ಉಚ್ಚಂಗಿದುರ್ಗ: ಸಿಡಿಲು ಬಡಿದು ಎಮ್ಮೆ, ಕರು, ಕುರಿ ಸಾವು
ದಾವಣಗೆರೆ, ಅ.23: ಅರಸೀಕೆರೆ ಹೋಬಳಿಯ ರಾಮಘಟ್ಟ ದೊಡ್ಡ ತಾಂಡದಲ್ಲಿ ಗುರುವಾರ ಸಿಡಿಲು ಬಡಿದು ಕುರಿ, ಎಮ್ಮೆ ಹಾಗೂ ಕರು ಸಾವನ್ನಪ್ಪಿವೆ. ಈ ವೇಳೆ ಸ್ಥಳದಲ್ಲಿದ್ದ ರೈತ ಲೋಕ್ಯ ನಾಯ್ಕ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲೋಕ್ಯ ನಾಯ್ಕ ತನ್ನ ಹೊಲದಲ್ಲಿರುವ ಮರವೊಂದಕ್ಕೆ ಜಾನುವಾರುಗಳನ್ನು ಕಟ್ಟಿ ಹಾಕಿ ಮೇವು ತರಲು ತೆರಳಿದ್ದ ವೇಳೆ ಸಿಡಿಲು ಬಡಿದಿದೆ. ಸ್ಥಳದಲ್ಲಿ ಜಾನುವಾರು ಮೃತಪಟ್ಟಿದ್ದು, ಸಿಡಿಲ ಅಬ್ಬರಕ್ಕೆ ಲೋಕ್ಯ ನಾಯ್ಕರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story