Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುವತಿಗೆ ಕಿರುಕುಳ ನೀಡಿ ಬೆಂಕಿ...

ಯುವತಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿದರು: ವಿಡಿಯೋದಲ್ಲಿ ಹೆಸರು ಹೇಳಿದ್ದರೂ ದುಷ್ಕರ್ಮಿಗಳ ಬಂಧನವಿಲ್ಲ!

ಮದುವೆಗೆ 4 ತಿಂಗಳಿರುವಾಗ ಗುಲ್ನಾಝ್ ಳನ್ನು ಕೊಂದ ಸತೀಶ್ ಮತ್ತು ಚಂದನ್

ವಾರ್ತಾಭಾರತಿವಾರ್ತಾಭಾರತಿ16 Nov 2020 11:30 PM IST
share
ಯುವತಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿದರು: ವಿಡಿಯೋದಲ್ಲಿ ಹೆಸರು ಹೇಳಿದ್ದರೂ ದುಷ್ಕರ್ಮಿಗಳ ಬಂಧನವಿಲ್ಲ!

#‘ಲವ್ ಜಿಹಾದ್’ ಎಂದು ಬೊಬ್ಬಿಡುವವರ ಪತ್ತೆಯೇ ಇಲ್ಲ!

ಹೊಸದಿಲ್ಲಿ: “ನಾಲ್ಕು ತಿಂಗಳಲ್ಲಿ ಆಕೆಯ ವಿವಾಹ ನಡೆಯುವುದಿತ್ತು. ಆದರೆ ಸತೀಶ್ ಕುಮಾರ್ ರೈ ಮತ್ತು ಚಂದನ್ ಕುಮಾರ್ ರೈ ಎನ್ನುವವರು ನನ್ನ ಪುತ್ರಿಗೆ ಬೆಂಕಿ ಹಚ್ಚಿದರು. ಕೊನೆಯುಸಿರೆಳೆಯುವುದಕ್ಕೂ ಮೊದಲು ಆಕೆ ಅವರ ಹೆಸರುಗಳನ್ನು ಹೇಳಿದ್ದಾಳೆ. ಆದರೆ ನಮಗಾಗಿ ಧ್ವನಿಯೆತ್ತುವವರು ಯಾರೂ ಇಲ್ಲ” ಎಂದು ಹೇಳುವಾಗ ಮೃತ ಯುವತಿ ಗುಲ್ನಾಝ್ ರ ತಾಯಿ ಕಣ್ಣೀರಿಡುತ್ತಾರೆ.

ಇಬ್ಬರು ದುಷ್ಕರ್ಮಿಗಳಾದ ಸತೀಶ್ ಕುಮಾರ್ ರೈ ಮತ್ತು ಚಂದನ್ ಕುಮಾರ್ ರೈ ನಿರಂತರ ಕಿರುಕುಳ ನೀಡುತ್ತಿದ್ದು, ಗುಲ್ನಾಝ್ ರನ್ನು ನ್ನು ಹಿಂಬಾಲಿಸುತ್ತಿದ್ದರು. 2 ವಾರಗಳ ಹಿಂದೆ ಆಕೆಯ ಮೇಲೆ ಸೀಮೆಎಣ್ಣೆ ಸುರಿದಿದ್ದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುಲ್ನಾಝ್ ಖಾತೂನ್ 2 ವಾರಗಳ ನಂತರ ಮೃತಪಟ್ಟಿದ್ದಾಳೆ.

“ಅವಳಿಗೆ ಮೂರು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದರು ಮತ್ತು ಅವಳನ್ನು ಹಿಂಬಾಲಿಸುತ್ತಿದ್ದರು” ಎಂದು ತಾಯಿ ಗುಲ್ಶಾನ್ ಪರ್ವೇಝ್ ಹೇಳಿದರೆ, ಸಂತ್ರಸ್ತೆಯ ಕಿರಿಯ ಸಹೋದರಿ ಆರೋಪಿಗಳ ಹೆಸರುಗಳನ್ನು ಹೇಳುತ್ತಾಳೆ.

“ನನ್ನ ಸಹೋದರಿ ಕಸ ಎಸೆಯಲು ಹೋದಾಗ ಆಕೆಗೆ ಅವರು ಕಿರುಕುಳ ನೀಡುತ್ತಿದ್ದರು. ಅಕ್ಟೋಬರ್ 30ರಂದು ಸಂಜೆ 5 ಗಂಟೆಗೆ ಚಂದನ್ ಕುಮಾರ್ ಮತ್ತು ಸತೀಶ್ ಕುಮಾರ್ ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು” ಎಂದು ಹೇಳುತ್ತಾಳೆ.

