ದ.ಕ. ಜಿಲ್ಲೆಯಲ್ಲಿ ಹೊಸದಾಗಿ 123 ಮಂದಿಗೆ ಕೊರೋನ ಸೋಂಕು ದೃಢ; ಸೋಂಕಿಗೆ ಓರ್ವ ಬಲಿ
![ದ.ಕ. ಜಿಲ್ಲೆಯಲ್ಲಿ ಹೊಸದಾಗಿ 123 ಮಂದಿಗೆ ಕೊರೋನ ಸೋಂಕು ದೃಢ; ಸೋಂಕಿಗೆ ಓರ್ವ ಬಲಿ ದ.ಕ. ಜಿಲ್ಲೆಯಲ್ಲಿ ಹೊಸದಾಗಿ 123 ಮಂದಿಗೆ ಕೊರೋನ ಸೋಂಕು ದೃಢ; ಸೋಂಕಿಗೆ ಓರ್ವ ಬಲಿ](https://www.varthabharati.in/sites/default/files/images/articles/2020/11/3/265933-1604417613.gif)
ಮಂಗಳೂರು, ನ.3: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಈ ನಡುವೆ ಮಂಗಳವಾರ ಹೊಸದಾಗಿ 123 ಮಂದಿಗೆ ಸೋಂಕು ದೃಢಪಟ್ಟಿದ್ದು, 147 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 30,515 ಮಂದಿ ಸೋಂಕಿತರ ಪೈಕಿ 28,146 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ಗೆ 680 ಮಂದಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,687 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
Next Story