ಅಕ್ರಮ ದನ ಸಾಗಾಟ ಆರೋಪ : ಇಬ್ಬರ ಬಂಧನ
ಕಾರ್ಕಳ, ಡಿ.4: ಹಣಕ್ಕೆ ಖರೀದಿಸಿದ ದನವನ್ನು ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಈದು ಗ್ರಾಮದ ಬೊಳ್ಯೋಟ್ಟು ನಿವಾಸಿ ಅಲ್ತಾಫ್ ಗೌಸ್ ಹಾಗೂ ಈದು ಗ್ರಾಮದ ಬಟ್ಟೆನಿ ನಿವಾಸಿ ಶೇಖರ್ ಶೆಟ್ಟಿ ಬಂಧಿತ ಆರೋಪಿಗಳು. ಅಲ್ತಾಫ್ ಗೌಸ್, ಶೇಖರ್ ಶೆಟ್ಟಿಯಿಂದ ಖರೀದಿಸಿದ ಗಂಡು ಕರುವನ್ನು ಯಾವುದೇ ಪರವಾನಿಗೆ ಇಲ್ಲದೆ ಇವರಿಬ್ಬರು ಹೊಡೆದುಕೊಂಡು ಕರೆ ದೊಯ್ಯುತ್ತಿದ್ದರು. ಈ ವೇಳೆ ಕರು ಸಹಿತ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story