Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ23 Nov 2020 12:10 AM IST
share
ಓ ಮೆಣಸೇ...

ನೀವು (ಗಡಿ ರಕ್ಷಣಾ ಸೇನೆ) ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ ನಾವು ರಾತ್ರಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ನೀವು ನಿದ್ರಿಸುತ್ತಿರುವ ಕಾರಣದಿಂದಲೇ ಚೀನಾ ಸೇನೆ ಗಡಿಗೆ ನುಗ್ಗಿರುವುದು.


ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಿಹಿ ಲಭಿಸಲಿದೆ, ಯಾರಿಗೂ ಕಹಿ ಇಲ್ಲ - ಬಸವರಾಜ ಬೊಮ್ಮಾಯಿ, ಸಚಿವ
ಮತದಾರರ ಬಾಯಿಗಷ್ಟೇ ಕಹಿ.


ಭಾರತದ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡೇ ತಿರುಗಾಡುವ ಭೂಪ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸತ್ಯಕ್ಕಿಂತ ಸುಳ್ಳಿಗೇ ಮಾರುಕಟ್ಟೆ ಇರುವಾಗ ಅವರೇನು ಮಾಡುತ್ತಾರೆ ಪಾಪ.


ರಾಷ್ಟ್ರಧ್ವಜ ಹಾರಿಸದವರು, ಸಂವಿಧಾನ ಒಪ್ಪದ ಆರೆಸ್ಸೆಸ್‌ನೋರು ದೇಶದ್ರೋಹಿಗಳು - ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ನಾಯಕ
70 ವರ್ಷಗಳ ಕಾಲ ಅವರನ್ನು ಮಡಿಲಲ್ಲಿಟ್ಟು ಸಾಕಿದ್ದು ಕಾಂಗ್ರೆಸ್ ಸರಕಾರ ತಾನೆ?


ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು 17 ಮಂದಿ ಶಾಸಕರು ಕಾರಣವಾದವರಲ್ಲದೆ ಅವರು ಪಕ್ಷ ಕಟ್ಟಿದವರಲ್ಲ - ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
ಪಕ್ಷವನ್ನು ಒಡೆಯುವುದು ಸಣ್ಣ ಕೆಲಸವೇ?


ಬಿಜೆಪಿಯವರು ವೋಟಿಗಾಗಿ ಮಾತ್ರ ಹಿಂದೂ ರಕ್ಷಕರು. ವ್ಯಾಪಾರ ದಂಧೆಯಲ್ಲಿ ಜಾತ್ಯತೀತರು- ರಮಾನಾಥ ರೈ, ಮಾಜಿ ಸಚಿವ
ಜಾತ್ಯತೀತ ಕಾಂಗ್ರೆಸ್ ಶಾಸಕರು ಕಡಿಮೆ ದರದಲ್ಲಿ ಸಿಕ್ಕುವಾಗ ಅವರಾದರೂ ಏನು ಮಾಡುತ್ತಾರೆ?


ಸೀಟು ಹಂಚಿಕೆಯಲ್ಲಿ ಆದ ವಿಳಂಬವೇ ಬಿಹಾರದಲ್ಲಿ ಮಹಾಘಟಬಂಧನ್ ಸೋಲಿಗೆ ಕಾರಣ- ತಾರಿಕ್‌ಅನ್ವರ್, ಕಾಂಗ್ರೆಸ್ ನಾಯಕ
ಹೌದು, ಕಾಂಗ್ರೆಸ್‌ಗೆ ಇನ್ನಷ್ಟು ಕಡಿಮೆ ಸೀಟುಗಳನ್ನು ಹಂಚಿದ್ದರೆ ಘಟಬಂಧನ್ ಗೆದ್ದು ಬಿಡುತ್ತಿತ್ತು.


ಗಡಿ ಭಾಗದಲ್ಲಿ ಕನ್ನಡಿಗರನ್ನು ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ- ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ

ನಿಮ್ಮ ಕತ್ತೆಯ ಜೊತೆಗೆ ನೀವೇಕೆ ಗಡಿಭಾಗಕ್ಕೆ ವಲಸೆ ಹೋಗಬಾರದು?


ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅಲ್ಲೇನಿದ್ದರೂ ಆರೆಸ್ಸೆಸ್‌ನ ಬ್ರಾಹ್ಮಣ್ಯ ರಾಜಕಾರಣಕ್ಕಷ್ಟೇ ಅವಕಾಶ.


ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದರೆ ಅದರಲ್ಲಿ ತಪ್ಪೇನಿದೆ?- ಸಿ.ಟಿ. ರವಿ, ಬಿಜೆಪಿ ರಾ.ಪ್ರ. ಕಾರ್ಯದರ್ಶಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ವಿಸರ್ಜಿಸಿದರೆ ತಪ್ಪೇನಿದೆ ಎನ್ನುವ ಪ್ರಶ್ನೆಯೊಂದು ಬಾಕಿ ಉಳಿದಿದೆ. 


ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರರನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ- ಕೆ.ಎಸ್. ಈಶ್ವರಪ್ಪ, ಸಚಿವ
ಹೆಸರಿನಲ್ಲೇ ವಿಜಯ ಇರುವ ಕಾರಣಕ್ಕಿರಬಹುದೇ?


ಅಗತ್ಯ ಬಿದ್ದರೆ ಕೃಷಿ ಉತ್ಪನ್ನ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಸಿದ್ಧ - ಎಸ್.ಟಿ. ಸೋಮಶೇಖರ್, ಸಚಿವ
ಕೃಷಿ ಉತ್ಪನ್ನ ಮಾಡುವುದರ ವಿರುದ್ಧವೇ ಕಾಯ್ದೆ ತರಲು ಹೊರಟಿರಬೇಕು.


ಮರಾಠಿ ಭಾಷೆಗೂ, ಮರಾಠಾ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ- ಯಡಿಯೂರಪ್ಪ, ಮುಖ್ಯಮಂತ್ರಿ
ಸಂಬಂಧವೇನಿದ್ದರೂ ಚುನಾವಣೆಯ ಜೊತೆಗೆ ಮಾತ್ರ.


ಸಾಹಿತ್ಯದ ಮೂಲಕ ತುಳುನಾಡಿನ ಸಂಸ್ಕೃತಿಗೆ ಭದ್ರತೆ ನೀಡಬಹುದು- ಕೋಟ ಶ್ರೀನಿವಾಸಪೂಜಾರಿ, ಸಚಿವ
ರಾಜಕಾರಣಿಗಳೆಲ್ಲ ಖೋಟಾ ಸಾಹಿತಿಗಳಾಗಲು ಹೊರಟಿರಬೇಕು.


ಕಾಂಗ್ರೆಸ್ ಜೊತೆ ಸರಕಾರ ನಡೆಸಿ ನನಗೆ ಸಾಕಾಗಿ ಹೋಗಿತ್ತು. ಅದಕ್ಕೆ ಸರಕಾರ ಬೀಳಲಿ ಎಂದು ಸುಮ್ಮನಿದ್ದೆ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬಿದ್ದ ಬಳಿಕ ಬಿಜೆಪಿ ಜೊತೆಗೆ ಸೇರಿಕೊಳ್ಳುವ ಉದ್ದೇಶ ಇದ್ದಿರಬೇಕು.


ಕೊರೋನ ಅವಧಿಯಲ್ಲಿ ಹಲವು ಬದಲಾವಣೆಗಳಾದವು. ನಗರಗಳಲ್ಲಿ ಪಕ್ಷಿಗಳು ಕಂಡವು, ಕೆರೆ-ನದಿಗಳು ಸ್ವಚ್ಛಗೊಂಡವು- ನರೇಂದ್ರ ಮೋದಿ, ಪ್ರಧಾನಿ
ಬಹುಶಃ ನಗರಗಳಲ್ಲಿ ಪಕ್ಷಿಗಳನ್ನು ಆಹ್ವಾನಿಸುವುದಕ್ಕಾಗಿ ಲಾಕ್‌ಡೌನ್ ಮಾಡಲಾಯಿತೇ?


 ನಾಗರಹಾವು ಸಿನೆಮಾದ ಜಲೀಲನ ನೆನಪಾಗಿ ಸಂಸದೆ ಸುಮಲತಾ ನನ್ನನ್ನು ಪೇಟೆ ರೌಡಿಗೆ ಹೋಲಿಸಿರಬಹುದು- ಪ್ರತಾಪಸಿಂಹ, ಸಂಸದ
ಆ ಜಲೀಲ ಪಾತ್ರಧಾರಿ ನಿಮ್ಮಷ್ಟು ಸಂಸ್ಕಾರ ಹೀನ ಮಾತನಾಡುತ್ತಿರಲಿಲ್ಲ. ಅವನದೇನಿದ್ದರೂ ‘ಏ ಬುಲ್ ಬುಲ್ ಮಾತಾಕಿಲ್ವಾ...’ ಇಷ್ಟೇ.


