ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್ ಆಗಿ ಪದ್ಮಪ್ರಸಾದ್ ಜೈನ್ ನೇಮಕ

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಸಂವಹನ ಮತ್ತು ಮಾಧ್ಯಮ ಸಮಿತಿ ಪ್ಯಾನಲಿಸ್ಟ್ ಆಗಿ ಮೂಡುಬಿದಿರೆಯ ಕಾಂಗ್ರೆಸ್ ಮುಖಂಡ ಪದ್ಮಪ್ರಸಾದ್ ಜೈನ್ ನೇಮಕಗೊಳಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಪದ್ಮಪ್ರಸಾದ್ ಜೈನ್ ರಾಜ್ಯಮಟ್ಟದಲ್ಲಿ ಎನ್ಎಸ್ಯುಐ ಉಪಾಧ್ಯಕ್ಷ, ಪಿವೈಸಿ ಕಾರ್ಯದರ್ಶಿ, ಕೆಪಿಸಿಸಿ ಲೀಗಲ್ ಸೆಲ್ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಕೋಆರ್ಡಿನೇಟರ್ ಆಗಿದ್ದಾರೆ.
Next Story





