Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೆಟ್ಟದ ನೆಲ್ಲಿ, ಲವಂಗ, ನೇರಳೆ,...

ಬೆಟ್ಟದ ನೆಲ್ಲಿ, ಲವಂಗ, ನೇರಳೆ, ಡಾಲ್ಚಿನ್ನಿ ವಿನಾಶದಂಚಿನ ಪಟ್ಟಿಗೆ ಸೇರ್ಪಡೆ

ಕರ್ನಾಟಕ ಜೀವವೈವಿಧ್ಯ ಮಂಡಳಿ ಔಷಧಿ ಮೂಲಿಕೆಗಳ ವರದಿ ಬಿಡುಗಡೆ

ಮಂಜುನಾಥ ದಾಸನಪುರಮಂಜುನಾಥ ದಾಸನಪುರ22 Nov 2020 11:14 AM IST
share
ಬೆಟ್ಟದ ನೆಲ್ಲಿ, ಲವಂಗ, ನೇರಳೆ, ಡಾಲ್ಚಿನ್ನಿ ವಿನಾಶದಂಚಿನ ಪಟ್ಟಿಗೆ ಸೇರ್ಪಡೆ

ಬೆಂಗಳೂರು: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕಳೆದ 5 ವರ್ಷಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿರುವ ಔಷಧಿ ಸಸ್ಯ ಸಂಪನ್ಮೂಲಗಳ ಲಭ್ಯತೆ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ನಾವು ದಿನನಿತ್ಯ ಬಳಸಲ್ಪಡುವ ಬೆಟ್ಟದ ನೆಲ್ಲಿ, ಲವಂಗ, ಕಾಡು ನೇರಳೆ, ಶ್ರೀಗಂಧ, ಡಾಲ್ಚಿನ್ನಿ ಸೇರಿದಂತೆ ಹಲವು ಔಷಧಿ ಪ್ರಭೇದಗಳು ವಿನಾಶದಂಚಿಗೆ ಸೇರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕರ್ನಾಟಕ ಔಷಧಿ ಮೂಲಿಕಾ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕಾಡಿನಲ್ಲಿ ಲಭ್ಯವಿರುವ ಎಲ್ಲ ಬಗೆಯ ಮರ, ಪೊದೆ ಹಾಗೂ ಬಳ್ಳಿಗಳ ಪ್ರಭೇದಗಳ ವೈವಿಧ್ಯತೆ ಕುರಿತು ಸುಮಾರು 12,820 ಕಿಮೀ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದೆ. ಅರಣ್ಯಗಳಲ್ಲಿ ಕಂಡುಬರುವ 4,800ಕ್ಕೂ ಹೆಚ್ಚಿನ ಹೂ ಬಿಡುವ ಸಸ್ಯ ಪ್ರಭೇದಗಳು ಸೇರಿದಂತೆ ಸಾಮಾನ್ಯವಾಗಿ ಕಂಡುಬರುವ ಕೆಲವು ಔಷಧಿ ಗಿಡ ಮರಗಳು ಹಾಗೂ ವಿನಾಶದಂಚಿನ ಗಿಡ-ಮರಗಳನ್ನು ಅಧ್ಯಯನ ವರದಿಯಲ್ಲಿ ದಾಖಲಿಸಲಾಗಿದೆ.

ಕಳೆದ ಕೆಲವು ದಶಕಗಳಿಂದ ವಿವಿಧ ಕಾರಣಗಳಿಗಾಗಿ ಆಗುತ್ತಿರುವ ಅರಣ್ಯನಾಶ, ಕಾಡಿನ ಒತ್ತುವರಿ, ಬೇಸಿಗೆಯ ಕಾಡಿನ ಬೆಂಕಿ, ಮರಮುಟ್ಟುಗಳು ಹಾಗೂ ಅರಣ್ಯ ಉಪ ಉತ್ಪನ್ನಗಳನ್ನು ತೆಗೆಯುವಾಗ ಆಗುವ ನಷ್ಟ, ಏರುತ್ತಿರುವ ಜನಸಂಖ್ಯೆ, ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಔಷಧಿ ಮೂಲಿಕೆಗಳ ಬೇಡಿಕೆ, ಮೂಲಿಕೆಗಳ ಕಳ್ಳಸಾಗಾಣೆ ಇವೆಲ್ಲವುಗಳ ಕಾರಣದಿಂದಾಗಿ ಔಷಧಿ ಮೂಲಿಕೆಗಳ ಸಂಪತ್ತು ನಾಶವಾಗುತ್ತಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಭಿಪ್ರಾಯಿಸಿದೆ.

ರಾಜ್ಯದ ವಿವಿಧ ಭಾಗದಲ್ಲಿರುವ ಸುಮಾರು 12,820 ಕಿಮೀ ವ್ಯಾಪ್ತಿಯಲ್ಲಿರುವ ಅರಣ್ಯದಲ್ಲಿ ಔಷಧಿ ಮೂಲಿಕೆಗಳ ಸಂಶೋಧನೆಯ ಅನುಕೂಲಕ್ಕಾಗಿ ಕೆನರಾ ಸರ್ಕಲ್, ಮಂಗಳೂರು ಸರ್ಕಲ್, ಕಲಬುರಗಿ ಸರ್ಕಲ್, ಧಾರವಾಡ ಸರ್ಕಲ್, ಮೈಸೂರು ಸರ್ಕಲ್, ಹಾಸನ ಸರ್ಕಲ್ ಎಂದು ಆರು ವಿಭಾಗಗಳನ್ನು ಮಾಡಿಕೊಂಡು ಸರ್ಕಲ್ ಮಟ್ಟದ ಸಸ್ಯವೈವಿಧ್ಯ ಕುರಿತು ವರದಿಯನ್ನು ಸಿದ್ಧಪಡಿಸಲಾಗಿದೆ.