ಹಿಂದುತ್ವದ ವಿಷಯದಲ್ಲಿ ಬಿಜೆಪಿಯಂತಹ ಪಕ್ಷಗಳಿಂದ ಪಾಠ ಕಲಿಯುವ ಅಗತ್ಯವಿಲ್ಲ- ಸಂಜಯ್‌ರಾವತ್, ಶಿವಸೇನೆ ವಕ್ತಾರ
ನಿಮ್ಮದೇನಿದ್ದರೂ ಪಾಠ ಕಲಿಸುವ ಕೆಲಸ.


ಎಲ್ಲಿ ಅಧಿಕಾರ ಇರುತ್ತದೋ ಅಲ್ಲಿ ಜೆಡಿಎಸ್‌ನವರು ಇರುತ್ತಾರೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅಧಿಕಾರವಿಲ್ಲ ಎಂದು ತಾನೇ ತಾವು ಕಾಂಗ್ರೆಸ್‌ಗೆ ವರ್ಗಾವಣೆಯಾದದ್ದು.


ನಾನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯದಂತೆ ರಾತ್ರಿ ಇದ್ದು ಮಲಗಿ ಬೆಳಗ್ಗೆ ಎದ್ದು ಹೋಗಲು ಬಂದಿಲ್ಲ- ಬಿ.ಸಿ. ಪಾಟೀಲ್, ಸಚಿವ
ಬೆಳಗ್ಗೆಯೂ ಮಲಗಬೇಕು ಎಂದು ತೀರ್ಮಾನಿಸಿದ್ದೀರಾ?


ಪಟಾಕಿ ಸಂಸ್ಕೃತಿ ಹಿಂದೂಗಳದ್ದಲ್ಲ- ಡಿ. ರೂಪಾ, ಐಪಿಎಸ್ ಅಧಿಕಾರಿ
ಸಂಘಪರಿವಾರಿಗಳನ್ನು ಹಿಂದೂಗಳು ಎಂದು ನೀವು ತಪ್ಪು ತಿಳಿದುಕೊಂಡಿದ್ದೀರಿ.


ಲವ್ ಜಿಹಾದ್ ಎಂಬುದು ದೇಶ ಒಡೆಯಲು ಬಿಜೆಪಿ ಸೃಷ್ಟಿಸಿದ ಪದ- ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ
ಲವ್ ಜಿಹಾದ್‌ಗೆ ಬಲಿಯಾಗಿರುವ ರಾಷ್ಟ್ರ ಮಟ್ಟದ ಬಿಜೆಪಿ ಮುಖಂಡರ ಮಕ್ಕಳ ಮದುವೆಗಳೆಲ್ಲ ರದ್ದಾಗಿ ಬಿಡಬಹುದೇ?


ರಾಜಕೀಯದಲ್ಲಿ ಭಯ ಹುಟ್ಟಿಸುವ ಕೆಲಸ ಯಾವ ಪಕ್ಷವೂ ಮಾಡಬಾರದು- ಎಚ್.ಕೆ. ಪಾಟೀಲ್, ಮಾಜಿ ಸಚಿವ
ಯಡಿಯೂರಪ್ಪರು ಅಷ್ಟರ ಮಟ್ಟಿಗೆ ಭಯಭೀತರಾಗಿದ್ದಾರೆಯೇ?


ಹಣ ಮಾಡುವುದೇ ರಾಜಕೀಯದ ಉದ್ದೇಶವಲ್ಲ- ಡಾ. ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ
ಹೆಣಗಳಿಗಾಗಿಯೂ ಕೆಲವರು ರಾಜಕೀಯ ಮಾಡುತ್ತಾರೆ.


ಈಗ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವುದು ಕೂಡ ದೇಶವಿರೋಧಿ ಕೃತ್ಯವಾಗಿದೆ- ಮೆಹಬೂಬ ಮುಫ್ತಿ, ಪಿಡಿಪಿ ನಾಯಕಿ
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ನಿಮ್ಮ ದೇಶಭಕ್ತಿ ಸಾಬೀತಾಗಿದೆ ಬಿಡಿ 

share
ಪಿ.ಎ.ರೈ
ಪಿ.ಎ.ರೈ
Next Story
X