ಆನೆ ದಂತ, ನಾಡ ಬಂದೂಕು ಮಾರಾಟ: ಆರೋಪಿ ಸೆರೆ
![ಆನೆ ದಂತ, ನಾಡ ಬಂದೂಕು ಮಾರಾಟ: ಆರೋಪಿ ಸೆರೆ ಆನೆ ದಂತ, ನಾಡ ಬಂದೂಕು ಮಾರಾಟ: ಆರೋಪಿ ಸೆರೆ](https://www.varthabharati.in/sites/default/files/images/articles/2020/10/4/261907-1601815060.jpg)
ಬೆಂಗಳೂರು, ಅ.4: ಕಾನೂನು ಬಾಹಿರವಾಗಿ ವನ್ಯ ಜೀವಿಗಳಾದ ಜಿಂಕೆಯ ಕೊಂಬು, ಆನೆ ದಂತ ಮತ್ತು ನಾಡ ಬಂದೂಕು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಸಿ.ಕೆ. ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಮೂಲದ ಮಲ್ಲೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಮ್ಮ ದೇವಸ್ಥಾನದ ಬಳಿ ಗೋಣಿ ಚೀಲದಲ್ಲಿ ಜಿಂಕೆ ಕೊಂಬು, ಆನೆ ದಂತ ಮತ್ತು ನಾಡ ಬಂದೂಕನ್ನ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಮಲ್ಲೇಶ್ ತನ್ನ ಮನೆಯಲ್ಲಿದ್ದ ನಾಡ ಬಂದೂಕಿನಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ. ಈಗಾಗಲೇ ಒಂದು ಕೊಂಬನ್ನು ಮಾಡಿ, ಉಳಿದ 5 ಕೊಂಬುಗಳನ್ನು ಮಾರಾಟಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story