ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಗೆ ಪೊಲೀಸರಿಂದ ತಡೆ
![ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಗೆ ಪೊಲೀಸರಿಂದ ತಡೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಗೆ ಪೊಲೀಸರಿಂದ ತಡೆ](https://www.varthabharati.in/sites/default/files/images/articles/2020/11/10/266854-1605010469.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.10: ಆರ್ಆರ್ ನಗರ ಉಪಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿ ಮುನಿರತ್ನ ಉಪಚುನಾವಣೆ ಫಲಿತಾಂಶದಲ್ಲಿ ನಿರಂತರ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಮುಂದಾದರು. ಈ ವೇಳೆ ಪೊಲೀಸರು ತಡೆಯೊಡ್ಡಿದ ಪ್ರಸಂಗ ಜರುಗಿತು.
ಮಂಗಳವಾರ ಮತ ಎಣಿಕೆ ಕೇಂದ್ರವಾದ ಜ್ಞಾನಾಕ್ಷಿ ವಿದ್ಯಾ ಕೇಂದ್ರ ಶಾಲೆ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಸಂಭ್ರಮಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಗೆ ತಡೆಯೊಡ್ಡಿ, ಶಾಂತವಾಗಿರುವಂತೆ ಸೂಚಿಸಿದರು.
Next Story