ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದ ರಜನಿಕಾಂತ್
ತಾನು ಹೈಕೋರ್ಟ್ ಮೆಟ್ಟಿಲೇರಿದ್ದು ತಪ್ಪು ಎಂದ ಸೂಪರ್ ಸ್ಟಾರ್
ಚೆನ್ನೈ : ನಟ ರಜನಿಕಾಂತ್ ತನ್ನ ಮಾಲೀಕತ್ವದ ಮದುವೆ ಹಾಲ್ಗೆ ಸಂಬಂಧಿಸಿದ ಆಸ್ತಿ ತೆರಿಗೆ ವಿಚಾರ ಇತ್ಯರ್ಥ ಪಡಿಸಲು ಚೆನ್ನೈ ಮಹಾನಗರಪಾಲಿಕೆ ಬದಲಿಗೆ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದು ತಪ್ಪು. ಈ ಅನುಭವವು ನನಗೆ ಪಾಠ ಕಲಿಸಿದೆ.ನಾನು ಸಂಪೂರ್ಣ ಆಸ್ತಿ ತೆರಿಗೆಯನ್ನು ಪಾವತಿಸಿದ್ದೇನೆ ಎಂದು ಗುರುವಾರ ಹೇಳಿದ್ದಾರೆ.
ತನ್ನ ಮಾಲೀಕತ್ವದ ಮದುವೆ ಹಾಲ್ಗೆ ಅಧಿಕಾರಿಗಳು 6.5ಲಕ್ಷ ರೂ. ಆಸ್ತಿ ತೆರಿಗೆಗೆ ದಂಡ ವಿಧಿಸುವುದನ್ನು ತಡೆ ಹೇರುವಂತೆ ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿರುವ ತನ್ನ ಅರ್ಜಿಯನ್ನು ಹಿಂಪಡೆದ ಮರುದಿನ ರಜನಿಕಾಂತ್ ಈ ಹೇಳಿಕೆ ನೀಡಿದ್ದಾರೆ. ನೀವು ಹೈಕೋರ್ಟ್ಗೆ ಸಂಪರ್ಕಿಸುವ ಮೊದಲು ಮಹಾನಗರ ಪಾಲಿಕೆಗೆ ಜ್ಞಾಪನಾ ಪತ್ರ ನೀಡಬೇಕಾಗಿತ್ತು ಎಂದು ಹೈಕೋರ್ಟ್ ಹೇಳಿದೆ.
Next Story