ನಿರ್ಧಾರ ಜನರದು, ಬೆಂಬಲಕ್ಕಾಗಿ ಪ್ರಧಾನಿಗೆ ಆಭಾರಿ: ನಿತೀಶ್ ಕುಮಾರ್
ಹೊಸದಿಲ್ಲಿ,ನ.11: ತನ್ನನ್ನು ನಾಲ್ಕನೇ ಬಾರಿಗೆ ಅಧಿಕಾರಕ್ಕೇರಿಸಿರುವ ಬಿಜೆಪಿ ಪ್ರಾಬಲ್ಯದ ವಿಜಯಕ್ಕೆ ಬುಧವಾರ ಮೊದಲ ಬಾರಿ ಪ್ರತಿಕ್ರಿಯಿಸಿರುವ ಜೆಡಿಯು ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದೇ ವೇಳೆ,ಗೆಲುವನ್ನು ಬಿಹಾರದ ಮತದಾರರು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
‘ನಿರ್ಧಾರ ಜನರದು. ಎನ್ಡಿಎಗೆ ಬಹುಮತ ನೀಡಿದ್ದಕ್ಕಾಗಿ ನಾನು ಅವರಿಗೆ ವಂದಿಸುತ್ತೇನೆ. ಬೆಂಬಲಿಸಿದ್ದಕ್ಕಾಗಿ ಪ್ರಧಾನಿಯವರ ಆಭಾರವನ್ನೂ ಕೋರುತ್ತೇನೆ ’ಎಂದು ನಿತೀಶ್ ಟ್ವೀಟಿಸಿದ್ದಾರೆ.
Next Story