ಶಿರಸಿ : ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಗ್; ನೌಕಾ ಸಿಬ್ಬಂದಿ ಪಾರು
![ಶಿರಸಿ : ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಗ್; ನೌಕಾ ಸಿಬ್ಬಂದಿ ಪಾರು ಶಿರಸಿ : ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಗ್; ನೌಕಾ ಸಿಬ್ಬಂದಿ ಪಾರು](https://www.varthabharati.in/sites/default/files/images/articles/2020/11/13/267332-1605290855.jpeg)
ಶಿರಸಿ : ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೌಕಾನೆಲೆ ಹೆಲಿಕಾಪ್ಟರ್ ಲ್ಯಾಂಡ್ ಆದ ಘಟನೆ ಶಿರಸಿಯ ದಾಸನಕೊಪ್ಪದಲ್ಲಿ ನಡೆದಿದೆ.
ದಾಸನಕೊಪ್ಪದ ಎಪಿಎಂಸಿ ಮೈದಾನದಲ್ಲಿ IN741 ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಎಂಟು ಜನ ನೌಕಾ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಪೈಲೆಟ್ ಸುರಕ್ಷಿತವಾಗಿ ಹೆಲಿಕಾಪ್ಟರನ್ನ ಇಳಿಸಿದ್ದಾರೆ. ಈ ದೃಶ್ಯ ನೋಡಿದ ಸ್ಥಳೀಯರು ಗಾಬರಿಯಾಗಿದ್ದು, ಸದ್ಯ ಹೆಲಿಕಾಪ್ಟರ್ ಗೆ ಭದ್ರತೆ ನೀಡಿದ್ದು, ತಾಂತ್ರಿಕ ಪರಿಣಿತರು ಬಂದ ಬಳಿಕ ದೋಷ ನಿವಾರಿಸಿ ಹೆಲಿಕಾಪ್ಟರ್ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story