ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಅಷ್ಟೊಂದು ಅಂತರದಿಂದ ಸೋಲಲು ಸಾಧ್ಯವಿಲ್ಲ: ಸಂಸದ ಡಿಕೆ ಸುರೇಶ್
![ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಅಷ್ಟೊಂದು ಅಂತರದಿಂದ ಸೋಲಲು ಸಾಧ್ಯವಿಲ್ಲ: ಸಂಸದ ಡಿಕೆ ಸುರೇಶ್ ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಅಷ್ಟೊಂದು ಅಂತರದಿಂದ ಸೋಲಲು ಸಾಧ್ಯವಿಲ್ಲ: ಸಂಸದ ಡಿಕೆ ಸುರೇಶ್](https://www.varthabharati.in/sites/default/files/images/articles/2020/11/13/267229-1605264599.jpg)
ಬೆಂಗಳೂರು, ನ.13: ಆರ್.ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಷ್ಟೊಂದು ಅಂತರದಿಂದ ಸೋಲಲು ಸಾಧ್ಯವಿಲ್ಲ. ಅಲ್ಲಿ ವೋಟಿಂಗ್ ಪ್ಯಾಟ್ರನ್ ಬದಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಇವಿಎಂ ಹ್ಯಾಕ್ ಬಗ್ಗೆ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ದುರ್ಬಳಕೆ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಅಮೆರಿಕದಲ್ಲೂ ಬ್ಯಾಲೆಟ್ ಪೇಪರ್ ನಡೆಯುತ್ತೆ. ಇವಿಎಂ ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಚುನಾವಣೆ ಆಯೋಗ ಮೂಕ ಪ್ರೇಕ್ಷಕರಂತೆ ಆಗಿದೆ ಎಂದು ಕಿಡಿಕಾರಿದರು.
ಹೀಗೆ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ತರಬೇಕು. ಎಲ್ಲಾ ಪಕ್ಷಗಳು ಇದನ್ನು ಒತ್ತಾಯಿಸಬೇಕು. ಈ ಕುರಿತು ಸುಪ್ರೀಂಕೋರ್ಟ್ಗೆ ಪತ್ರ ಅಭಿಯಾನ ಮಾಡಬೇಕು ಎಂದರು.
Next Story