ಲಕ್ಷ್ಮಿನಾರಾಯಣ ಆಳ್ವ
ಮಂಗಳೂರು, ಅ.19: ನಿವೃತ್ತ ಅರಣ್ಯಾಧಿಕಾರಿ, ಸಜಿಪ ಮೂಡ ಗ್ರಾಮದ ಕಾಂತಾಡಿಗುತ್ತು ಅಗರಿ ಲಕ್ಷ್ಮಿ ನಾರಾಯಣ ಆಳ್ವ (83) ಅ.16ರಂದು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಜ್ಯ ಅರಣ್ಯ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಪ್ರಗತಿಪರ ಕೃಷಿಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story