Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಿ.ಎಸ್. ಕೃಷ್ಣಭಟ್ಟ್ ಶಿಷ್ಯರ ಬದುಕಿಗೆ...

ಪಿ.ಎಸ್. ಕೃಷ್ಣಭಟ್ಟ್ ಶಿಷ್ಯರ ಬದುಕಿಗೆ 'ಮದದ್ ಗಾರ್' ಆಗಿದ್ದಾರೆ : ಡಾ. ಶ್ರೀಶಕುಮಾರ್

ವಾರ್ತಾಭಾರತಿವಾರ್ತಾಭಾರತಿ18 Nov 2020 5:19 PM IST
share
ಪಿ.ಎಸ್. ಕೃಷ್ಣಭಟ್ಟ್ ಶಿಷ್ಯರ ಬದುಕಿಗೆ ಮದದ್ ಗಾರ್ ಆಗಿದ್ದಾರೆ : ಡಾ. ಶ್ರೀಶಕುಮಾರ್

ಕನ್ಯಾನ: "ಇಂದಿನ ದಿನಗಳಲ್ಲಿ ಎಲ್ಲೂ ಹಣದ ಅಥವಾ  ಸಂಪತ್ತಿನ ಕೊರತೆಯಿಲ್ಲ. ಆದರೆ ಅಲ್ಲಲ್ಲಿ  ಮನುಷ್ಯತ್ವದ ಕೊರತೆ ಕಾಣುತ್ತಲೇ ಇದ್ದೇವೆ. ಈ ದುರಂತವನ್ನು ತಡೆಗಟ್ಟಬೇಕಾದರೆ ನಮಗೆ ನಿಜವಾದ ಗುರುಗಳ ಅಗತ್ಯವಿದೆ. ಯಾವತ್ತೂ  ಉಪದೇಶವನ್ನು ಮಾಡದೆ,  ಮನುಷ್ಯತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಿ ತೋರಿದ ಪಿ.ಎಸ್. ಕೃಷ್ಣಭಟ್ಟರು ನಿಜವಾದ ಅರ್ಥದಲ್ಲಿ ಶಿಷ್ಯರ ಬದುಕಿಗೆ ಮದದ್ ಗಾರ್ (ಸಹಾಯಕ) ಎನಿಸಿದವರು" ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶಕುಮಾರ್.ಎಂ.ಕೆ.  ಹೇಳಿದ್ದಾರೆ.

ಕನ್ಯಾನದ 'ಶಾಂತಿ ಸದನ' ಮನೆಯಲ್ಲಿ 'ಮದದ್ ಗಾರ್ ' - ಪಿ.ಎಸ್. ಕೃಷ್ಣಭಟ್: ಸಹಸ್ರ ಚಂದಿರ- ಸಾವಿರ ನುಡಿಹಾರ'' ಕೃತಿಯ ಅನಾವರಣದ ಸರಳ ಸಮಾರಂಭದಲ್ಲಿ ಅವರು  ಮಾತನಾಡಿದರು.

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳಲ್ಲಿ ಹಿಂದಿ ಪಂಡಿತರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಕೃಷ್ಣಭಟ್ಟರ ಬಗ್ಗೆ ಶಿಷ್ಯಂದಿರು- ಅಭಿಮಾನಿಗಳು ಬರೆದ ಲೇಖನಗಳ ಸಂಗ್ರಹ ಇದಾಗಿದೆ. ''ಹಿಂದಿ ಪಠ್ಯಕ್ಕೆ ಸಂಬಂಧಿಸಿದ ಶಬ್ದಾರ್ಥ- ನೋಟ್ಸ್- ತಿದ್ದುಪಡಿ ಎಲ್ಲವನ್ನೂ  ಒಂದೇ ಕಡೆ ಹೊಂದಿದ ಮದದ್ ಗಾರ್  ಎಂಬ ಪುಸ್ತಕ ಅವರದೇ  ಕಲ್ಪನೆಯ ಕೂಸು. ಪ್ರತಿಯೊಬ್ಬನೂ ಆ  ಮೂಲಕವೇ ಅವರನ್ನು ನೆನೆಸಿಕೊಂಡಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದೆ ವಿದ್ಯಾದಾನ,  ಪರೋಪಕಾರ,  ಪ್ರಾಮಾಣಿಕತೆ,  ಸರಳ ಜೀವನ ಮುಂತಾದ ಸದ್ಗುಣಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಭಾ ವಲಯವಾಗಿ ರೂಪುಗೊಂಡಿರುವ ಕೃಷ್ಣಭಟ್ಟರಂತವರು ಸಮಾಜಕ್ಕೆ ಇನ್ನಷ್ಟು ಬೇಕು ಎಂದು ಡಾ.ಶ್ರೀಶಕುಮಾರ್ ಅಭಿಪ್ರಾಯಪಟ್ಟರು.

