Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಹೇಮೆಯ ಮಡಿಲ ಮಾತುಗಳು

ಹೇಮೆಯ ಮಡಿಲ ಮಾತುಗಳು

ಎಸ್. ಲಲಿತ, ಸಕಲೇಶಪುರಎಸ್. ಲಲಿತ, ಸಕಲೇಶಪುರ27 Sept 2020 12:10 AM IST
share
ಹೇಮೆಯ ಮಡಿಲ ಮಾತುಗಳು

‘ಹೇಮೆಯ ಮಡಿಲಲ್ಲಿ’ ಗೊರೂರು ಅನಂತರಾಜು ಅವರ ಲೇಖನಿಯಿಂದ ಹೊರಹೊಮ್ಮಿದ ಲೇಖನಗಳ ಒಂದು ಗುಚ್ಛವಾಗಿದೆ. ಇವುಗಳಲ್ಲಿ ಕೆಲವು ಆಯಾ ಸಂದರ್ಭಕ್ಕೆ ಅನುಗುಣವಾಗಿ ಬರೆದು ಪ್ರಸ್ತುತಪಡಿಸಿದವುಗಳಾದರೆ ಮತ್ತೆ ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳಾಗಿವೆ. ಹೇಮೆಯ ತೀರದ ಒಂದು ಪುಟ್ಟ ಊರಾದ ಗೊರೂರಿನಲ್ಲಿ ಹುಟ್ಟಿದ ಲೇಖಕ ಗೊರೂರು ಅನಂತರಾಜುರವರಿಗೆ ತಾವು ಪ್ರಸಿದ್ಧ ಸಾಹಿತಿ ಡಾ.ರಾಮಸ್ವಾಮಿ ಅಯ್ಯಂಗಾರರ ಊರಿನವರು ಎಂಬ ಹೆಮ್ಮೆ ಇದೆ. ಈ ಹೆಮ್ಮೆಯ ಜೊತೆಗೆ ಹೇಮಾವತಿಯೂ ಇವರ ಮನದ ಮೇಲೆ ಪ್ರಭಾವ ಬೀರಿದ್ದಾಳೆ. ಇದು ಸಹಜವೂ ಆಗಿದೆ. ಎಲ್ಲರ ಮನವನ್ನೂ ಪ್ರಭಾವಗೊಳಿಸುವ ಶಕ್ತಿ ನೆಲ, ಜಲ ಮತ್ತು ಭಾಷೆಗಳಿಗಿದೆ. ಅದರೊಂದಿಗೆ ಮಾನವಸಹಜ ಸ್ವಭಾವವಾದ ನಮ್ಮ ನೆಲ, ನಮ್ಮ ನುಡಿ, ನಮ್ಮ ನೆಲದ ಕವಿಗಳು, ನಮ್ಮ ನೆಲದ ಸಾಹಿತಿಗಳು, ನಮ್ಮೂರಿನ ದೇವಾಲಯಗಳು, ನಮ್ಮ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು...ಹೀಗೆ ಪಟ್ಟಿ ಮನದಲ್ಲಿ ಸಾಗುತ್ತಲೇ ಇರುವಾಗ ಬರಹದ ಮೂಲಕ ಮನದ ತುಡಿತವನ್ನು ಹೊರಹಾಕುವ ಭಾವುಕ ಮನಸ್ಸುಗಳಿಗೆ ಲೇಖನಿ ಹಿಡಿಯದಿರಲಾದೀತೇ? ರಸಋಷಿ ಕುವೆಂಪು ಅವರಿಗೆ ಕುಪ್ಪಳ್ಳಿಯ ನಿಸರ್ಗ ಕಾಡಿದಂತೆ, ಗೊರೂರು ಅನಂತರಾಜು ಅವರನ್ನು ಹಾಸನದ ನೆಲ ಜಲಗಳು ಆವರಿಸಿವೆ. ಅದರ ಪರಿಣಾಮವಾಗಿ ಮೂಲತಃ ಅವರು ನಾಟಕಗಳ ವಿಮರ್ಶಕರಾದರೂ ಲೇಖನಗಳನ್ನು ಬರೆಯುವತ್ತ ಮನಸ್ಸು ಮಾಡಿರುವುದು ಸಹಜವೇ ಆಗಿದೆ. ಹಾಸನ, ಹಾಸನಾಂಬ, ಹೇಮಾವತಿ, ಹೊಯ್ಸಳ..ಹೀಗೆ ಹಾಸನ ಜಿಲ್ಲೆಯ ಸಾಮಾನ್ಯ ಜನರ ಮಾತಿನಲ್ಲಿ ನಿತ್ಯ ನುಸುಳುವ ಪದಗಳು, ಜಿಲ್ಲೆಯ ಲೇಖಕ-ಲೇಖಕಿಯರ ಮನಗಳನ್ನು ತಟ್ಟಿ ಬಡಿದೆಬ್ಬಿಸಿ..ಆಹಾ! ನಮ್ಮ ಹಾಸನ ಜಿಲ್ಲೆ..! ಎನ್ನುವಂತೆ ಮಾಡಿವೆ. ಇದು ಅಚ್ಚರಿಯ ವಿಷಯವೇನಲ್ಲ.

