ಆ ಚಿಂತಕ!
![ಆ ಚಿಂತಕ! ಆ ಚಿಂತಕ!](https://www.varthabharati.in/sites/default/files/images/articles/2020/10/3/261712-1601667001.gif)
ಮೊದಲು ಆ ಚಿಂತಕನನ್ನು ಕೊಲ್ಲಲಾಯಿತು. ಬಳಿಕ ಆತನ ಕೃತಿಗಳನ್ನು ಹಂತಹಂತವಾಗಿ ನಾಶ ಮಾಡಲಾಯಿತು.
ಅನಂತರ ಆ ಚಿಂತಕನ ಕುರಿತಂತೆ ಮಾತನಾಡುವವರ ನಾಲಗೆಗಳನ್ನು ಕತ್ತರಿಸಲಾಯಿತು.
ಹಲವರನ್ನು ಜೈಲಿಗೆ ತಳ್ಳಿ ಶಾಶ್ವತವಾಗಿ ದಫನಮಾಡಲಾಯಿತು.
ಚಿಂತಕನ ವಿಚಾರಗಳನ್ನು ಬೇರು ಸಹಿತ ಕಿತ್ತು ಹಾಕಲಾಯಿತು.
ಎಲ್ಲ ಆದ ಬಳಿಕ....
ಆ ಚಿಂತಕನ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಯಿತು. ಆ ಚಿಂತಕನ ಪ್ರತಿಮೆಯ ಅಡಿಯಲ್ಲಿ ಬೃಹತ್ ಜಾತ್ರೆಗೆ ಸರಕಾರ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿತು. ಚಿಂತಕನ ಅನುಯಾಯಿಗಳೆಲ್ಲ ಈಗ ಸಂಭ್ರಮಿಸಿದರು. ಸರಕಾರಕ್ಕೆ ಚಿಂತಕನ ಮೇಲಿರುವ ಪ್ರೀತಿಯನ್ನು ಕೊಂಡಾಡಿದರು.
Next Story