ಅಡ್ಯನಡ್ಕದ ಜನತಾ ಪದವಿ ಪೂರ್ವ ಕಾಲೇಜಿನ  ನಿವೃತ್ತ ಪ್ರಾಂಶುಪಾಲ  ಬಳಂತಿಮೊಗರು ಈಶ್ವರ ಭಟ್ಟರು  ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, " ಪ್ರತಿನಿತ್ಯ ಶಾಲೆಗೆ ಮೊದಲಾಗಿ ಬಂದು ಕೊನೆಯದಾಗಿ ಹೋಗುವವರು ಕೃಷ್ಣಭಟ್ಟರು. ಈ ಕ್ರಮವನ್ನು ನಿವೃತ್ತಿಯ ನಂತರ ಪದವಿ ಪೂರ್ವ ಉಪನ್ಯಾಸಕರಾದಾಗಲೂ  ತಪ್ಪಿಸಿದವರಲ್ಲ. ನೂರಕ್ಕೆ ನೂರರಷ್ಟು ತನ್ನ ಅಧ್ಯಾಪನ ವೃತ್ತಿಗೆ ನ್ಯಾಯ ಸಲ್ಲಿಸಿದ ಅವರಂಥವರಿಗೆ  ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಬಂದಿದ್ದರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತಿತ್ತು" ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ "ಪೂರೈಕೆ,ಆರೈಕೆ ಮತ್ತು ಹಾರೈಕೆಗಳು ಯಶಸ್ವೀ  ಜೀವನದ ಮೂಲ ಅವಶ್ಯಕತೆಗಳು. ಇವೆಲ್ಲ ಧಾರಾಳವಾಗಿ ಕೃಷ್ಣ ಭಟ್ಟರಿಗೆ ಒದಗಲಿ. ಅವರ ನಿಸ್ಪೃಹ ಸೇವೆ ಈ ಕೃತಿಯ ಮೂಲಕ ಅಚ್ಚಳಿಯದೆ ದಾಖಲಾಗಲಿ. ಸಾವಿರ ಹುಣ್ಣಿಮೆ ಕಂಡವರು ನೂರು ವಸಂತಗಳನ್ನು ಅನುಭವಿಸುವಂತಾಗಲಿ" ಎಂದು ಹಾರೈಸಿ ಪಿ.ಎಸ್. ಕೃಷ್ಣಭಟ್ ದಂಪತಿಗೆ ಶಾಲುಹೊದಿಸಿ ಪುಸ್ತಕ ಹಾರವನ್ನಿತ್ತು  ಗೌರವಿಸಿದರು.

ಪಟ್ಟಾಜೆ ಸುಬ್ರಹ್ಮಣ್ಯ ಭಟ್ ಮತ್ತು ಪಟ್ಟಾಜೆ ವಿಶ್ವನಾಥ ಭಟ್ ತಮ್ಮ ಆದ್ಯ ಹಿಂದಿ ಗುರುಗಳಿಗೆ ಶಾಲು- ಫಲಸಮರ್ಪಣೆಗೈದು ಗೌರವಿಸಿದರು. ಪಿ.ಎಸ್. ಕೃಷ್ಣಭಟ್ ಮತ್ತು ವಿಶಾಲಾಕ್ಷಿ ಕೃಷ್ಣಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಸ್ತಕದ ಸಂಪಾದನೆ ಮಾಡಿದ  ಸಹೋದರರಾದ ಅನಂತ ಸುಬ್ರಹ್ಮಣ್ಯ ಶರ್ಮ ವಿ.ಕೆ, ಅಶೋಕ ಶ್ಯಾಮ ಪ್ರಸಾದ ವಿ.ಕೆ, ಅರುಣಕುಮಾರ ವಿ.ಕೆ ಹಾಗೂ ಡಾ. ವಿಶ್ವೇಶ್ವರ.ವಿ.ಕೆ. ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X