ಈ ‘ಹೇಮೆಯ ಮಡಿಲಲ್ಲಿ’ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ. ಮೊದಲ ಲೇಖನವೇ ‘ಹೇಮೆಯ ಮಡಿಲಲ್ಲಿ’ ಎನ್ನುವುದಾಗಿದೆ. ಈ ಲೇಖನದಲ್ಲಿ ಲೇಖಕರು ಓದುಗರಿಗೆ ಗೊರೂರಿನ ಪರಿಚಯ ಮಾಡಿಸುವ ಜೊತೆ ಜೊತೆಗೆ ಅಲ್ಲಿನ ಹೇಮಾವತಿ ಅಣೆಕಟ್ಟಿನ ವಿಸ್ತೃತ ವಿವರಣೆಯನ್ನೂ ನೀಡಿದ್ದಾರೆ. ಮುಂದಿನ ಲೇಖನದಲ್ಲಿ ಹಾಸನ ಜಿಲ್ಲೆಯ ವಿಶೇಷತೆಗಳನ್ನು ಇತರ ವಿದ್ವಾಂಸರು ಕಂಡಂತೆ ಮತ್ತು ಹಾಸನದ ಜಾನಪದ ಕಲೆಗಳನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಿ ಅದಕ್ಕಾಗಿ ಡಾ.ಹಂಪನಹಳ್ಳಿ ತಿಮ್ಮೇಗೌಡರ ಪ್ರೌಢಪ್ರಬಂಧದ ನೆರವನ್ನು ಪಡೆದುದು ಮಾತ್ರವಲ್ಲದೆ ಇತರ ಅನೇಕ ಜಾನಪದ ಲೇಖಕರ ಕೃತಿಗಳನ್ನೂ ಓದಿ ಅದರಲ್ಲಿನ ಸಾರವನ್ನು ಓದುಗರ ಎದುರು ತೆರೆದಿಟ್ಟಿದ್ದಾರೆ. ‘ಹೊಯ್ಸಳ ಕಾಲದ ಸಾಹಿತ್ಯ’ ಎನ್ನುವ ಲೇಖನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹಾಸನ ಜಿಲ್ಲೆಯ ಕೊಡುಗೆಯನ್ನು ತಿಳಿಸುತ್ತ, ಅಂದಿನ ಕಾಲದ ಶಾಸನಗಳಲ್ಲಿನ ವಿಷಯಗಳು, ಆ ಸಮಯದಲ್ಲಿದ್ದ ಕವಿಗಳು, ಕೃತಿಕಾರರು, ಅವರ ಕೃತಿಗಳು, ಕೃತಿಗಳಲ್ಲಿನ ಕೆಲವು ಸಾಲುಗಳನ್ನೂ ಬರೆಯುವುದರ ಮೂಲಕ ಅಂದಿನ ಕಾಲಘಟ್ಟಕ್ಕೆ ಓದುಗರ ಮನಸ್ಸನ್ನು ಸರಿಸಿದ್ದಾರೆ.

