ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಮರಳು ಶಿಲ್ಪ ಅನಾವರಣ
ವಿಶ್ವ ಏಡ್ಸ್ ದಿನ -2020
ಉಡುಪಿ, ನ.30: ವಿಶ್ವ ಏಡ್ಸ್ ದಿನ -2020 ಇದರ ಅಂಗವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ಇವರು ಮಣಿಪಾಲದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಮರಳು ಶಿಲ್ಪ ರಚಿಸಿದರು.
ಸಮುದಾಯದ ಒಗ್ಗೂಡುವಿಕೆಯಿಂದ ಈ ಮಾರಕ ಕಾಯಿಲೆಯನ್ನು ನಿಯಂತ್ರಿಸಬಹುದು. ಈ ಕಲಾಕೃತಿಯು ಮೂರು ದಿನಗಳ ಕಾಲ ಡಿಸೆಂಬರ್ 2ರವರೆಗೆ ಮಣಿಪಾಲದಲ್ಲಿ ಪ್ರದರ್ಶನದಲ್ಲಿರುತ್ತದೆ.
Next Story