Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ16 Nov 2020 12:10 AM IST
share
ಓ ಮೆಣಸೇ...

ಅಮೆರಿಕ -ಭಾರತ ನಿಕಟ ಸ್ನೇಹಬಂಧ ಇರಿಸಿಕೊಂಡರಷ್ಟೇ ಜಗತ್ತು ಸುರಕ್ಷಿತವಾಗಿರಲಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ಆ ಜಗತ್ತಿನಲ್ಲಿ ಭಾರತದ ಸುರಕ್ಷತೆಯೂ ಸೇರಿಕೊಂಡಿದೆಯೇ?


ನಾನೊಬ್ಬ ಸಂತೃಪ್ತ ರಾಜಕಾರಣಿ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ನಿಮಗೆ ಮತ ನೀಡಿದ ಮತದಾರರ ಸಂತೃಪ್ತಿಯೂ ಮುಖ್ಯವಲ್ಲವೇ?


ವ್ಯಕ್ತಿ ಪೂಜೆ ಕಾಂಗ್ರೆಸ್‌ನ ಸಂಸ್ಕೃತಿ - ನಳಿನ್‌ಕುಮಾರ್ ಕಟೀಲು, ಸಂಸದ
ಮೋದಿಯ ಹೆಸರಲ್ಲಿ ಮತ ಯಾಚಿಸಿ ಗೆಲ್ಲುವುದು ಯಾರ ಸಂಸ್ಕೃತಿ?


 ಗುಡ್ಡಗಾಡು ಗುಡಿಸಲುಗಳಲ್ಲಿ ಪರದಾಡುತ್ತಿರುವ ಬಡ ಕುರುಬರಿಗಾಗಿ ನಾವು ಎಸ್ಟಿ ಮೀಸಲಾತಿ ಕೇಳುತ್ತಿದ್ದೇವೆಯೇ ಹೊರತು ನಮಗಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ಆದರೆ ಆರೆಸ್ಸೆಸ್ ಮೀಸಲಾತಿ ವಿರೋಧಿಯಲ್ಲವೇ?


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಬಗ್ಗೆ ಗುಮಾನಿ ಇದೆ - ಪ್ರತಾಪ ಸಿಂಹ, ಸಂಸದ
ತಾವು ‘ಮೈ ಜೋಡಿಸಿದ’ ಆಡಿಯೊ ಕುರಿತ ಗುಮಾನಿಯನ್ನು ಪರಿಹರಿಸಿ.


ಪ್ರಜಾಪ್ರಭುತ್ವದಲ್ಲಿ ಜನರೇ ರಾಜರು - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಮೊದಲು ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಬೇಕು.


ದೇಶದಲ್ಲಿ ಅಭಿವೃದ್ಧಿ ಪರ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ - ದಿನೇಶ್ ಗುಂಡೂರಾವ್,
ಕಾಂಗ್ರೆಸ್ ನಾಯಕ ಮತದಾರರಿಗೂ ಅದು ಅನಿಸಬೇಡವೇ?


ಸೈನ್ಯವನ್ನು ನಂಬದ ಕಾಂಗ್ರೆಸಿಗರು ತಾಯಿಯನ್ನು ನಂಬುತ್ತಾರಾ? -ಸಿ.ಟಿ.ರವಿ, ಸಚಿವ
ಸೇನೆಯನ್ನು ಉಗ್ರರಿಗೆ ಬಲಿಕೊಡುತ್ತಿರುವವರು ತಮ್ಮ ....ಬಲಿಕೊಡದೆ ಬಿಡುತ್ತಾರಾ ಎಂದು ಪ್ರತಿಯಾಗಿ ಕೇಳುವ ಸನ್ನಿವೇಶ ಸೃಷ್ಟಿಸಿದಿರಿ.


ಈಗ ಭಾರತದಲ್ಲಿ ವಾತಾವರಣ ಹೇಗಿದೆ ಎಂದರೆ ‘ಚುನಾವಣೆ ಎಂದರೆ ಬಿಜೆಪಿಯ ಗೆಲುವು ಕಾಂಗ್ರೆಸ್‌ನ ಸೋಲು’ ಎಂಬಂತೆ ಸಾಗಿದೆ - ಕೆ.ಎಸ್.ಈಶ್ವರಪ್ಪ, ಸಚಿವ ಯಾರು ಗೆದ್ದರೂ ಮತದಾರರ ಸೋಲು ಖಚಿತ.


ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು - ಜ.ಬಿಪಿನ್ ರಾವತ್, ರಕ್ಷಣಾ ಮುಖ್ಯಸ್ಥ
ರಫೇಲ್‌ನಿಂದ ಸಾಮರ್ಥ್ಯ ಹೆಚ್ಚಿಲ್ಲ ಅಂತೀರಾ?


ನಾನು ಮತ್ತು ಬೈಡನ್ ಸೇರಿ ಅಮೆರಿಕದ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ - ಕಮಲಾ ಹ್ಯಾರಿಸ್, ಅಮೆರಿಕ ಉಪಾಧ್ಯಕ್ಷೆ
ನಮ್ಮ ಮೋದಿಯವರನ್ನು ಸೇರಿಸಿಕೊಳ್ಳುವುದಿಲ್ಲವೇ?


ಸಾಧನೆ ಮಾತನಾಡಬೇಕೇ ಹೊರತು ಮಾತೇ ಸಾಧನೆಯಾಗಬಾರದು - ಯಡಿಯೂರಪ್ಪ, ಮುಖ್ಯಮಂತ್ರಿ
ಮೋದಿಯವರನ್ನು ಉಲ್ಲೇಖಿಸಿ ಇಂತಹ ಮಾತೇ?


ಬೀದರ್ ಶಾಸಕ ರಹೀಂ ಖಾನ್ ನನ್ನ ಜೊತೆಯಲ್ಲಿ ಬಿಜೆಪಿಗೆ ಸೇರಿದ್ದರೆ ಇಂದು ಮಂತ್ರಿಯಾಗಿರುತ್ತಿದ್ದರು -ಎಸ್.ಟಿ.ಸೋಮಶೇಖರ್, ಸಚಿವ
 ಸಚಿವ ಸ್ಥಾನಕ್ಕಿಂತ ಮಾನ, ಮರ್ಯಾದೆ ಮುಖ್ಯ ಎಂದು ಅವರು ಭಾವಿಸಿರಬೇಕು.


ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆಯ ಫಲಿತಾಂಶ ಭವಿಷ್ಯದ ಮಂತ್ರ ದಂಡವಲ್ಲ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಚುನಾವಣೆಯಲ್ಲಿ ಬರೇ ಮಂತ್ರವನ್ನು ನಂಬಿದವರ ಮಾತು.


ಬಿಹಾರದಲ್ಲಿ ನಿತೀಶ್‌ಕುಮಾರ್‌ರನ್ನು ‘ಏಣಿ’ಯಾಗಿ ಬಳಸಿಕೊಂಡು ನಾವೀಗ ಅಲ್ಲಿ ದೊಡ್ಡಸ್ಥಾನಕ್ಕೆ ಏರಿ ನಿಂತಿದ್ದೇವೆ - ಉಮಾಭಾರತಿ, ಬಿಜೆಪಿ ನಾಯಕಿ
ಅದು ಬಿಹಾರವನ್ನು ಉಣ್ಣುವುದಕ್ಕೆ ಬಳಸಿದ ಬಾಳೆ ಎಲೆ. ಬೇಗ ತೊಟ್ಟಿ ಸೇರಲಿದೆ.


ಪ್ರಧಾನಿ ಮೋದಿ ರಾಜ ಋಷಿ. ಅವರು ಪ್ರಧಾನಿ ಆಗಿದ್ದು ನಮ್ಮೆಲ್ಲರ ಸೌಭಾಗ್ಯ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಅವರು ಪ್ರಧಾನಿಯಾಗಿದ್ದುದರಿಂದ ಅದೆಷ್ಟೋ ಉದ್ದಿಮೆಗಳು ಮುಚ್ಚಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಮ್ಮ ಪಾಲಿಗೆ ಸೌಭಾಗ್ಯವೇ?


