Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮಾಹಿತಿ - ಮಾರ್ಗದರ್ಶನ
  3. ಭೀಮ್ ಯುಪಿಐ ಬಳಕೆದಾರರು ತಮ್ಮ...

ಭೀಮ್ ಯುಪಿಐ ಬಳಕೆದಾರರು ತಮ್ಮ ದೂರುಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ2 Oct 2020 11:50 PM IST
share
ಭೀಮ್ ಯುಪಿಐ ಬಳಕೆದಾರರು ತಮ್ಮ ದೂರುಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಹೇಗೆ?

ಹಣ ಪಾವತಿಯ ವಿಧಾನವಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಬಳಕೆಯು ಕಳೆದೆರಡು ವರ್ಷಗಳಲ್ಲಿ ಹೆಚ್ಚಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಬಳಿಕ ಯುಪಿಐ ಬಳಕೆಯು ಇನ್ನಷ್ಟು ವ್ಯಾಪಕಗೊಂಡಿದ್ದು,ಹೆಚ್ಚೆಚ್ಚು ಜನರು ಸಂಪರ್ಕರಹಿತ ಹಣಪಾವತಿ ವಿಧಾನಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ 1.62 ಶತಕೋಟಿಗಳಷ್ಟು ದಾಖಲೆಯ ಸಂಖ್ಯೆಯಲ್ಲಿ ಯುಪಿಎ ವಹಿವಾಟುಗಳು ನಡೆದಿವೆ. ಕಳೆದ ವರ್ಷದ ಆಗಸ್ಟ್‌ನಲ್ಲಿಯ 1.54 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಆಗಸ್ಟ್‌ನಲ್ಲಿ 2.98 ಲ.ಕೋ.ರೂ.ಗಳ ವಹಿವಾಟುಗಳು ನಡೆದಿವೆ.

ಗೂಗಲ್ ಪೇ,ಫೋನ್‌ಪೆ,ಅಮೆಝಾನ್ ಪೇ,ಭಾರತ ಇಂಟರ್‌ಫೇಸ್ ಫಾರ್ ಮನಿ (ಭೀಮ್) ಇತ್ಯಾದಿಗಳು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಯುಪಿಐ ಆಧಾರಿತ ಮೊಬೈಲ್ ಆ್ಯಪ್‌ಗಳಾಗಿವೆ. ತಕ್ಷಣ ಹಣ ರವಾನೆಗೆ ಮತ್ತು ಬ್ಯಾಂಕ್‌ಖಾತೆಯಲ್ಲಿ ನೇರವಾಗಿ ಹಣ ಸ್ವೀಕೃತಿಗೆ ಬಳಕೆಯಾಗುವ ಜೊತೆಗೆ ವಿದ್ಯುತ್ ಬಿಲ್ ಪಾವತಿ,ಎಲ್‌ಪಿಜಿ ಬುಕ್ಕಿಂಗ್ ಮತ್ತು ಸಿಲಿಂಡರ್ ರಿಫಿಲ್‌ಗಳಿಗೆ ಹಣಪಾವತಿ,ಮೊಬೈಲ್ ರಿಚಾರ್ಜ್ ಇತ್ಯಾದಿಗಳಿಗೆ ಅನುಕೂಲ ಕಲ್ಪಿಸಿರುವುದರಿಂದ ಈ ಆ್ಯಪ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಯುಪಿಐ ಆಧಾರಿತ ಹಣಪಾವತಿಗಳು ಹೆಚ್ಚುವುದರೊಂದಿಗೆ ಸಂಕೀರ್ಣತೆಗಳೂ ಹೆಚ್ಚಾಗಿವೆ ಮತ್ತು ವಹಿವಾಟುಗಳು ತಪ್ಪು ಆಗಲೂಬಹುದು. ನೀವು ಭೀಮ್ ಆ್ಯಪ್ ಬಳಕೆದಾರರಾಗಿದ್ದರೆ ವಹಿವಾಟಿಗೆ ಸಂಬಂಧಿಸಿದ ಆನ್‌ಲೈನ್ ದೂರನ್ನು ಹೇಗೆ ಸಲ್ಲಿಸಬಹುದು ಎಂಬ ಮಾಹಿತಿಯಿಲ್ಲಿದೆ.