ವಿನಾಶದಂಚಿನ ಔಷಧಿಮೂಲಿಕೆಗಳ ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವ ಅಗತ್ಯವಿದ್ದು, ಮುಖ್ಯವಾಗಿ ರೈತರು, ಬಿಎಂಸಿ, ಗ್ರಾಮ ಅರಣ್ಯ ಸಮಿತಿಗಳು, ರೈತ ಸಹಕಾರಿ ಸಂಘಗಳು, ರೈತ ಉತ್ಪಾದನಾ ಕಂಪೆನಿಗಳು, ಸಸ್ಯಶಾಸ್ತ್ರಜ್ಞರು, ವೈದ್ಯರು. ಶಿಕ್ಷಕರು, ವಿದ್ಯಾರ್ಥಿಗಳು, ನಾಟಿ ವೈದ್ಯರು, ಸ್ಥಳೀಯ ಜನಪದ ತಜ್ಞರು, ಪಾರಂಪರಿಕ ಕುಶಲಕರ್ಮಿಗಳು ಇವರೆಲ್ಲರ ಸಹಭಾಗಿತ್ವದಿಂದ ಮಾತ್ರ ಔಷಧಿ ಮೂಲಿಕೆಗಳನ್ನು ಸಂರಕ್ಷಿಸಬಹುದಾಗಿದೆ ಎಂದು ಜೀವ ವೈವಿಧ್ಯ ಮಂಡಳಿ ಸಿದ್ಧಪಡಿಸಿದ ವರದಿಯಲ್ಲಿ ಸ್ಪಷ್ಟವಾಗಿ ಗುರುತಿಸಿದೆ.

ಔಷಧಿಮೂಲಿಕೆಗಳನ್ನು ವ್ಯಾಪಕವಾಗಿ ಬೆಳೆಸುವ ಕುರಿತಂತೆ ಈಗಾಗಲೇ ಆಯುಷ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಅಡಿಯಲ್ಲಿ ಹಲವು ಉಪಯುಕ್ತ ಯೋಜನೆಗಳು ಜಾರಿಯಲ್ಲಿವೆ. ನಮ್ಮ ಮಂಡಳಿಯು ನಡೆಸಿದ ಈ ಅಧ್ಯಯನ ಮಾಹಿತಿಗಳನ್ನು ಈ ಇಲಾಖೆಗಳು ರೂಪಿಸುವ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಬಳಕೆಯಾಗಲಿ. ಔಷಧಿ ಮೂಲಿಕೆಗಳನ್ನು ಸಂರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

-ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಕರ್ನಾಟಕ ಜೀವವೈವಿಧ್ಯ ಮಂಡಳಿ

ವಿನಾಶದಂಚಿನ ಗಿಡ- ಮರಗಳು

ಕೆನರಾ ಸರ್ಕಲ್: ಮಸಿಮರ, ಲವಂಗ, ಹೈಗಾ, ಸೂರಂಟೆ, ಬೆಟ್ಟದ ನೆಲ್ಲಿ, ರಕ್ತಚಂದನ, ಸೀತಾ ಅಶೋಕಾ, ಕಾಡುನೇರಳೆ, ಅಡವಿ ಅಣಲೆ, ಧೂಪದ ಮರ.

ಮಂಗಳೂರು ಸರ್ಕಲ್: ದಾಲ್ಚಿನ್ನಿ, ಅಡವಿ ಲವಂಗ, ಕೈಮರ, ಕಾಡುಗಂಧ, ಕಾಡುರಾಮಪತ್ರೆ, ಹೊನ್ನೆ, ಶ್ರೀಗಂಧ, ಜಾಲಾರಿ, ತಂಬಾಗ, ಅಡವಿ ಅಣಲೆ.

ಕಲಬುರಗಿ ಸರ್ಕಲ್: ಬೀಟೆ, ಬೀಟೆಮರ, ಬೆಟ್ಟದನೆಲ್ಲಿ

ಧಾರವಾಡ ಸರ್ಕಲ್: ಬೀಟೆ, ಶ್ರೀಗಂಧ, ಕಾಡು ನೇರಳೆ, ಅಡವಿ ಅಣಲೆ

ಹಾಸನ ಸರ್ಕಲ್: ನುರಕಲು, ಹೊಲೇಹೊನ್ನೆ, ಬೋವು, ಕಾಡು ರಾಮಪತ್ರೆ, ಜಾಲಾರಿ, ಕಾಡು ನೇರಳೆ

share
ಮಂಜುನಾಥ ದಾಸನಪುರ
ಮಂಜುನಾಥ ದಾಸನಪುರ
Next Story
X