ಮಿಜಾರು ಅಮ್ಮಿಯಣ್ಣರಿಗೆ ‘ಕನ್ನಡ ಜಾಗೃತಿ ಸೇವಾ ಪುರಸ್ಕಾರ’ ಪ್ರದಾನ
![ಮಿಜಾರು ಅಮ್ಮಿಯಣ್ಣರಿಗೆ ‘ಕನ್ನಡ ಜಾಗೃತಿ ಸೇವಾ ಪುರಸ್ಕಾರ’ ಪ್ರದಾನ ಮಿಜಾರು ಅಮ್ಮಿಯಣ್ಣರಿಗೆ ‘ಕನ್ನಡ ಜಾಗೃತಿ ಸೇವಾ ಪುರಸ್ಕಾರ’ ಪ್ರದಾನ](https://www.varthabharati.in/sites/default/files/images/articles/2020/11/5/266239-1604596260.jpg)
ಮಂಗಳೂರು, ನ.5: ಕನ್ನಡ ಭಾಷೆ, ಸಂಸ್ಕೃತಿಯ ಜಾಗೃತಿಯ ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯಮ ನಡೆಸುವುದರೊಂದಿಗೆ ಪ್ರಶಂಸನೀಯ ಕಾಯಕ ನಡೆಸುತ್ತಿರುವ ಮಿಜಾರು ಅಮ್ಮಿಯಣ್ಣರಲ್ಲಿ ಕನ್ನಡದ ಅಂತಃಸತ್ವದ ಜೀವಾಳವೇ ಅಡಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಕನ್ನಡ ರಾಜ್ಯೋತ್ಸವ ಸಹಿತ ರಾಷ್ಟ್ರೀಯ ಹಬ್ಬಗಳ ಸಂದರ್ಭ ತನ್ನ ಗ್ರಾಹಕರಿಗೆ ಉಚಿತ ಊಟೋಪಚಾರ ಉಪಾಹಾರ ನೀಡುವ ಮೂಲಕ ನಾಡು ನುಡಿಯ ಸೇವೆಗೈಯ್ಯುತ್ತಿರುವ ಮಿಜಾರಿನ ಹೊಟೇಲ್ ಶ್ರೀಕೃಷ್ಣದ ಮಾಲಕ ಅಮ್ಮಿಯಣ್ಣ ಎಂದೇ ಖ್ಯಾತರಾದ ರಘವೀರ್ರನ್ನು ದ.ಕ.ಜಿಲ್ಲಾ ಕಸಾಪ ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಕನ್ನಡ ಜಾಗೃತಿ ಸೇವಾ ಪುರಸ್ಕಾರ’ ನೀಡಿ ಗೌರವಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ, ಯಕ್ಷದೇವ ಮಿತ್ರ ಕಲಾ ಮಂಡಳಿಯ ಅಧ್ಯಕ್ಷ ದೇವಾನಂದ ಭಟ್, ಕಲ್ಕೂರ ಪ್ರತಿಷ್ಠಾನದ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Next Story