ಆ್ಯಪ್ ಪೇಜ್‌ನ ಮೇಲ್ಗಡೆಯ ಬಲಮೂಲೆಯಲ್ಲಿರುವ ಮೂರು ಗೆರೆಗಳನ್ನು ಸ್ಪರ್ಶಿಸಿದರೆ ನಿಮ್ಮೆದುರು ಪರ್ಯಾಯ ಆಯ್ಕೆಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. ಈ ಪಟ್ಟಿಯಲ್ಲಿ ‘ರೈಸ್ ಕಂಪ್ಲೇಂಟ್ ’ನ್ನು ಆಯ್ಕೆ ಮಾಡಿಕೊಳ್ಳಿ. ಈಗ ತೆರೆದುಕೊಳ್ಳುವ ಹೊಸ ಪೇಜ್ ಆ್ಯಪ್‌ನಲ್ಲಿ ನಿಮ್ಮ ಎಲ್ಲ ವಹಿವಾಟುಗಳನ್ನು ತೆರೆದಿಡುತ್ತದೆ ಮತ್ತು ನೀವು ಯಾವ ವಹಿವಾಟಿನ ಬಗ್ಗೆ ದೂರು ಸಲ್ಲಿಸಲು ಬಯಸಿದ್ದೀರೊ ಅದನ್ನು ಆಯ್ಕೆ ಮಾಡಿಕೊಳ್ಳಿ. ಸದ್ರಿ ವಹಿವಾಟಿನ ಮೇಲೆ ಟ್ಯಾಪ್ ಮಾಡಿದಾಗ ಆ್ಯಪ್ ಆ ವಹಿವಾಟಿನ ವಿವರಗಳನ್ನು ಒದಗಿಸುತ್ತದೆ. ಈಗ ಕೊನೆಯವರೆಗೆ ಸ್ಕ್ರೋಲ್ ಡೌನ್ ಮಾಡಿದರೆ ‘ಕಾಲ್ ಬ್ಯಾಂಕ್ ’ ಮತ್ತು ‘ರೈಸ್ ಕನ್ಸರ್ನ್ ’ ಎಂಬ ಎರಡು ಆಯ್ಕೆಗಳು ಕಂಡುಬರುತ್ತವೆ. ‘ರೈಸ್ ಕನ್ಸರ್ನ್ ’ಮೇಲೆ ಟ್ಯಾಪ್ ಮಾಡಿ ಅಲ್ಲಿ ಒದಗಿಸಿರುವ ಜಾಗದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ಉಲ್ಲೇಖಿಸಿ ಸಬ್‌ಮಿಟ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡಬೇಕಿದ್ದರೆ ‘ಕಾಲ್ ಬ್ಯಾಂಕ್ ’ನ್ನು ಆಯ್ಕೆ ಮಾಡಿಕೊಳ್ಳಿ. ಪರ್ಯಾಯವಾಗಿ ನೀವು ಶುಲ್ಕರಹಿತ ಸಂಖ್ಯೆ 1800 1201 740ಕ್ಕೆ ಕರೆ ಮಾಡಬಹುದು ಅಥವಾ   https://bhimupi.org.in/get-touch ಗೆ ಭೇಟಿ ನೀಡಿ.

‘ಗೆಟ್ ಇನ್ ಟಚ್ ’ ಭೀಮ್ ಆ್ಯಪ್ ಬಳಕೆದಾರರು ಲಾಗಿನ್,ನೋಂದಣಿ,ವಹಿವಾಟು,ಕ್ಯಾಷ್ ಬ್ಯಾಕ್,ಪಿನ್ ಸೆಟಿಂಗ್,ಹಣ ಸ್ವೀಕೃತಿ, ಹಣ ರವಾನೆ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾದ ಕಸ್ಟಮರ್ ಕೇರ್ ಪ್ಲಾಟ್‌ಫಾರ್ಮ್ ಆಗಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಇ-ಫಾರ್ಮ್‌ಗಳನ್ನು ತುಂಬುವ ಮೂಲಕ ಬಳಕೆದಾರರು ದೂರುಗಳನ್ನು ಸಲ್ಲಿಸಬಹುದು. ನೀವು ಭೀಮ್ ಸೇವೆಯ ಬಗ್ಗೆ ಮರುಮಾಹಿತಿಗಳನ್ನೂ ಒದಗಿಸಬಹುದು ಅಥವಾ ‘ಕ್ವೈರಿ’ ವಿಭಾಗಕ್ಕೆ ಭೇಟಿ ನೀಡಬಹುದು. ಈ ವಿಭಾಗವು ಆ್ಯಪ್ ಮತ್ತು ಅದರ ಬಳಕೆಗೆ ಸಂಬಂಧಿಸಿದಂತೆ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ಒಳಗೊಂಡಿರುತ್ತದೆ. ಇನ್‌ಸ್ಟಂಟ್ ಚಾಟ್ ಕ್ವೈರಿಗಳಿಗಾಗಿ ಈ ಪೇಜ್‌ನಲ್ಲಿ ‘ಪಿಎಐ ’ ಎಂಬ ಚಾಟ್ ಬಾಟ್ ಕೂಡ ಇದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X