7 ವರ್ಷದ ಬಾಲಕಿಯ ಹತ್ಯೆಗೈದು, ಯಕೃತ್ತು ಬೇರ್ಪಡಿಸಿದ ದುಷ್ಕರ್ಮಿಗಳು
ಉತ್ತರಪ್ರದೇಶದಲ್ಲಿ ಭಯಾನಕ ಘಟನೆ
ಹೊಸದಿಲ್ಲಿ, ನ. 17: ವಾಮಾಚಾರದ ಆಚರಣೆಗಾಗಿ ಇಬ್ಬರು ದುಷ್ಕರ್ಮಿಗಳು 7 ವರ್ಷದ ಬಾಲಕಿಯನ್ನು ಹತ್ಯೆಗೈದು, ಆಕೆಯ ಯಕೃತ್ತನ್ನು ಹೊರತೆಗೆದ ಭಯಾನಕ ಘಟನೆ ಕಾನ್ಪುರದ ಘಾತಮ್ಪುರ ಪ್ರದೇಶದಲ್ಲಿ ರವಿವಾರ ನಡೆದಿದೆ.
ಘಾತಮ್ಪುರದ ಮಕ್ಕಳು ಇಲ್ಲದ ದಂಪತಿಯೊಂದು ಮಕ್ಕಳಾಗಲು ವಾಮಾಚಾರದ ಆಚರಣೆಗೆ ಮಗುವೊಂದನ್ನು ತಂದು ಒಪ್ಪಿಸಲು ಇಬ್ಬರು ವ್ಯಕ್ತಿಗಳಿಗೆ 1 ಸಾವಿರ ರೂಪಾಯಿ ನೀಡಿತ್ತು.
ಇಬ್ಬರು ಆರೋಪಿಗಳು ಶನಿವಾರ ರಾತ್ರಿ ಬಾಲಕಿಯನ್ನು ಅಪಹರಿಸಿದ್ದರು. ಅನಂತರ ಬಾಲಕಿಯ ದೇಹದಿಂದ ಯಕೃತ್ತನ್ನು ಪ್ರತ್ಯೇಕಿಸಿದ್ದರು. ಅಲ್ಲದೆ, ಅದನ್ನು ದಂಪತಿಗೆ ತಂದು ಒಪ್ಪಿಸಿದ್ದರು.
ಬಾಲಕಿಯ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ. ಬಾಲಕಿಯ ದೇಹದ ಇತರ ಅಂಗಗಳನ್ನು ಕೂಡ ಪ್ರತ್ಯೇಕಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story