ಶಾಸಕ ಭೀಮಾನಾಯ್ಕ ವರ್ತನೆ ಖಂಡಿಸಿ ನ.11ರಂದು ಬಂದ್ಗೆ ಬಿಜೆಪಿ ಕರೆ

ಶಾಸಕ ಭೀಮಾನಾಯ್ಕ
ಬಳ್ಳಾರಿ, ನ.9: ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ ಅವರ ವರ್ತನೆ ಖಂಡಿಸಿ ನ. 11ರಂದು ಹಗರಿ ಬೊಮ್ಮನಹಳ್ಳಿ ತಾಲೂಕು ಬಂದ್ಗೆ ಬಿಜೆಪಿ ಕರೆ ನೀಡಿದೆ.
ಈ ಸಂಬಂಧ ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಬಿಜೆಪಿಯ ಮುಖಂಡರೊಂದಿಗೆ ಸಭೆ ನಡೆಸಿದ್ದು, ಬಳಿಕ ಹಗರಿಬೊಮ್ಮನಹಳ್ಳಿ ತಾಲೂಕು ಬಂದ್ಗೆ ಕರೆ ನೀಡಿರುವ ಕುರಿತ ಮಾಹಿತಿ ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಹಾಲಿ ಶಾಸಕ ಭೀಮಾನಾಯ್ಕ ಅವರ ಅಧಿಕಾರದ ದರ್ಪವನ್ನ ಖಂಡಿಸಿ ಈ ಬಂದ್ ಮಾಡಲಾಗುವುದು. ಬಂದ್ಗೆ ತಾಲೂಕಿನ ಎಲ್ಲಾ ಮಂಡಲ ಅಧ್ಯಕ್ಷರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಈ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ತೋಳುತಟ್ಟಿ ಜಗಳಕ್ಕೆ ಪಂಥಾಹ್ವಾನ ನೀಡಿದ್ದಲ್ಲದೇ ಪುರಸಭೆಯ ಕಂಪೌಂಡ್ ಹಾರಿದ್ದರು. ಹಗರಿಬೊಮ್ಮನಹಳ್ಳಿಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಈ ಗಲಾಟೆ ನಡೆದಿತ್ತು. ಘಟನೆಯಲ್ಲಿ ಶಾಸಕ ಭೀಮಾನಾಯ್ಕ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಭೆ ಸೇರಿ ನ.11 ರಂದು ಬಂದ್ ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.





