ಈ ಸಣ್ಣ ಪಕ್ಷದಿಂದ ಚುನಾವಣೆಗೆ ಸ್ಫರ್ಧಿಸುತ್ತಾರೆಯೇ ಸೂಪರ್ ಸ್ಟಾರ್ ರಜನೀಕಾಂತ್?
ಚೆನ್ನೈ,ಡಿ.15: ಕಳೆದ ಚುನಾವಣೆಯ ಸಂದರ್ಭದಲ್ಲಿಯೇ ರಾಜಕೀಯ ಸೇರುವ ಸೂಚನೆ ನೀಡಿದ್ದ ರಜನೀಕಾಂತ್ ಇದೀಗ ತಮಿಳುನಾಡಿನಲ್ಲಿರುವ ಸಣ್ಣ ಪಕ್ಷವೊಂದರಿಂದ ರಾಜಕೀಯ ಪ್ರವೇಶ ಮಾಡುವ ಸೂಚನೆಗಳು ಕಂಡು ಬಂದಿದೆ. ಮಕ್ಕಳ್ ಸೆಲ್ವಿ ಕಚ್ಚಿ ಎಂಬ ಪಕ್ಷವೊಂದರ ಅರ್ಜಿಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಹೆಸರು ಕಂಡು ಬಂದಿದ್ದು, ಭಾರತೀಯ ಚುನಾವಣಾ ಆಯೋಗವು ಪಕ್ಷಕ್ಕೆ ಆಟೋರಿಕ್ಷಾ ಚಿಹ್ನೆಯನ್ನು ನೀಡಿದೆ. ಅರ್ಜಿದಾರ ಯಾರೆಂದು ಇದುವರೆಗೂ ತಿಳಿದು ಬಂದಿಲ್ಲ.
ಅರ್ಜಿಯಲ್ಲಿ ಮೊದಲ ಆದ್ಯತೆಯ ಚಿಹ್ನೆಯಾಗಿ ಎರಡು ಬೆರಳುಗಳನ್ನು ಮಡಚಿದ ‘ಹಸ್ತಮುದ್ರಿಕೆ’ ಗೆ ಬೇಡಿಕೆಯಿಟ್ಟಿದ್ದು, ಇದು ರಜನೀಕಾಂತ್ ರವರು 2002ರಲ್ಲಿ ನಟಿಸಿದ ಬಾಬಾ ಚಿತ್ರದಲ್ಲಿ ಪ್ರಖ್ಯಾತಿಗೊಂಡಿತ್ತು. ಇನ್ನು ಆಟೋರಿಕ್ಷಾ ಕೂಡಾ ಭಾಷಾ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಮೊದಲಿಗೆ ‘ಅನೈತಿಂದಿಯಾ ಮಕ್ಕಳ್ ಶಕ್ತಿ ಕಝಗಮ್’ ಎಂದಿದ್ದ ಪಕ್ಷದ ಹೆಸರು ಚುನಾವಣಾ ಆಯೋಗದ ಆದೇಶದ ಮೇರೆಗೆ ಬದಲಾಯಿಸಲಾಗಿತ್ತು. ಈ ಪಕ್ಷವು ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲೂ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ. ಇನ್ನು ರಜನೀಕಾಂತ್ ನಿದೇ ಪಕ್ಷದಲ್ಲಿ ಸ್ಫರ್ಧಿಸಲಿದ್ದಾರೆಯೇ ಎಂಬುವುದು ಇನ್ನಷ್ಟೇ ಖಾತರಿಯಾಗಬೇಕಾಗಿದೆ.