Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತಣ್ಣೀರುಬಾವಿ ಬೀಚ್ ಸ್ವಚ್ಛತೆ : ‘ಬೀಚ್...

ತಣ್ಣೀರುಬಾವಿ ಬೀಚ್ ಸ್ವಚ್ಛತೆ : ‘ಬೀಚ್ ರಿಜುವೇಶನ್ ಆರ್ಮಿ’ಗೆ ಜನರಿಂದ ಸ್ಪಂದನೆ

ವಾರ್ತಾಭಾರತಿವಾರ್ತಾಭಾರತಿ18 Oct 2020 7:58 PM IST
share
ತಣ್ಣೀರುಬಾವಿ ಬೀಚ್ ಸ್ವಚ್ಛತೆ : ‘ಬೀಚ್ ರಿಜುವೇಶನ್ ಆರ್ಮಿ’ಗೆ ಜನರಿಂದ ಸ್ಪಂದನೆ

ಮಂಗಳೂರು, ಅ.18: ಕಳೆದ ನಾಲ್ಕು ವಾರದಿಂದ ನಡೆಯುತ್ತಿರುವ ತಣ್ಣೀರುಬಾವಿ ಬೀಚ್ ಸ್ವಚ್ಛತಾ ಕಾರ್ಯಕ್ಕೆ ರವಿವಾರ ಉತ್ತಮ ಸ್ಪಂದನೆ ದೊರತಿದೆ. ‘ಬೀಚ್ ರಿಜುವೇಶನ್ ಆರ್ಮಿ’ ಎಂಬ ಹೆಸರಿನ ಈ ಶುಚಿತ್ವ ಶ್ರಮದಾನಕ್ಕೆ ರವಿವಾರ 200ಕ್ಕೂ ಅಧಿಕ ಮಂದಿ ಪಾಲ್ಗೊಂಡು ಸಮುದ್ರ ಕಿನಾರೆಯ ತ್ಯಾಜ್ಯ ಹೆಕ್ಕುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆದರು.

ಯಾವುದೇ ಅಧಿಕೃತ ಆಹ್ವಾನವಿಲ್ಲ. ಸಂಘಟನೆಯ ಕರೆಯೂ ಇಲ್ಲ. ಮಂಗಳೂರಿನ ಮುಹಮ್ಮದ್ ಸಫಕ್ ಎಂಬವರು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಾಕಿದ ವೀಡಿಯೋವೊಂದು ಈ ಸ್ವಚ್ಛತಾ ಕಾರ್ಯಕ್ಕೆ ವೇಗ ಪಡೆಯಲು ಕಾರಣವಾಗಿದೆ. ರವಿವಾರ ಮುಂಜಾನೆ 6:30ರಿಂದ 9:30ರವರೆಗೆ ಸ್ವಇಚ್ಛೆಯಿಂದ ಪಾಲ್ಗೊಂಡ ಯುವಜನತೆ ಅದರಲ್ಲೂ ಅಧಿಕ ಸಂಖ್ಯೆಯಲ್ಲಿದ್ದ ಯುವತಿಯರೇ ಒಂದು ಕಿ.ಮೀ. ತನಕದ ಕಸ ಹೆಕ್ಕಿ ರಾಶಿ ಹಾಕಿದರು.

ಕೇರಳದ ಕೊಲ್ಲಂನಿಂದ ಬಂದಿದ್ದ ಮಾಡೆಲ್ ಮತ್ತು ಫಿಟ್ನೆಸ್ ಟ್ರೈನರ್ ದಾಮೋದರ್ ಎಂಬವರು ಸೆ.20ರಂದು ತನ್ನ ಸಂಬಂಧಿಕ ಗಣೇಶ್ ನಾಯಕ್ ಜೊತೆ ತಣ್ಣೀರುಬಾವಿ ಬೀಚ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಗಾಜಿನ ಚೂರೊಂದು ತಾಗಿತ್ತು. ತಕ್ಷಣ ದಾಮೋದರ್ ಆ ಗಾಜಿನ ಚೂರನ್ನು ಹೆಕ್ಕಿದರೂ ಅಲ್ಲಲ್ಲಿ ತ್ಯಾಜ್ಯದ ರಾಶಿಯು ಕಾಣಲು ಸಿಕ್ಕಿತು. ಅದರಲ್ಲೂ ಸಿರಿಂಜ್ ಅಧಿಕ ಸಂಖ್ಯೆಯಲ್ಲಿತ್ತು. ಇದನ್ನು ಕಂಡು ಗಣೇಶ್ ನಾಯಕ್ ಮತ್ತು ದಾಮೋದರ್ ವಾಕಿಂಗ್ ಸ್ಥಗಿತಗೊಳಿಸಿ ತಣ್ಣೀರುಬಾವಿ ಬೀಚ್‌ನ ತ್ಯಾಜ್ಯವನ್ನು ಹೆಕ್ಕಿ ರಾಶಿ ಹಾಕತೊಡಗಿದರು. ಅಲ್ಲದೆ ವೀಡಿಯೋ ಮಾಡಿ ಶೇರ್ ಮಾಡಿದರು. ಇದು ಕೆಲವೇ ದಿನದಲ್ಲಿ ‘ಬೀಚ್ ರಿಜುವೇಶನ್ ಆರ್ಮಿ’ಯ ಹುಟ್ಟಿಗೆ ಕಾರಣವಾಯಿತು.

