ನಿವೃತ್ತ ತಹಶೀಲ್ದಾರ್ ಮನೆ, ಕಚೇರಿಗೆ ಎಸಿಬಿ ದಾಳಿ
![ನಿವೃತ್ತ ತಹಶೀಲ್ದಾರ್ ಮನೆ, ಕಚೇರಿಗೆ ಎಸಿಬಿ ದಾಳಿ ನಿವೃತ್ತ ತಹಶೀಲ್ದಾರ್ ಮನೆ, ಕಚೇರಿಗೆ ಎಸಿಬಿ ದಾಳಿ](https://www.varthabharati.in/sites/default/files/images/articles/2020/09/30/261414-1601486083.jpg)
ಬೆಂಗಳೂರು, ಸೆ.30: ಸರಕಾರಿ ಜಮೀನು ಖಾತೆ ಬದಲಾವಣೆ ಆರೋಪ ಸಂಬಂಧ ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ನಿವೃತ ತಹಶೀಲ್ದಾರ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.
ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ ಗ್ರಾಮದ ಸರ್ವೇ ನಂ.184ರಲ್ಲಿ 4 ಎಕರೆ ಸರಕಾರಿ ಜಮೀನಿನ ಖಾತೆ ಬದಲಾವಣೆ ಮಾಡಿ, ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಡಿ ದಾಖಲಾಗಿದ್ದ ಎಫ್ಐಆರ್ ಸಂಬಂಧ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story