ರೈತರ ಪ್ರತಿಭಟನೆಯ ಕುರಿತು ಟ್ವೀಟ್: ಧರ್ಮೇಂದ್ರ ವಿರುದ್ಧ ಟ್ರೋಲ್
ಹೊಸದಿಲ್ಲಿ: ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತಂತೆ ಇತ್ತೀಚೆಗೆ ಟ್ವಿಟರ್ನಲ್ಲಿ ತನ್ನ ಅನಿಸಿಕೆಯನ್ನು ಬರೆದಿದ್ದರು. ಆದರೆ ಬಳಿಕ ಅದನ್ನು ಅವರು ಡಿಲೀಟ್ ಮಾಡಿದ್ದರು. ಇಂಟರ್ನೆಟ್ ಬಳಕೆದಾರರು ಮಾತ್ರ ಧರ್ಮೇಂದ್ರ ಅವರ ಟ್ವೀಟನ್ನು ಸ್ಕ್ರೀನ್ಶಾಟ್ನ್ನು ತೆಗೆದಿಟ್ಟು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.
ಬಳಕೆದಾರರು ಧರ್ಮೇಂದ್ರ ಅವರ ಡಿಲೀಟ್ ಆಗಿದ್ದ ಟ್ವೀಟನ್ನು ಪೋಸ್ಟ್ ಮಾಡಿದ ಬಳಿಕ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ತನ್ನ ಮೊದಲಿನ ಟ್ವೀಟ್ನ್ನು ಅಳಿಸಿ ಹಾಕಿರುವ ಕುರಿತು ವಿವರಣೆ ನೀಡಿದ ಧರ್ಮೇಂದ್ರ, "ನಿಮ್ಮ ಇಂತಹ ಕಮೆಂಟ್ಗಳಿಂದಾಗಿ ಬೇಸರವಾಗಿ ನಾನು ಟ್ವೀಟನ್ನು ಅಳಿಸಿಹಾಕಿದ್ದೆ..ನಿಮಗೆ ಎಷ್ಟು ಬೇಕೊ ಅಷ್ಟು ನಿಂದಿಸಿ. ನಿಮ್ಮ ಖುಷಿಯೇ ನನ್ನ ಖುಷಿ. ನಾನು ರೈತ ಸಹೋದರರ ಬಗ್ಗೆ ತುಂಬಾ ದುಃಖಿತನಾಗಿದ್ದೇನೆ..ಸರಕಾರವು ಆದಷ್ಟು ಬೇಗನೆ ಏನಾದರೂ ಮಾಡಲೇಬೇಕಾಗಿದೆ'' ಎಂದು ಹಿಂದಿಯಲ್ಲಿ ಬರೆದಿದ್ದಾರೆ.
Next Story