ಮಹಿಳೆಯರೇ ನಮ್ಮ ವೌನ ಮತದಾರರು -ನರೇಂದ್ರ ಮೋದಿ, ಪ್ರಧಾನಿ
ಮಹಿಳೆಯರು ವೌನವಾಗಿರುವುದು ನಿಮ್ಮ ಗೆಲುವಿಗೆ ಕಾರಣವೇ?


ಸರಕಾರ ನನ್ನನ್ನು ಜೈಲಿಗೆ ಹಾಕಿದರೂ ಸರಿ ದೀಪಾವಳಿ ಹಬ್ಬದ ಮೂರು ದಿನವೂ ಪಟಾಕಿ ಹೊಡೆಯುತ್ತೇನೆ - ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ ನೀವೇ ಒಂದು ಪಟಾಕಿ, ನಿಮಗೆ ಇನ್ನೊಂದು ಪಟಾಕಿಯ ಅಗತ್ಯವಿದೆಯೆ?


 ಯಾವತ್ತಿದ್ದರೂ ಯಡಿಯೂರಪ್ಪ ಯಡಿಯೂರಪ್ಪನೇ, ರಾಜಾ ಹುಲಿ ರಾಜಾ ಹುಲಿಯೇ  - ಬಿ.ಸಿ.ಪಾಟೀಲ್, ಸಚಿವ
ಮನುಷ್ಯರನ್ನು ಪ್ರಾಣಿಗೇಕೆ ಹೋಲಿಸುತ್ತೀರಿ?


ಎಲ್ಲಿ ಮೋದಿ ಇದ್ದಾರೋ ಅಲ್ಲಿ ಎಲ್ಲವೂ ಸಾಧ್ಯ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಭಾರತದ ಸದ್ಯದ ಆರ್ಥಿಕತೆಯ ಸ್ಥಿತಿ ನೋಡುವಾಗ ಹೌದು ಅನ್ನಿಸುತ್ತದೆ.


ಸಚಿವ ಸ್ಥಾನ ಬೇಡ ಎನ್ನುವಷ್ಟು ದೊಡ್ಡ ಮನುಷ್ಯ ನಾನಲ್ಲ - ರಾಜುಗೌಡ, ಮಾಜಿ ಸಚಿವ
ತಗೊಳ್ಳಿ ಎಂದು ಕೊಡುವಷ್ಟು ದೊಡ್ಡ ಮನುಷ್ಯರು ಅವರೂ ಅಲ್ಲ.


ಜೈಲಿನಲ್ಲಿ ಮಾನವೀಯತೆ ಮೆರೆಯುತ್ತಿದೆ- ಸ್ಟಾನ್ ಸ್ವಾಮಿ, ಮಾನವ ಹಕ್ಕು ಹೋರಾಟಗಾರರು
ಮಾನವಂತರನ್ನೆಲ್ಲ ಸರಕಾರ ಜೈಲಿಗೆ ತಳ್ಳುತ್ತಿರುವುದರ ಪರಿಣಾಮ ಅದು.


ಕಾಂಗ್ರೆಸ್ ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಿದೆ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಮೋದಿಯನ್ನು ಹೊಗಳುವ ಭರದಲ್ಲಿ ದೇಶವನ್ನು ಮರೆಯಬಾರದಲ್ಲವೆ?


 ರಾಜ್ಯದ ಪ್ರತಿಯೊಂದು ಗ್ರಾಪಂ ಮಟ್ಟದಲ್ಲೂ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುವುದು - ಬಿ.ಸಿ.ಪಾಟೀಲ್, ಸಚಿವ
ವಿಷ್ಯದಲ್ಲಿ ಜನರಿಗೆ ಮಣ್ಣನ್ನೇ ತಿನ್ನಿಸುವ ಉದ್ದೇಶವಿರಬಹುದೇ?


 ಎಲ್ಲ ದೇಶಗಳು ನೆರೆ ರಾಷ್ಟ್ರಗಳ ಸಾರ್ವಭೌಮತೆಯನ್ನು ಗೌರವಿಸಬೇಕು  -ನರೇಂದ್ರ ಮೋದಿ, ಪ್ರಧಾನಿ
 ಪ್ಲೀಸ್...ಪ್ಲೀಸ್....ಗೌರವಿಸಿ....

share
ಪಿ.ಎ. ರೈ
ಪಿ.ಎ. ರೈ
Next Story
X