ರೈಸ್ ಮಿಲ್ನ ಯಂತ್ರ ತಗುಲಿ ಮೃತ್ಯು
ಮಣಿಪಾಲ, ನ.9: ರೈಸ್ ಮಿಲ್ನ ಯಂತ್ರ ತಾಗಿ ವ್ಯಕ್ತಿಯೊಬ್ಬರು ಗಂಭೀರ ವಾಗಿ ಗಾಯಗೊಂಡು ಮೃತಪಟ್ಟ ಘಟನೆ ನ.9ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಕೃಷ್ಣ ನಾಯ್ಕ(60) ಎಂದು ಗುರುತಿಸಲಾಗಿದೆ. ಇವರು ಬಾಳ್ಕಟ್ಟದ ಅನಿತಾ ನಾಯಕ್ ಎಂಬವರ ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿರು ವಾಗ ರೈಸ್ ಮಿಲ್ನ ಯಂತ್ರ ತಾಗಿತ್ತೆನ್ನಲಾಗಿದೆ.ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story