ಮತದಾರರ ಆದ್ಯತೆ ಅಭಿವೃದ್ಧಿ ಮಾತ್ರ: ಬಿಹಾರ ಫಲಿತಾಂಶಕ್ಕೆ ಪ್ರಧಾನಿ ಪ್ರತಿಕ್ರಿಯೆ
ಹೊಸದಿಲ್ಲಿ:ಬಿಹಾರದ ಜನರು ಅಭಿವೃದ್ಧಿಗೆ ಅವಕಾಶ ನೀಡುವ ನಿರ್ಣಾಯಕ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರದಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಆಡಳಿತರೂಢ ಎನ್ ಡಿಎ ಒಟ್ಟು 125 ಸ್ಥಾನಗಳಲ್ಲಿ ಜಯ ಸಾಧಿಸಿ ಸ್ಪಷ್ಟ ಬಹುಮತ ಪಡೆದಿದೆ. ಬೆಳಗ್ಗಿನ ಜಾವ 3 ಗಂಟೆಯ ಬಳಿಕ ಎನ್ ಡಿಎ ಬಹುಮತ ಸ್ಪಷ್ಟವಾಯಿತು.
"ಬಿಹಾರವು ಪ್ರಜಾಪ್ರಭುತ್ವದ ಮೊದಲ ಪಾಠವನ್ನು ಜಗತ್ತಿಗೆ ಕಲಿಸಿದೆ. ಇಂದು ಪ್ರಜಾಪ್ರಭುತ್ವವು ಹೇಗೆ ಬಲಗೊಳ್ಳುತ್ತದೆ ಎಂಬುದನ್ನು ಬಿಹಾರ ಮತ್ತೆ ಜಗತ್ತಿಗೆ ತಿಳಿಸಿದೆ. ಬಿಹಾರದ ದಾಖಲೆಯ ಸಂಖ್ಯೆಯ ಬಡವರು, ವಂಚಿತರು ಹಾಗೂ ಮಹಿಳೆಯರು ಸಹ ಮತ ಚಲಾಯಿಸಿದ್ದಾರೆ. ಇಂದು ಅಭಿವೃದ್ಧಿಗೆ ತಮ್ಮ ನಿರ್ಣಾಯಕ ನಿರ್ಧಾರವನ್ನು ನೀಡಿದ್ದಾರೆ'' ಎಂದು ಪ್ರಧಾನಿ ಟ್ವೀಟಿಸಿದ್ದಾರೆ.
Next Story