ವಿದ್ಯಾರ್ಥಿಗಳಿಗೆ ಹನಿಗವನ -ಚುಟುಕು ಕಥಾ ಸ್ಪರ್ಧೆ
ಕಾಪು, ನ.3: ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಂಚೆ ಕಾರ್ಡ್ನಲ್ಲಿ ಹನಿಗವನ ಸ್ಫರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ವರಚಿತ ಹಾಗೂ ಅಪ್ರಕಟಿತ ಹನಿ ಗವನವನ್ನು ಬರೆದು ಕಳುಹಿಸಬೇಕು. ಪದವಿಪೂರ್ವ ಹಾಗೂ ಪದವಿ, ತಾಂತ್ರಿಕ, ವೈದ್ಯಕೀಯ, ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಅಂತರ್ದೇಶೀಯ ಪತ್ರ (ಇನ್ಲ್ಯಾಂಡ್ ಲೆಟರ್)ನಲ್ಲಿ ಚುಟುಕು(ಸಣ್ಣ)ಕಥಾ ಸ್ಫರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಸ್ವರಚಿತ ಹಾಗೂ ಅಪ್ರಕಟಿತ ಕಥೆಯನ್ನು ಬರೆದು ಕಳುಹಿಸಬೇಕು.
ಪ್ರತಿ ವಿಭಾಗದಲ್ಲೂ ನಗದು ಸಹಿತ ಮೂರು ಬಹುಮಾನಗಳಿದ್ದು, ಆಯ್ದ ಕವನ ಹಾಗೂ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಿಕ್ಷಣ ಸಂಸ್ಥೆಯ ಹೆಸರಿನೊಂದಿಗೆ ತಮ್ಮ ಕಥೆ, ಕವನಗಳನ್ನು ನ.20ರೊಳಗೆ ವಿದ್ಯಾಧರ್ ಪುರಾಣಿಕ್, ಪ್ರಧಾನ ಕಾರ್ಯದರ್ಶಿಗಳು, ಕಸಾಪ ಕಾಪು ತಾಲೂಕು, ಕಲ್ಯಾ, ಕಾಪು -574106 ಇಲ್ಲಿಗೆ ಕಳುಹಿಸಬೇಕು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.