ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಉಡುಪಿ, ನ.18: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ವ್ಯಾಪ್ತಿಗೊಳಪಡುವ 118-ಬೈಂದೂರು, 119-ಕುಂದಾಪುರ, 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಬಾ ಕ್ಷೇತ್ರಗಳಿಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ನ.18ರಂದು ಚುನಾವಣಾ ಆಯೋಗದ ವೆಬ್ಸೈಟ್- www.ceokarnataka.kar.nic.in -ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದಲ್ಲಿ ಪ್ರಕಟಿಸಲಾಗಿದೆ.
ಜಿಲ್ಲೆಯ ಮತದಾರರು ಪ್ರಕಟಿಸಲಾದ ಕರಡು ಮತದಾರ ಪಟ್ಟಿಯನ್ನು ಸ್ವತಃ ಪರಿಶೀಲಿಸಿ, ಅವರವರ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಬೇಕು. ಒಂದು ವೇಳೆ ತಮ್ಮ ವಾಸಸ್ಥಾನದ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಆಗದೆ ಇದ್ದಲ್ಲಿ ಜನವರಿ 1, 2021ಕ್ಕೆ 18 ವರ್ಷ ಪೂರ್ಣ ಗೊಳ್ಳಲಿರುವ ಅರ್ಹ ಭಾರತೀಯ ನಾಗರಿಕರು ನ.18ರಿಂದ ಡಿಸೆಂಬರ್ 17 ರವರೆಗೆ ನಡೆಯುವ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಅವಧಿಯಲ್ಲಿ ನಿಗದಿತ ನಮೂನೆ-6 ರಲ್ಲಿ ಕ್ಷೇತ್ರದ ಮತಗಟ್ಟೆ ಹಂತದ ಅಧಿಕಾರಿ(ಬಿಎಲ್ಓ) ಇವರಿಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅದೇ ರೀತಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಇತ್ಯಾದಿ ಲೋಪದೋಷಗಳಿದ್ದರೆ, ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಲು ನಮೂನೆ -8 ರಲ್ಲಿ ಅರ್ಜಿ ಮತ್ತು ಮತದಾರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆದು ಹಾಕಲು ನಮೂನೆ-7ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅರ್ಜಿಗಳನ್ನು -WWW.NVSP.IN-ರಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದು.
ಜಿಲ್ಲೆಯಲ್ಲಿ ಮತದಾರರ ವಿವರ: ಬೈಂದೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಒಟ್ಟು 2,26,746 ಮಂದಿ ಮತದಾರರಿದ್ದು, ಇವರಲ್ಲಿ 1,10,430 ಮಂದಿ ಗಂಡಸರು, 1,16,314 ಮಂದಿ ಹೆಂಗಸರು ಹಾಗೂ 2 ತೃತೀಯ ಲಿಂಗಿ ಮತದಾರರಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 97,493 ಮಂದಿ ಗಂಡಸರು ಹಾಗೂ 1,05,345 ಮಂದಿ ಹೆಂಗಸರು ಸೇರಿದಂತೆ ಒಟ್ಟು 2,02,838 ಮಂದಿ ಮತದಾರರಿದ್ದಾರೆ.
ಉಡುಪಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ 1,01,740 ಮಂದಿ ಗಂಡಸರು ಹಾಗೂ 1,08,611 ಮಂದಿ ಹೆಂಗಸರು ಸೇರಿದಂತೆ ಒಟ್ಟು 2,10,351 ಮಂದಿ ಮತದಾರರಿದ್ದಾರೆ.
ಕಾಪು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,84,790 ಮಂದಿ ಮತದಾರರಿದ್ದು, ಇವರಲ್ಲಿ 88,158 ಮಂದಿ ಗಂಡಸರು, 96,625 ಮಂದಿ ಹೆಂಗಸರು ಹಾಗೂ 7 ತೃತೀಯ ಲಿಂಗಿ ಮತದಾರರಿದ್ದಾರೆ.
ಕಾರ್ಕಳ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ 87,926 ಮಂದಿ ಗಂಡಸರು ಹಾಗೂ 95,569 ಮಂದಿ ಹೆಂಗಸರು ಸೇರಿದಂತೆ ಒಟ್ಟು 1,83,495 ಮಂದಿ ಮತದಾರರಿದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 10,08,220 ಮಂದಿ ಮತದಾರರಿದ್ದು, ಇದರಲ್ಲಿ 4,85,747 ಮಂದಿ ಗಂಡಸರು, 5,22,464 ಮಂದಿ ಹೆಂಗಸರು ಹಾಗೂ 9 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
ನಿಗದಿತ ನಮೂನೆಯ ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಮತಗಟ್ಟೆ ಹಂತದ ಅಧಿಕಾರಿ (ಬಿಎಲ್ಓ) ಹಾಗೂ ಜಿಲ್ಲಾಧಿಕಾರಿ ಕಚೇರಿ ದೂ.ಸಂಖ್ಯೆ: 0820-2574926, ತಾಲೂಕು ಕಚೇರಿ ಉಡುಪಿ ದೂ.ಸಂಖ್ಯೆ: 0820- 2521198, ತಾಲೂಕು ಕಚೇರಿ ಕುಂದಾಪುರ ದೂ.ಸಂಖ್ಯೆ: 08254-235567, ತಾಲೂಕು ಕಚೇರಿ ಕಾರ್ಕಳ ದೂರವಾಣಿ ಸಂಖ್ಯೆ: 08258-230057, ತಾಲೂಕು ಕಚೇರಿ ಕಾಪು ದೂ. ಸಂಖ್ಯೆ: 0820-2591444, ತಾಲೂಕು ಕಚೇರಿ ಬ್ರಹ್ಮಾವರ ದೂ.ಸಂಖ್ಯೆ; 0820-2560494, ತಾಲೂಕು ಕಚೇರಿ ಬೈಂದೂರು ದೂರವಾಣಿ ಸಂಖ್ಯೆ:08254-251657, ಸಹಾಯಕ ಕಮೀಷನರ್ ಕುಂದಾಪುರ ದೂ.ಸಂಖ್ಯೆ: 08254-231984 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಯಾವುದೇ ಅರ್ಹ ಭಾರತೀಯ ಪ್ರಜೆಯು ಎರಡು ಕಡೆ ನೊಂದಣಿ ಮಾಡಿಸಿಕೊಳ್ಳುವುದು ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.







