ಇಂಗ್ಲೆಂಡ್ನಲ್ಲಿ ಭಾರತ ಮೂಲದ ವೈದ್ಯ ಕೋವಿಡ್-19ಗೆ ಬಲಿ
ಲಂಡನ್: ಪೂರ್ವ ಇಂಗ್ಲೆಂಡ್ನ ಆಸ್ಪತ್ರೆಯೊಂದು ಕೋವಿಡ್-19ನಿಂದ ಸಾವನ್ನಪ್ಪಿರುವ ಭಾರತೀಯ ಮೂಲದ ವೈದ್ಯರಿಗೆ ಅವರ ಸಮರ್ಪಣಾಭಾವ ಹಾಗೂ ಬದ್ಧತೆಯನ್ನು ಸ್ಮರಿಸಿ ಗೌರವ ಸಮರ್ಪಿಸಿತು.
ಯುನಿವರ್ಸಿಟಿ ಹಾಸ್ಪಿಟಲ್ ಆಫ್ ಡರ್ಬಿ ಹಾಗೂ ಬರ್ಟನ್ ಎನ್ಎಚ್ಎಸ್ ಫೌಂಡೇಶನ್ನ ರಾಯಲ್ ಡರ್ಬಿ ಆಸ್ಪತ್ರೆಯ ಕನ್ಸಲ್ಟೆಂಟ್ ಅರಿವಳಿಕೆ ತಜ್ಞ ಡಾ.ಕೃಷ್ಣನ್ ಸುಬ್ರಮಣಿಯನ್ ಅವರು ಗುರುವಾರ ಲೀಸೆಸ್ಟರ್ನ ಗ್ಲೆನ್ಫೀಲ್ಡ್ ಆಸ್ಪತ್ರೆಯಲ್ಲಿ ನಿಧನರಾದರು.
"ಯುಎಚ್ಡಿಬಿ ಕುಟುಂಬಕ್ಕೆ ಇದು ತುಂಬಾ ದುಃಖದ ದಿನವಾಗಿದೆ. ಕೃಷ್ಣನ್ ಅವರು ನಮ್ಮ ತಂಡದ ಅತ್ಯಮೂಲ್ಯ ಸದಸ್ಯರಾಗಿದ್ದರು. ಅವರು ಈ ವರ್ಷ ದಣಿವರಿಯಿಲ್ಲದೆ ಕೆಲಸ ಮಾಡಿದವರನ್ನು ಬೆಂಬಲಿಸಲು ಶ್ರಮಿಸಿದ್ದಾರೆ. ನಮ್ಮ ಮನಸ್ಸು ಈ ಸಮಯ ಅವರ ಕುಟುಂಬದೊಂದಿಗೆ ಇದೆ'' ಎಂದು ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಗೆವಿನ್ ಬೊಯೆಲ್ ಹೇಳಿದರು.
Next Story