ಹೊಸನಗರ : ನ.8ರಂದು ಬೇಕಲ್ ಉಸ್ತಾದ್ ಸ್ಮರಣಾರ್ಥ ರಕ್ತದಾನ ಶಿಬಿರ
![ಹೊಸನಗರ : ನ.8ರಂದು ಬೇಕಲ್ ಉಸ್ತಾದ್ ಸ್ಮರಣಾರ್ಥ ರಕ್ತದಾನ ಶಿಬಿರ ಹೊಸನಗರ : ನ.8ರಂದು ಬೇಕಲ್ ಉಸ್ತಾದ್ ಸ್ಮರಣಾರ್ಥ ರಕ್ತದಾನ ಶಿಬಿರ](https://www.varthabharati.in/sites/default/files/images/articles/2020/11/5/266205-1604595108.jpeg)
ಹೊಸನಗರ : ಮೀಲಾದುನ್ನಬಿ ಹಾಗು ಮರಹೂಂ ತಾಜುಲ್ ಫುಖಹಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಸ್ಮರಣಾರ್ಥ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ, ಶಿವಮೊಗ್ಗ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ರಕ್ತ ಗುಂಪು ತಪಾಸಣಾ ಶಿಬಿರವು ನ.8ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರವರಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಸುಲ್ತಾನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸುಲ್ತಾನ್ ಅರಬ್ಬಿ ಮದ್ರಸ, ನಗರ ಹಾಗೂ ಸಿರಾಜುಲ್ ಹುದಾ ಅರಬ್ಬಿ ಮದ್ರಸ ನೂಲಿಗ್ಗೇರಿ ರಕ್ತದಾನ ಶಿಬಿರವನ್ನು ನಿರ್ವಹಣೆ ಮಾಡಲಿದೆ.
ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು ಮತ್ತು ಶೀತ, ಜ್ವರ, ಕೆಮ್ಮು, ನೆಗಡಿ ಇರುವವರು ಶಿಬಿರದಿಂದ ದೂರ ಉಳಿಯಲು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
![](https://www.varthabharati.in/sites/default/files/images/galllery/2020/11/5/WhatsApp Image 2020-11-05 at 7.51.24 PM.jpeg)
Next Story