‘ಶಿಲ್ಪಕಲೆಯ ನಾಡಿನಲ್ಲಿ’-ಶೀರ್ಷಿಕೆಯ ಲೇಖನದಲ್ಲಿ ಲೇಖಕರು ಕಾವೇರಿ ಮತ್ತು ಹೇಮಾವತಿ ನದಿಗಳ ಉಗಮ, ಹರಿವು ಮುಂತಾದ ವಿಷಯಗಳನ್ನು ತಿಳಿಸುತ್ತಲೇ ನದಿ ದಡದಲ್ಲಿರುವ ಊರುಗಳ ಮತ್ತು ಅಲ್ಲಿರುವ ಪ್ರಸಿದ್ಧ ದೇವಾಲಯಗಳ ಬಗೆಗೆ ತಿಳಿಸುತ್ತ, ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹ್ಯ, ವಿಶೇಷತೆ, ಧಾರ್ಮಿಕ ಮಹತ್ವ, ಉತ್ಸವ ಇನ್ನಿತರ ಆಚರಣೆಗಳ ಬಗೆಗೆ ಬೆಳಕು ಚೆಲ್ಲಿದ್ದಾರೆ. ದೇಜಗೌ ಅವರ ‘ನೆನಪಿನಾಳದಲ್ಲಿ ನಿಂದವರು’ ಎನ್ನುವ ಕೃತಿಯಲ್ಲಿ ಬರುವ ವ್ಯಕ್ತಿಗಳನ್ನು ಕುರಿತಾದ ವ್ಯಕ್ತಿಚಿತ್ರಗಳ ಜೊತೆಗೆ ಕನ್ನಡ ಚಿತ್ರರಂಗದ ಅನುಪಮ ಗಾಯಕಿ ಶ್ರೀಮತಿ ಎಸ್.ಜಾನಕಿ ಅವರನ್ನು ಕುರಿತಾದ ಲೇಖನವನ್ನೂ ಬರೆದಿದ್ದಾರೆ. ಕನಕದಾಸರು, ಬೇಲೂರು ವೈಕುಂಠದಾಸರು ಮತ್ತು ಕೆಲ್ಲಂಗೆರೆ ತಿಮ್ಮಪ್ಪದಾಸರನ್ನು ಕುರಿತು ಬರೆಯುತ್ತ, ದಾಸಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಕೃತಿಗಳ ಕೆಲವು ಸಾಲುಗಳನ್ನು ಉಲ್ಲೇಖಿಸುವುದರ ಮೂಲಕ ಓದುಗರಲ್ಲಿ ಕುತೂಹಲವನ್ನುಂಟು ಮಾಡುತ್ತಾರೆ.

ಪರಿಸರವನ್ನು ಕುರಿತು ಯೋಚಿಸುತ್ತಿದ್ದಂತೆ ಅದಕ್ಕೆ ಪೂರಕವಾಗಿ ಅತಿವೃಷ್ಟಿಯಿಂದಾದ ಅನಾಹುತಗಳ ದೃಶ್ಯಗಳನ್ನು ದೂರದರ್ಶನದಲ್ಲಿ ವೀಕ್ಷಿಸುವ ಸಮಯದಲ್ಲಿ ನೋಡಿದ ಶಿವನ ಪ್ರತಿಮೆಯಿಂದ ಪ್ರಭಾವಿತರಾಗಿ ಬರೆದ ಭಗೀರಥನ ಕಥೆಯಲ್ಲಿ ಗಂಗಾನದಿಯ ಐತಿಹ್ಯ ಮತ್ತು ಮಹತ್ವಗಳನ್ನು ವಿವರಿಸುವ ಜೊತೆಗೆ ಯಮುನೆ, ಸರಯೂ, ಹಿಮಾಲಯ, ಬದರಿ, ಅಮರನಾಥಗಳ ಬಗೆಗೂ ತಿಳಿಸಿರುವುದು ಲೇಖನಕ್ಕೆ ಹೆಚ್ಚಿನ ಮೆರುಗನ್ನು ನೀಡಿದೆ. ‘ಹೊಯ್ಸಳ ಚಿತ್ರಕ್ಕೆ ರಿಯಲ್ ಹುಲಿ’ ಲೇಖನದಲ್ಲಿ ಲೇಖಕ ಗೊರೂರು ಅನಂತರಾಜು ಹೊಯ್ಸಳ ಚಿತ್ರದ ಚಿತ್ರೀಕರಣದ ಪ್ರಸಂಗವನ್ನು ವರ್ಣಿಸುತ್ತ, ಬೆಳ್ಳಿತೆರೆಯ ಹಿಂದಿರುವ ಸಂಕಷ್ಟಗಳು ಮತ್ತು ಕಲಾವಿದರು ಹಾಗೂ ತಂತ್ರಜ್ಞರು ಎದುರಿಸಬೇಕಾದ ಪಡಿಪಾಟಲುಗಳನ್ನು ಕುರಿತು ಬರೆದಿದ್ದಾರೆ.

ಇನ್ನುಳಿದಂತೆ ಜನಪದ ಹಾಡು, ಜನಪದ ಸಾಹಿತ್ಯ, ಸಮಾಜವನ್ನು ಕಾಡುವ ವರ್ಗಭೇದ ಹಾಗೂ ಜಾತಿವ್ಯವಸ್ಥೆ, ದಮನಿತರ ಸ್ಥಿತಿಗತಿ ಮುಂತಾದ ವಿಷಯಗಳನ್ನು ಕುರಿತಾದ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚುವಂತಿವೆ.

share
ಎಸ್. ಲಲಿತ, ಸಕಲೇಶಪುರ
ಎಸ್. ಲಲಿತ, ಸಕಲೇಶಪುರ
Next Story
X