ತನ್ನ ತಾಯಿಯ ಮನೆಗೆಲಸದಲ್ಲಿ ನೆರವಾಗುತ್ತಿದ್ದ ಗುಲ್ನಾಝ್ ಗೆ ಕೆಲವೇ ತಿಂಗಳುಗಳಲ್ಲಿ ವಿವಾಹ ನಡೆಯುವುದಿತ್ತು. ಸ್ವತಃ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಆರೋಪಿಗಳ ಹೆಸರು ಹೇಳಿದ್ದರೂ ಕೂಡ ಯಾರನ್ನೂ ಇದುವರೆಗೂ ಬಂಧಿಸಿಲ್ಲ. ಜಸ್ಟಿಸ್ ಫಾರ್ ಗುಲ್ನಾಝ್ ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆದರೂ, ಗುಲ್ನಾಝ್ ರ ತಾಯಿ ಪುತ್ರಿಯ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರೂ ಬಿಹಾರದ ನೂತನ ಸಿಎಂ ನಿತೀಶ್ ಕುಮಾರ್ ರಿಂದ ಯಾವ ಹೇಳಿಕೆಯೂ ಹೊರಬಿದ್ದಿಲ್ಲ.

ಕೊನೆಯುಸಿರೆಳೆಯುವುದಕ್ಕೂ ಮೊದಲು ಗುಲ್ನಾಝ್ ಆರೋಪಿಗಳ ಹೆಸರು ಹೇಳಿರುವ ವಿಡಿಯೋ ಕೂಡ ಇದೆ. ಕಣ್ಣೀರಿಡುತ್ತಿರುವ ಪೋಷಕರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಆದರೆ ಪೊಲೀಸರು ಮತ್ತು ಆಡಳಿತ ಕೈಕಟ್ಟಿ ಕುಳಿತಿದೆ. ಜೊತೆಗೆ ‘ಲವ್ ಜಿಹಾದ್’ ಎಂದು ಬೊಬ್ಬಿಡುವವರು, ದ್ವೇಷ ಹರಡುವವರು ನಾಪತ್ತೆಯಾಗಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯ ದೆಸಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯೊಂದು ತಿಳಿಸಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದ ನಂತರ ತಕ್ಷಣವೇ ಗುಲ್ನಾಝ್ ಳನ್ನು ಪಿಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾರೆ.;

ಆಡಳಿತದಿಂದ ಯಾವುದೇ ಭರವಸೆ ಲಭಿಸದಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಗುಲ್ನಾಝ್ ಕುಟುಂಬದೊಂದಿಗೆ ನಿಂತಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ದುಷ್ಕರ್ಮಿಗಳು ಹೆಸರು ಹೇಳಿದ್ದರೂ ಅವರನ್ನು ಬಂಧಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಕ್ಕ ಸಿಕ್ಕ ಅಪರಾಧ ಕೃತ್ಯಗಳಿಗೆಲ್ಲಾ ‘ಲವ್ ಜಿಹಾದ್’ ಎನ್ನುವ ಬಣ್ಣ ಬಳಿಯುವರು ಈ ಘಟನೆಯ ಬಗ್ಗೆ ಏನೂ ಮಾತನಾಡುತ್ತಿಲ್ಲ. ಹತ್ರಸ್ ಘಟನೆಯಂತೆಯೇ ಇಲ್ಲೂ ಕೂಡ ಪೊಲೀಸರ ಶಾಮೀಲಾತಿಯ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಹೋಗಿ ಸಂತ್ರಸ್ತೆಯ ಹೇಳಿಕೆ ಪಡೆದಿದ್ದರೂ ಎಫ್ ಐಆರ್ ದಾಖಲಿಸಿರಲಿಲ್ಲ. ನಾಲ್ಕು ದಿನಗಳ ನಂತರ ಯುವತಿಯ ಹೇಳಿಕೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಫ್ ಐಆರ್ ದಾಖಲಿಸಿದರು. ಈಗಾಗಲೇ ಯುವತಿ ಮೃತಪಟ್ಟಿದ್ದಾಳೆ. ಘಟನೆ ನಡೆದು 15 ದಿನಗಳು ಕಳೆದಿವೆ. ಆದರೆ ಇದುವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.

ಕೃಪೆ: sabrangindia.in

This is what is happening in Bihar. The victim is a Muslim. Will there be any justice to a helpless girl whose dying statement gives out the name of the culprit? Or will be no justice to minorities in a BJP ruled state? The nation wants to know! #JusticeForGulnaz pic.twitter.com/sQ8ghih5Ou

— Salman Nizami (@SalmanNizami_) November 16, 2020

Gulnaz was molested and burnt her by putting kerosene oil.

Bihar police inaction, main stream media still keep maintaining its silence, no outrage.

"Be Khudi Be Sabab Nahin Ghalib
Kuch Tu Hai Jis Ki Parda Dari Hai"#JusticeForGulnaz pic.twitter.com/hhluj67W3O

— Shuja (@shuja_2006) November 16, 2020

Gulnaz's mother demands #JusticeForGulnaz

Retweet and Comment if you also want Justice for her daughter. https://t.co/o1nrAQme6R

— Indias Muslims (@IndiasMuslims) November 16, 2020

#JusticeForGulnaz@NitishKumar @ndtvindia @ZeeBiharNews pic.twitter.com/FqPd40XLkL

— Aphtarul Alam (@aphtarul) November 16, 2020

Be it Haryana or Bihar girls are not safe anywhere, Gulnaz's mother is taking the names of culprits, Victim has given her statement and as per media media reports named the same set of people. @BiharpoliceHq is waiting for what?#JusticeForGulnaz pic.twitter.com/ec0HFQhVPl

— Shikha Gautam (@ishikhagautam) November 16, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X