Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಜಪಾನ್ ಶೋಧ ನೌಕೆ ಕ್ಷುದ್ರಗ್ರಹದ...

ಜಪಾನ್ ಶೋಧ ನೌಕೆ ಕ್ಷುದ್ರಗ್ರಹದ ಮಾದರಿಯೊಂದಿಗೆ ಭೂಮಿಗೆ ವಾಪಸ್

ವಾರ್ತಾಭಾರತಿವಾರ್ತಾಭಾರತಿ6 Dec 2020 10:49 PM IST
share
ಜಪಾನ್ ಶೋಧ ನೌಕೆ ಕ್ಷುದ್ರಗ್ರಹದ ಮಾದರಿಯೊಂದಿಗೆ ಭೂಮಿಗೆ ವಾಪಸ್

ಟೋಕಿಯೊ (ಜಪಾನ್), ಡಿ. 6: ದೂರದ ಕ್ಷುದ್ರ (ಸಣ್ಣ) ಗ್ರಹವೊಂದರಿಂದ ಪಡೆಯಲಾದ ಮಾದರಿಗಳನ್ನು ಹೊತ್ತು ಜಪಾನ್‌ನ ಶೋಧಕ ನೌಕೆ ‘ಹಯಬುಸ-2’ರ ಕ್ಯಾಪ್ಸೂಲ್ ರವಿವಾರ ಭೂಮಿಯನ್ನು ತಲುಪಿದೆ.

ಈ ಅತ್ಯಮೂಲ್ಯ ಮಾದರಿಗಳು 0.1 ಗ್ರಾಂಗಿಂತ ಹೆಚ್ಚಿರದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ವಿಶ್ವದ ರಚನೆ ಮತ್ತು ಜೀವಿಗಳ ಉಗಮದ ಮೇಲೆ ಈ ಮಾದರಿಯು ಹೆಚ್ಚಿನ ಬೆಳಕು ಚೆಲ್ಲಬಹುದು ಎಂಬ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.

ಮಾದರಿಗಳನ್ನು ಹೊತ್ತ ಕ್ಯಾಪ್ಸೂಲ್ ಜಪಾನ್ ಕಾಲಮಾನ ಮುಂಜಾನೆ ಸುಮಾರು 2:30ಕ್ಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿತು. ಇದಕ್ಕೂ ಮೊದಲು ಕ್ಯಾಪ್ಸೂಲ್ ಭೂಮಿಯಿಂದ ಸುಮಾರು 2,20,000 ಕಿಲೋ ಮೀಟರ್ ದೂರದಲ್ಲಿ ಶೋಧಕ ನೌಕೆಯಿಂದ ಕಳಚಿಕೊಂಡಿತು. ಕ್ಯಾಪ್ಸೂಲ್ ರಾತ್ರಿ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಭೂಮಿಯತ್ತ ಧಾವಿಸುತ್ತಿರುವ ಧೂಮಕೇತುವಿನಂತೆ ಕಂಡಿತು.

ಕ್ಯಾಪ್ಸೂಲನ್ನು ದಕ್ಷಿಣ ಆಸ್ಟ್ರೇಲಿಯದ ಮರುಭೂಮಿಯಲ್ಲಿ ಪತ್ತೆಹಚ್ಚಲಾಗಿದೆ. ಈಗ ಅದನ್ನು ಜಪಾನ್‌ಗೆ ಕಳುಹಿಸಲಾಗುತ್ತಿದೆ.

2014ರಲ್ಲಿ ಉಡಾಯಿಸಲ್ಪಟ್ಟ ‘ಹಯಬುಸ-2’ ಶೋಧಕ ನೌಕೆಯು ಸುಮಾರು 30 ಕೋಟಿ ಕಿಲೋಮೀಟರ್ ದೂರದಲ್ಲಿರುವ ‘ರಯಗು’ ಎಂಬ ಕ್ಷುದ್ರ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ವಾಪಸಾಗಿದೆ.

ಕ್ಷುದ್ರಗ್ರಹದಿಂದ ಪಡೆಯಲಾದ ಮಾದರಿಗಳು ವಿಶ್ವದ ಉಗಮವಾದಂದಿನಿಂದ ಬದಲಾಗದೇ ಉಳಿದುಕೊಂಡಿವೆ ಎಂದು ಭಾವಿಸಲಾಗಿದೆ.

ಪ್ರಾಚೀನ ರಚನೆಯನ್ನು ಕಾಯ್ದುಕೊಂಡಿರುವ ಕ್ಷುದ್ರಗೃಹಗಳು

ಶೋಧಕ ನೌಕೆಯು ಕ್ಷುದ್ರ ಗ್ರಹ ‘ರಯಗು’ವಿನ ಮೇಲ್ಮೈಯ ಧೂಳು ಮತ್ತು ಮೇಲ್ಮೈಯಿಂದ ಒಳಗಿನ ಮಾದರಿಗಳನ್ನು ಸಂಗ್ರಹಿಸಿದೆ. ಭೂಮಿ ಮುಂತಾದ ಆಕಾಶಕಾಯಗಳು ಬಿಸಿಯಾಗುವಿಕೆ ಮತ್ತು ಘನೀಕರಣ ಮುಂತಾದ ಆಮೂಲಾಗ್ರ ಬದಲಾವಣೆಗಳಿಗೆ ಕಾಲ ಕಾಲಕ್ಕೆ ಒಳಗಾಗಿವೆ ಹಾಗೂ ಆ ಮೂಲಕ ಅವುಗಳ ಮೇಲ್ಮೈ ಮತ್ತು ಒಳ ಭಾಗದ ಮಾದರಿಗಳ ರಚನೆಯಲ್ಲಿ ಬದಲಾವಣೆಗಳಾಗಿವೆ.

ಆದರೆ, ಸಣ್ಣ ಗ್ರಹಗಳು ಮತ್ತು ಅವುಗಳಿಗಿಂತಲೂ ಕಿರಿದಾದ ಕ್ಷುದ್ರಗ್ರಹಗಳ ಪದಾರ್ಥಗಳು ಕರಗಿಲ್ಲ. ಹಾಗಾಗಿ ಅವುಗಳಲ್ಲಿ 460 ಕೋಟಿ ವರ್ಷಗಳ ಹಿಂದಿನ ಪದಾರ್ಥಗಳು ಈಗಲೂ ಇವೆ ಎಂಬುದಾಗಿ ಭಾವಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ‘ಹಯಬುಸ-2’ ಯೋಜನಾ ನಿರ್ವಾಹಕ ಮಕೊಟೊ ಯೊಶಿಕವ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X