ಹಲವು ವಾಹನಗಳಿಗೆ ಢಿಕ್ಕಿಯಾದ ಬಸ್: ಮೂವರಿಗೆ ಗಂಭೀರ ಗಾಯ
![ಹಲವು ವಾಹನಗಳಿಗೆ ಢಿಕ್ಕಿಯಾದ ಬಸ್: ಮೂವರಿಗೆ ಗಂಭೀರ ಗಾಯ ಹಲವು ವಾಹನಗಳಿಗೆ ಢಿಕ್ಕಿಯಾದ ಬಸ್: ಮೂವರಿಗೆ ಗಂಭೀರ ಗಾಯ](https://www.varthabharati.in/sites/default/files/images/articles/2020/10/31/265604-1604163401.jpeg)
ಬೆಂಗಳೂರು, ಅ.31: ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿ, ಮೂವರಿಗೆ ಗಾಯಗಳಾಗಿರುವ ಘಟನೆ ಇಲ್ಲಿನ ವೈಯಾಲಿಕಾವಲ್ನಲ್ಲಿ ನಡೆದಿದೆ.
ನಗರದ ವೈಯಾಲಿಕಾವಲ್ನ ವಿನಾಯಕ ಸರ್ಕಲ್ನಲ್ಲಿ ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಢಿಕ್ಕಿ ಹೊಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಬೈಕ್ಗಳಿಗೂ ಬಸ್ ಢಿಕ್ಕಿ ಹೊಡೆದಿದ್ದು, ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಸದ್ಯ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವೈಯಾಲಿಕಾವಲ್ಲೀ ಪೊಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story