Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶ್ರೀಕೃಷ್ಣ ಮಠದಲ್ಲಿ ಅಬೂಬಕ್ಕರ್...

ಶ್ರೀಕೃಷ್ಣ ಮಠದಲ್ಲಿ ಅಬೂಬಕ್ಕರ್ ಸಂರಕ್ಷಿಸಿದ ಭತ್ತದ ತಳಿಗಳ ಪ್ರದರ್ಶನ !

ಗೊಬ್ಬರ ಬಳಸದೆ ಬೆಳೆಸಿರುವ 70ಕ್ಕೂ ಅಧಿಕ ದೇಶೀಯ ತಳಿಗಳು

ವಾರ್ತಾಭಾರತಿವಾರ್ತಾಭಾರತಿ26 Oct 2020 9:38 PM IST
share
ಶ್ರೀಕೃಷ್ಣ ಮಠದಲ್ಲಿ ಅಬೂಬಕ್ಕರ್ ಸಂರಕ್ಷಿಸಿದ ಭತ್ತದ ತಳಿಗಳ ಪ್ರದರ್ಶನ !

ಉಡುಪಿ, ಅ.26: ವಿಜಯ ದಶಮಿಯಂದು ಕದಿರು ಕಟ್ಟುವ ಕಾರ್ಯ ಕ್ರಮದ ಪ್ರಯುಕ್ತ ದೇಶೀಯ ಭತ್ತದ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಕಳದ ಕೃಷಿಕ ಅಬೂಬಕ್ಕರ್, ಯಾವುದೇ ಗೊಬ್ಬರಗಳನ್ನು ಬಳಸದೆ ಬೆಳೆಸಿರುವ 70ಕ್ಕೂ ಅಧಿಕ ಭತ್ತದ ತಳಿಗಳನ್ನು ಇಂದು ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯ ಮಹಡಿಯಲ್ಲಿ ಪ್ರದರ್ಶಿಸಲಾಯಿತು.

ಕಾರ್ಕಳದ ಸಾಗರ್ ಹೋಟೆಲ್‌ನ ಮ್ಯಾನೇಜರ್ ಆಗಿರುವ ಅಬೂಬಕ್ಕರ್ ಅವರು, ಪ್ರವೀಣ್ ಕೋಟ್ಯಾನ್, ವಿನೀತ್ ಕುಮಾರ್ ಸಹಕಾರ ದೊಂದಿಗೆ ಬೆಳೆಸಿ ಸಂರಕ್ಷಿಸಿದ ಈ ಭತ್ತದ ತಳಿಗಳನ್ನು ಪರ್ಯಾಯ ಅದಮಾರು ಮಠಾ ಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶಯದಂತೆ ಶ್ರೀಕೃಷ್ಣ ಮಠದ ಭಕ್ತಾದಿಗಳು ನಡೆದು ಹೋಗುವ ಹಾದಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವು ಗಳನ್ನು ನೂರಾರು ಸಂಖ್ಯೆಯ ಭಕ್ತಾಧಿಗಳು ವೀಕ್ಷಿಸಿದರು.

ನೆಲ್ಲೂರು ಪುಟ್ಟಲ್, ಜಿರಿಗೆ ಸಣ್ಣ, ಮಂಜುಗುನಿ, ಚಕಾವ್ ಪೊರಿಯಟ್, ಗೋಪಿಕ, ಶಂಕ್ರು ಕೆಂಪಕ್ಕಿ, ಕಡಲಚಂಪ, ಚಂಪಕ, ಎ.ಪಿ.46, ಆಂದ್ರ ಬಾಸ್ಮತಿ, ದಪ್ಪ ಪಲ್ಯ, ರತ್ನ ಸಾಗರ್, ರಾಜ್‌ಬೋಗ, ಡಾಂಬರ್ ಸಲೈ, ಮುಕ್ಮಣ್ಣಿ ಸಣ್ಣ, ನಾಗ ಸಂಪಿಗೆ, ಸಣ್ಣ ರಾಜಾಗ್ಯಾಮೆ ಸಹಿತ ನಾನಾ ಬಗೆಯ ಭತ್ತದ ತಳಿಗಳು ಗಮನ ಸೆಳೆದವು.

