ಅಮಿತ್ ಶಾ ಚೆನ್ನೈ ಭೇಟಿಗೆ ಮುನ್ನ ಟ್ರೆಂಡಿಂಗ್ ಆದ #GoBackAmitShah ಹ್ಯಾಶ್ ಟ್ಯಾಗ್
"ನಿಮಗೆ ಪೆರಿಯಾರ್ ಅವರ ಭೂಮಿಗೆ ಸ್ವಾಗತವಿಲ್ಲ" ಎಂದ ಟ್ವಿಟರಿಗರು
ಚೆನ್ನೈ: ಯಾವುದೇ ಪ್ರಮುಖ ಬಿಜೆಪಿ ನಾಯಕ ಚೆನ್ನೈಗೆ ಬರುತ್ತಾರೆಂದರೆ ಸಾಕು ರಾಜ್ಯದಲ್ಲಿ ಗೋಬ್ಯಾಕ್ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತದೆ. ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಚೆನ್ನೈಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೇ ಟ್ವಿಟ್ಟರ್ನಲ್ಲಿ #GoBackAmitShah ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
"ಅವರು ಯಾವತ್ತೂ ದೇಶವನ್ನು ಒಡೆಯುವವರು ಎಂಬ ಆರೋಪ ಎದುರಿಸುತ್ತಾರೆ. ಆದರೆ ಅವರು ತಮಿಳುನಾಡಿಗೆ ಬಂದಾಗಲೆಲ್ಲಾ ಇಡೀ ರಾಜ್ಯ ಅವರ ವಿರುದ್ಧ ಒಗ್ಗಟ್ಟು ಪ್ರದರ್ಶಿಸುತ್ತದೆ. ನಿಮಗೆ ಪೆರಿಯಾರ್ ಅವರ ಭೂಮಿಗೆ ಸ್ವಾಗತವಿಲ್ಲ,'' ಎಂದು ಒಬ್ಬರು ಬರೆದಿದ್ದರೆ, "ತಮಿಳುನಾಡಿಗೆ ನೀವು ಬೇಕಿಲ್ಲ,'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರು ಇಂದು ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಪಕ್ಷದ ನಾಯಕರುಗಳನ್ನೂ ಇಂದು ಭೇಟಿಯಾಗಲಿದ್ದಾರೆ ಹಾಗೂ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಸುಮಾರು ಒಂದು ವರ್ಷದ ನಂತರ ತಮಿಳುನಾಡಿಗೆ ಭೇಟಿ ನೀಡುತ್ತಿರುವ ಅಮಿತ್ ಶಾ ಪಕ್ಷದ ಪದಾಧಿಕಾರಿಗಳು ಹಾಗೂ ರಾಜ್ಯ ಘಟಕದ ಕೋರ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಅವರು ಹಿರಿಯ ಎಐಎಡಿಎಂಕೆ ನಾಯಕರು ಹಾಗೂ ಮಾಜಿ ಸಿಎಂಗಳಾದ ಎಂ ಜಿ ರಾಮಚಂದ್ರನ್ ಹಾಗೂ ಜಯಲಲಿತಾ ಅವರಿಗೆ ಕಲೈವನರ್ ಅರಂಗಂನಲ್ಲಿ ಗೌರವ ಅರ್ಪಿಸಲಿದ್ದು ನಂತರ ಚೆನ್ನೈ ಮೆಟ್ರೋ ರೈಲಿನ ಮೂರನೇ ಹಂತದ ಯೋಜನೆ ಸಹಿತ ಹಲವು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
Spectacular Welcome by Tamil Nadu!
— Kafoor Rizwan (@kafoor_rizwan) November 21, 2020
After “Good Night India” with #GoBackAmitShah;
After “Good Morning India” with #GoBackAmitShah;
Now Tamil Nadu says “Good Afternoon India” with #GoBackAmitShah & Crosses 338k Tweets! @AmitShah ji, What A Welcome For You By Tamil Nadu! pic.twitter.com/Lwq5MEtsHA
Spectacular Welcome by Tamil Nadu!
— Jebi Mather (@JebiMather) November 21, 2020
After “Good Night India” with #GoBackAmitShah;
After “Good Morning India” with #GoBackAmitShah;
Now Tamil Nadu says “Good Afternoon India” with #GoBackAmitShah & Crosses 327K Tweets! @AmitShah ji, What A Welcome For You By Tamil Nadu! pic.twitter.com/wFxncGxxrS
END HAS BEGUN #GoBackAmitShah pic.twitter.com/csLqVK6gw8
— Prakash (@Hereprak) November 21, 2020
Cow politics and Gaumutra do not sell in a progressive state like Tamil Nadu!!!
— Salahu (@_Salahu__) November 21, 2020
Amit Shah learning it the hard way!!!
TN and Kerala are a beacon of hope in this country!!!#GoBackAmitShah pic.twitter.com/AFw5prebaC