹೆದರದಿರೋಣ’ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ ಮತ್ತು ಡಾ. ಬಾಲಸರಸ್ವತಿ ಪಣಂಬೂರು ಇವರು ಜೊತೆಯಾಗಿ ಬರೆದಿರುವ ಕೃತಿ. ಕೊರೋನದಿಂದ ದಾರಿಗೆಟ್ಟ ಜನರಿಗೆ ಈ ಕೃತಿ ದಾರಿ ದೀಪವಾಗಿದೆ.
  
ಈ ಕೃತಿಯಲ್ಲಿ ಒಟ್ಟು 18 ಲೇಖನಗಳಿವೆ. ಆರಂಭದಲ್ಲಿ ಫ್ಲೂ ಮತ್ತು ಕೊರೋನದ ನಡುವಿನ ನಂಟನ್ನು ಕೃತಿ ಪರಿಚಯಿಸುತ್ತದೆ. ಬಳಿಕ ಕೊರೋನ ಎಂದರೆ ಏನು ಎನ್ನುವುದನ್ನು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ದಕ್ಕುವಂತೆ ಲೇಖಕರು ವಿವರಿಸುತ್ತಾರೆ. ಕೊರೋನದ ಇತಿಹಾಸ, ವಿಶ್ವವ್ಯಾಪಿಯಾದ ಬಗೆ, ಕೊರೋನದ ರೋಗ ಲಕ್ಷಣಗಳು, ಈ ಸೋಂಕಿನ ಗಂಭೀರ ಪರಿಣಾಮಗಳು, ಸೋಂಕಿಗೆ ಸಂಬಂಧಿಸಿದ ಪರೀಕ್ಷೆ, ರೋಗ ಲಕ್ಷಣಗಳಿದ್ದರೆ ವೈದ್ಯರ ಸಹಾಯವೇ ಇಲ್ಲದೆ ನಿವಾರಿಸುವ ಬಗೆ, ಕೊರೋನ ಚಿಕಿತ್ಸೆಗೆ ಸರಕಾರದ ಮಾರ್ಗ ಸೂಚಿಗಳು ಮೊದಲಾದ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಇದೇ ಸಂದರ್ಭದಲ್ಲಿ ಕೊರೋನ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯಬಹುದೇ, ಬೇಡವೇ ಎನ್ನುವ ಪರವಿರೋಧಗಳನ್ನು ಮುಂದಿಟ್ಟು ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ.

ಹಿರಿಯರನ್ನು, ಅನ್ಯ ರೋಗಗಳುಳ್ಳವರನ್ನು ಕೊರೋನ ಸೋಂಕಿನಿಂದ ರಕ್ಷಿಸುವ ಬಗೆ, ಹೊಸ ಕೊರೋನ ಸೋಂಕಿಗೆ ಲಸಿಕೆಗಳು, ಹೊಸ ಕೊರೋನ ವೈರಸ್‌ನಿಂದ ಮುಕ್ತಿ ಸಾಧ್ಯವೇ?, ಮೃತರಾದವರ ಅಂತಿಮ ಸಂಸ್ಕಾರದ ಬಗೆ ಹೇಗೆ? ಎನ್ನುವ ಕುರಿತಂತೆ ಸಮಗ್ರ ವಿವರಗಳನ್ನು ಕೃತಿ ನೀಡುತ್ತದೆ. ಇದು ಬರೀ ವೈದ್ಯಕೀಯ ಮಾಹಿತಿಗಳುಳ್ಳ ಕೃತಿಯಲ್ಲ. ಒಂದು ರೋಗವನ್ನು ಮುಂದಿಟ್ಟು ಕೊಂಡು ನಡೆಯುತ್ತಿರುವ ರಾಜಕೀಯಗಳನ್ನೂ ಅವರು ಕೃತಿಯಲ್ಲಿ ಚರ್ಚಿಸುತ್ತಾರೆ. ರೋಗವನ್ನು ಗೆಲ್ಲುವ ಸಂದರ್ಭದಲ್ಲಿ ಎದುರಾಗುವ ಮಾನವೀಯ ಸವಾಲುಗಳನ್ನು ಎದುರಿಸುವ ಬಗೆಯನ್ನು ಲೇಖಕರು ವಿವರಿಸುತ್ತಾರೆ. ದೇಶದ ಆರೋಗ್ಯದ ಕುರಿತಂತೆ ಸರಕಾರ ತನ್ನ ಚಿಂತನೆಗಳನ್ನು ತಿದ್ದಿಕೊಳ್ಳುವುದಕ್ಕೆ ಕೃತಿ ಕರೆ ನೀಡುತ್ತದೆ.

‘ಸಾಂಕ್ರಾಮಿಕ ಕಾಯಿಲೆಗಳಂತಹ ಆಪತ್ಕಾಲದಲ್ಲಿ ಯಾವ ಉಪಯೋಗಕ್ಕೂ ಬಾರದ ಆಯುಷ್ ಪದ್ಧತಿಗಳ ಮೇಲೆ ಹಣವನ್ನು ವ್ಯಯಿಸುತ್ತಿರುವ ಬಗ್ಗೆ ಮರು ಚಿಂತನೆಯಾಗ ಬೇಕು’ ಎಂದು ಆಗ್ರಹಿಸುವ ಲೇಖಕರು, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಮಾಹಿತಿ, ಆರ್ಥಿಕ ಪ್ರಗತಿಗಳೆಲ್ಲವೂ ಎಷ್ಟೇ ಆಗಿರಲಿ, ಅವು ಮನುಷ್ಯರಲ್ಲಿ ಒಳ್ಳೆಯತನವನ್ನು, ಉಳಿದೆಲ್ಲದರ ಬಗ್ಗೆ ಸಹಾನುಭೂತಿಯನ್ನು, ವೈಜ್ಞಾನಿಕ ಮನೋವೃತ್ತಿಯನ್ನು, ನಿತ್ಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯ ವಿವೇಚನೆಗಳಿಂದ ಎದುರಿಸುವ ಸಾಮರ್ಥ್ಯವನ್ನು ಉಂಟು ಮಾಡುವ ಖಾತರಿಯಿಲ್ಲ ಎನ್ನುವುದಕ್ಕೆ ಹೊಸ ಕೊರೋನ ಸೋಂಕು ಅತ್ಯುತ್ತಮ ನಿದರ್ಶನವಾಗಿದೆ ಎಂದು ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ. ಕೊರೋನ ಸೋಂಕಿನ ವಿವಿಧ ಆಯಾಮಗಳನ್ನು ತೆರೆದಿಡುವ ಈ ಕೃತಿ, ಕೊರೋನ ಆತಂಕ ಕಾಲದಲ್ಲಿ ಜನರ ಪಾಲಿಗೆ ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ.

ನವ ಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 152. ಮುಖಬೆಲೆ 150 ರೂಪಾಯಿ. ಆಸಕ್ತರು 080- 22161900 ದೂರವಾಣಿಯನ್ನು ಸಂಪರ್ಕಿಸಬಹುದು.

-ಕಾರುಣ್ಯ

share
ಕಾರುಣ್ಯಾ
ಕಾರುಣ್ಯಾ
Next Story
X