ನೀವು ಬೀಚ್‌ಗೆ ಬನ್ನಿ. ಹಾಗೇ ವಿಹರಿಸಿ ಹೋಗುವ ಮುನ್ನ ಬೀಚ್‌ನಲ್ಲಿ ರಾಶಿಬಿದ್ದಿರುವ ಗಾಜು, ಸಿರಿಂಜ್‌ಗಳನ್ನೂ ಹೆಕ್ಕಿ ಕಸದ ತೊಟ್ಟಿಗೆ ಹಾಕಿ ಎಂದು ಹೇಳಿದ ಬಳಿಕವಂತೂ ಚಳುವಳಿ ರೂಪತಾಳಿತು. ರಿಜುವೇಶನ್ ಆರ್ಮಿ ಬಗ್ಗೆ ಯೂಟ್ಯೂಬರ್ ಮುಹಮ್ಮದ್ ಶಕ್ ಇಂಡಿಯನ್ ವೀಡಿಯೊ ಮೂಲಕ ನೀಡಿರುವುದು ಹೊಸ ಟ್ರೆಂಡ್ ಸೃಷ್ಟಿಸಿದೆ. ಅಂದರೆ ಇಬ್ಬರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯವು ನಾಲ್ಕು ವಾರದ ಬಳಿಕ 200 ಮಂದಿಯಿಂದ ನಡೆಯುವಂತಾಗಿದೆ. ರವಿವಾರ ಕೋವಿಡ್ ಮುನ್ನೆಚ್ಚರಿಕೆ ವಹಿಸಿಕೊಂಡು ಬೀಚ್ ಕ್ಲೀನಿಂಗ್ ಮಾಡಲಾಗಿದೆ.

ನಗರದ ತೋಡುಗಳು ಮತ್ತು ನದಿಗಳ ಮೂಲಕ ಮಳೆಗಾಲದಲ್ಲಿ ಸಮುದ್ರಕ್ಕೆ ಕಸ ಹರಿದು ಬಂದು ಸೇರುತ್ತದೆ. ಕೆಲವರು ಬೀಚ್‌ಗೆ ಬಂದು ಪಾರ್ಟಿ ಮಾಡಿ ಪ್ಲಾಸ್ಟಿಕ್, ಕಸ ತಂದು ಅಲ್ಲೇ ಎಸೆದು ಹೋಗುತ್ತಾರೆ. ಸಮುದ್ರದಲ್ಲಿ ಸಂಚರಿಸುವ ಬೋಟ್, ಶಿಪ್‌ಗಳಿಂದ ಎಸೆಯುವ ತ್ಯಾಜ್ಯವೂ ಸೇರಿಸಿ, ಅಲೆಗಳ ಅಬ್ಬರದ ಮೂಲಕ ಬೀಚ್‌ನಲ್ಲಿ ರಾಶಿ ಬೀಳುತ್ತಿದೆ. ಈ ವರ್ಷ ಕೋವಿಡ್‌ನಿಂದ ಕ್ಲೀನಿಂಗ್ ಮಾಡುವವರು ಬಾರದ ಕಾರಣ ಹೆಚ್ಚಿನ ಬೀಚ್‌ಗಳಲ್ಲಿ ಕಸದ ರಾಶಿಯೇ ಬಿದ್ದಿತ್ತು. ಅದಕ್ಕೀಗ ಮುಕ್ತಿಕಾಣಿಸುವ ಪ್ರಯತ್ನ ನಡೆದಿದೆ.

ಇದು ಸ್ವ ಇಚ್ಛೆಯಿಂದ ನಡೆಯುವ ಶ್ರಮದಾನವಾಗಿದೆ. ದೇಹದ ಉಷ್ಣತೆ ತಪಾಸಣೆ ವೇಳೆ ಇಬ್ಬರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಅವರನ್ನು ಹಿಂದಕ್ಕೆ ಕಳಹಿಸಲಾಗಿದೆ ಎಂದು ಬೀಚ್ ರಿಜುವೇಶನ್ ಆರ್ಮಿ ಸಂಘಟಕ ಗಣೇಶ್ ಕಾಮತ್ ಮುಲ್ಕಿ ತಿಳಿಸಿದ್ದಾರೆ.

ಮಂಗಳೂರು ಅಂದ ತಕ್ಷಣ ಧರ್ಮ, ಜಾತಿ ಕಾರಣಕ್ಕಾಗಿ ಸಂಘರ್ಷ ನಡೆಯುತ್ತಲೇ ಇದೆ ಎಂಬ ಅಪವಾದ ಇದೆ. ಅದು ಸುಳ್ಳು ಎಂಬುದನ್ನು ಇಲ್ಲೀಗ ಸಾಬೀತುಪಡಿಸಲಾಗಿದೆ. ಎಲ್ಲರೂ ಜಾತಿ, ಧರ್ಮ ಮರೆತು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು ಎಂದು ಮುಹಮ್ಮದ್ ಶಕ್ ತಿಳಿಸಿದ್ದಾರೆ.
ರವಿವಾರದ ಸ್ವಚ್ಛತಾ ಕಾರ್ಯಕ್ಕೆ ನಗರದ ಡ್ಯಾನಿಶ್ ಮಂದಿ ಹೌಸ್, ನೈಟ್ ಸ್ಟ್ರೀಟ್, ಟಿಕ್ಕಾ ಸ್ಟ್ರೀಟ್, ಝುವಿಸ್ ಫಿಟ್ನೆಸ್, ಬ್ಲೂಲೈನ್, ಡ್ರಿಂಕ್ ಲ್ಯಾಬ್ ಕೂಡ ಕೈ ಜೋಡಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X