ಅಬೂಬಕ್ಕರ್ ಕಳೆದ 5 ವರ್ಷಗಳಿಂದ ಕಾರ್ಕಳದ ಸುತ್ತಲಿನ ಪರಿಸರದಲ್ಲಿ ಹಡಿಲು ಬಿದ್ದಿರುವ ಗದ್ದೆಗಳನ್ನು ಪಡೆದು ಭತ್ತದ ತಳಿಯನ್ನು ಸಂರಕ್ಷಿ ಸುವ ಕೆಲಸ ಮಾಡುತ್ತಿದ್ದಾರೆ. ಇವರು ಇದಕ್ಕೆ ರಸಗೊಬ್ಬರ ಸೇರಿದಂತೆ ಯಾವುದೇ ಗೊಬ್ಬರ ವನ್ನು ಬಳಸುವುದಿಲ್ಲ. ಭತ್ತದ ಕೃಷಿ ಕಟಾವು ಮಾಡಿದ ಬಳಿಕ ಗದ್ದೆಯಲ್ಲಿ ಉಳಿಯುವ ಹುಲ್ಲೇ ಇದಕ್ಕೆ ಗೊಬ್ಬರ ಆಗಿದೆ. ಆರಂಭದ 2 ವರ್ಷ ಇವರಿಗೆ ಇದ ರಿಂದ ನಷ್ಟ ಉಂಟಾಗಿದ್ದರೂ ಸದ್ಯ ಯಾವುದೇ ನಷ್ಟ ಇಲ್ಲದೆ ಮುನ್ನಡೆಸುತ್ತಿದ್ದಾರೆ.

‘ಮೊದಲ ವರ್ಷ ಒಂದೂವರೆ ಎಕರೆ ಜಾಗದಲ್ಲಿ ಭತ್ತದ ತಳಿ ಸಂರಕ್ಷಿಸಿ, ಎರಡನೆ ಮತ್ತು ಮೂರನೆ ವರ್ಷದಲ್ಲಿ 3 ಎಕರೆ, ನಾಲ್ಕನೇ ವರ್ಷದಲ್ಲಿ 8 ಎಕರೆ ಹಾಗೂ ಈಗ 12 ಎಕರೆಯಲ್ಲಿ ಭತ್ತದ ತಳಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ವರ್ಷಕ್ಕೆ 300 ರಿಂದ 400 ತಳಿ ಗಳನ್ನು ಸಂರಕ್ಷಿಸುವ ಗುರಿ ಹೊಂದಲಾಗಿದೆ ಎಂದು ಅಬೂಬಕ್ಕರ್ ಮಾಹಿತಿ ನೀಡಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ 180ಕ್ಕೂ ಅಧಿಕ ಭತ್ತದ ತಳಿಗಳನ್ನು ಸುಮಾರು 50 ವರ್ಷಗಳಿಂದ ಬೆಳೆದು ಸಂರಕ್ಷಿಸುತ್ತಿರುವ ಬೆಳ್ತಂಗಡಿ ಬಂಗಾಡಿಯ ಬಿ.ಕೆ.ದೇವರಾವ್ ದಂಪತಿಯನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.

‘ಈ ಹಿಂದೆ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಭತ್ತದ ತಳಿಗಳಿದ್ದು, ಸದ್ಯ 20 ಸಾವಿರ ಮಾತ್ರವೇ ತಳಿಗಳು ಉಳಿದುಕೊಂಡಿವೆ. ನಮ್ಮಲ್ಲಿ 180 ತಳಿ ಗಳನ್ನು ಸಂರಕ್ಷಿಸಲಾಗುತ್ತಿದೆ. ಅಲ್ಲದೇ 80 ತಳಿಯ ಮಾವು, 50 ತಳಿಯ ಹಲಸು ಇದೆ. ಆದರೆ ನಮ್ಮದು ಬೀಜ ಮಾರಾಟ ಕಂಪನಿಯಲ್ಲ ಎಂದು ದೇವರಾವ್ ಅವರ ಪುತ್ರ ಪರಮೇಶ್ವರ ರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X