ಬಾರೆಬೆಟ್ಟು: ಕಬಕ ಉಸ್ತಾದ್ ನೇತೃತ್ವದ 30 ನೇ ವಾರ್ಷಿಕ ಜಲಾಲಿಯ ರಾತೀಬ್
![ಬಾರೆಬೆಟ್ಟು: ಕಬಕ ಉಸ್ತಾದ್ ನೇತೃತ್ವದ 30 ನೇ ವಾರ್ಷಿಕ ಜಲಾಲಿಯ ರಾತೀಬ್ ಬಾರೆಬೆಟ್ಟು: ಕಬಕ ಉಸ್ತಾದ್ ನೇತೃತ್ವದ 30 ನೇ ವಾರ್ಷಿಕ ಜಲಾಲಿಯ ರಾತೀಬ್](https://www.varthabharati.in/sites/default/files/images/articles/2020/12/14/271217-1607963371.jpg)
ವಿಟ್ಲ: ಕಬಕ ಉಸ್ತಾದ್ ಮುಹಮ್ಮದ್ ಮದನಿಯವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 30 ನೇ ವರ್ಷದ ಜಲಾಲಿಯತ್ ರಾತೀಬ್ ರವಿವಾರ ಕಬಕ ಉಸ್ತಾದ್ ರವರ ಕೊಳ್ನಾಡು ಬಾರೆಬೆಟ್ಟುವಿನ ಗರೀಬ್ ನವಾಝ್ ಮಂಝಿಲ್ ನಲ್ಲಿ ನಡೆಯಿತು.
ಸಯ್ಯಿದ್ ಕೋಯಕುಟ್ಟಿ ತಂಙಳ್ ಉಪ್ಪಳ ರವರ ಪುತ್ರ ಸಯ್ಯಿದ್ ನಝೀರ್ ತಂಙಳ್ ರವರ ದುವಾದೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಕಬಕ ಉಸ್ತಾದ್ ನೇತೃತ್ವ ನೀಡಿದರು.
ಕಲ್ಲೇಗ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ ಮುಖ್ಯ ಭಾಷಣಗೈದರು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಅಬ್ದುಲ್ ಖಾದರ್ ಮದನಿ ಉದ್ಯಾವರ, ಸುಲೈಮಾನ್ ಮದನಿ ಬಾರೆಬೆಟ್ಟು, ಮಹ್ಮೂದ್ ಸಅದಿ ಕುಕ್ಕಾಜೆ, ಮಹ್ಮೂದುಲ್ ಫೈಝಿ ವಾಲೆಮುಂಡೊವು, ರಫೀಕ್ ಸಅದಿ ದೇಲಂಪಾಡಿ, ಮುಹಮ್ಮದ್ ಅಲಿ ಸಖಾಫಿ ಸುರಿಭೈಲ್, ಇಬ್ರಾಹಿಂ ಮದನಿ ಬೀಟಿಗೆ, ಮುಹಮ್ಮದ್ ಫಾಳಿಲಿ ಖಾಮಿಲ್ ಸಖಾಫಿ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಬ್ದುಲ್ ಮಜೀದ್ ಮದನಿ, ಬದ್ರುದ್ದೀನ್ ಮದನಿ ಕಿಲ್ಲೂರು, ಇಬ್ರಾಹಿಂ ಮದನಿ ಸೇರ, ರಫೀಕ್ ಮದನಿ ಸೇರ, ಉಮ್ಮರ್ ಹಾಜಿ ರಾಜ್ ಕಮಲ್, ಹನೀಫ್ ಹಾಜಿ ರಾಜ್ ಕಮಲ್, ಉಮ್ಮರ್ ಕರಾವಳಿ, ಮೊಯಿದು ಹಾಜಿ ಕಂಬಳಬೆಟ್ಟು, ಕಾರ್ ಪೊಯಿಂಟ್ ಮೂಸ ಕಬಕ, ಹಮೀದ್ ರೋಯಲ್, ಉಮ್ಮರ್ ಮಲ್ನಾಡ್ ಮುರ, ಉಮ್ಮರ್ ಫಾರೂಕ್ ಬ್ರೈಟ್ ಪೋಳ್ಯ, ಇಬ್ರಾಹಿಂ ಕಲ್ಲಂದಡ್ಕ, ಖಾಲಿದ್ ಕಬಕ ಕೆ.ಎಸ್.ಎ, ಸಹಿತ ಹಲವಾರು ಉಲಮಾ, ಉಮರಾ ನಾಯಕರು ಪಾಲ್ಗೊಂಡಿದ್ದರು.
ಅಬ್ದುಲ್ ಹಮೀದ್ ಹಾಜಿ ಕಬಕ, ಕಬಕ ಯೂತ್ ಪ್ರೆಂಡ್ಸ್ ಅದ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ,ಅಹ್ಮದ್ ಹಾಜಿ ಕಬಕ, ಮುನೀರ್ ಕಬಕ, ಫಾರೂಕ್ ಕಬಕ, ಅನ್ವರ್ ಸ್ಪೋರ್ಟ್ಸ್ ಮಸ್ಕತ್, ಖಲಂದರ್ ಕಬಕ, ಹಮೀದ್ ಬಗ್ಗುಮೂಲೆ, ಅಯ್ಯೂಬ್ ಕಬಕ, ಮೊಹಮ್ಮದ್ ರಫೀಕ್ ಬ್ರೈಟ್,
ಸಹಿತ ಹಲವಾರು ಮಂದಿ ಸಹಕರಿಸಿದರು.
ಶೈಖುನಾ ಕಬಕ ಉಸ್ತಾದರ ಶಿಷ್ಯಂದಿರ ಬಳಗದೊಂದಿಗೆ ಕಬಕದ ಹಾಗೂ ಸ್ಥಳೀಯ ಸುನ್ನೀ ಸಂಘಟನೆಯ ಯುವಕರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು. ವಾಹನ ನಿಲುಗಡೆಗೆ ಬೇಕಾದ ಸ್ಥಳ ಸೌಕರ್ಯವನ್ನು ಸ್ಥಳೀಯರಾದ ಮೋನಪ್ಪ ಗೌಡ ಬಾರೆಬೆಟ್ಟು ಹಾಗೂ ಅಬ್ದುಲ್ ಖಾದರ್ ಬಾರೆಬೆಟ್ಟು ಒದಗಿಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಯಿತು.