ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕವನ ಸ್ಪರ್ಧೆ: ವಿಜೇತರಿಗೆ ಪ್ರಶಸ್ತಿ ವಿತರಣೆ
![ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕವನ ಸ್ಪರ್ಧೆ: ವಿಜೇತರಿಗೆ ಪ್ರಶಸ್ತಿ ವಿತರಣೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕವನ ಸ್ಪರ್ಧೆ: ವಿಜೇತರಿಗೆ ಪ್ರಶಸ್ತಿ ವಿತರಣೆ](https://www.varthabharati.in/sites/default/files/images/articles/2020/12/13/271077-1607877581.jpg)
ಮಂಗಳೂರು: ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಸೌದಿ ಅರೇಬಿಯಾ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸುವ ಕಾರ್ಯಕ್ರಮ ಡಿ.2ರಂದು ಮಂಗಳೂರಿನ ವೆಸ್ಟ್ ಕೋಸ್ಟ್ ಬಿಲ್ಡಿಂಗ್ ನ ಕೋಸ್ಟಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಪ್ರಸ್ತುತ ಸಂಪಾದಕೀಯ ಮಂಡಳಿ ಸದಸ್ಯೆ ಶಾಹಿದಾ ಅಸ್ಲಂ, ಸಂಪಾದಕ ಝಿಯಾವುಲ್ ಹಕ್ ಮಾತನಾಡಿದರು.
ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಅಧ್ಯಕ್ಷ ಮುಹಮ್ಮದ್ ಶಾಕಿರ್, ಪ್ರಸ್ತುತ ಓದುಗರ ವೇದಿಕೆ ದಮ್ಮಾಮ್ ಇದರ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್,
ಹಾಗೂ ಪ್ರಸ್ತುತ ವ್ಯವಸ್ಥಾಪಕ ನವಾಝ್ ಭಾಗವಹಿಸಿದ್ದರು. ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಸದಸ್ಯರಾದಂತಹ ಇರ್ಶಾದ್ ಬಜ್ಪೆಯವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣವನ್ನು ಮಾಡಿ ಪ್ರಸ್ತುತವು ನಡೆದು ಬಂದ ಹಾದಿಯ ಬಗ್ಗೆ ಸವಿವರವಾಗಿ ವಿವರಿಸಿದರು
ಕಾರ್ಯಕ್ರಮದ ಕವನ ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ ಮತ್ತು ತೃತೀಯ ವಿಜೇತರಿಗೆ ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಕವನ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಅನ್ಸಾರ್ ಕಾಟಿಪಳ್ಳ ಒಮಾನ್, ದ್ವಿತೀಯ ಬಹುಮಾನ ಮುಹಮ್ಮದ್ ಸೈಪುದ್ದೀನ್ ದ.ಕ ಮತ್ತು ತೃತೀಯ ಬಹುಮಾನ ಶಾಕಿರ್ ಹಕ್ ನೆಲ್ಯಾಡಿ ಕೆ.ಎಸ್.ಎ ಪಡೆದರು.
ನಿಂಗಮ್ಮ ಲೇಖನಿ ಬಿ.ಕೊಪ್ಪಳ ತಾಲೂಕು, ಸಲ್ಮಾ ಮಂಗಳೂರು, ಉಮ್ಮರ್ ಫಾರೂಕ್ ಕುಕ್ಕಾಜೆ ಯು.ಎ.ಇ, ತಾಜುದ್ದೀನ್ ಪೇರಲ್ತಡ್ಕ, ನಿಜಾಮುದ್ದೀನ್ ಉಪ್ಪಿನಂಗಡಿ ತಬೂಕ್, ಪರ್ವೇಜ್ ಆಬಿದ್ದಿನ್ ಯಾಂಬು ಕೆ.ಎಸ್.ಎ, ಅಬೂ ಅಹದ್, ರುಖಿಯಾ ಹಕೀಮ್ ಮಂಗಳೂರು, ಅಬೂ ಸನ ಮಂಗಳೂರು, ರಮ್ಲತ್ ಎನ್.ಬಿ ಬಂಟ್ವಾಳ ಇವರುಗಳು ಬರೆದ ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದವು. ಎಲ್ಲರಿಗೂ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಸದಸ್ಯ ಇರ್ಶಾದ್ ಬಜ್ಪೆ ಧನ್ಯವಾದಗೈದರು.