Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚೇರ್ಕಾಡಿ ಶಾಲಾ ಪರಿಸರದಲ್ಲಿ ಪತಂಗದ...

ಚೇರ್ಕಾಡಿ ಶಾಲಾ ಪರಿಸರದಲ್ಲಿ ಪತಂಗದ ಹುಳಗಳ ಹಿಂಡು !

ಲಕ್ಷಾಂತರ ಸಂಖ್ಯೆಯಲ್ಲಿ ಹುಳಗಳು, ಸ್ಥಳೀಯ ಗ್ರಾಪಂನಿಂದ ಔಷಧಿ ಸಿಂಪಡಿಕೆ

ವಾರ್ತಾಭಾರತಿವಾರ್ತಾಭಾರತಿ15 Dec 2020 7:56 PM IST
share
ಚೇರ್ಕಾಡಿ ಶಾಲಾ ಪರಿಸರದಲ್ಲಿ ಪತಂಗದ ಹುಳಗಳ ಹಿಂಡು !

ಬ್ರಹ್ಮಾವರ, ಡಿ.15: ಚೇರ್ಕಾಡಿ ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥ ಮಿಕ ಶಾಲಾ ಪರಿಸರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪತಂಗದ ಹುಳಗಳ ಹಿಂಡು ಕಂಡುಬಂದಿದೆ. ಇದು ಬಹಳಷ್ಟು ಕುತೂಹಲ ಹಾಗೂ ಸ್ಥಳೀಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶಾಲೆಯ ಎದುರು ಹಾಗೂ ಹಿಂಬದಿಯ ಮೇ ಫ್ಲವರ್ ಮರಗಳಲ್ಲಿ, ಶಾಲೆಯ ಗೋಡೆ, ಕಂಪೌಂಡ್‌ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಳಗಳು ಹರಿ ದಾಡುತ್ತಿರುವುದು ಕಂಡುಬಂದಿವೆ. ಈ ಹುಳಕ್ಕೆ ಸಂಬಂಧಿಸಿದ ಪತಂಗವು ಮೇ ಫ್ಲವರ್ ಮರದಲ್ಲಿ ಮೊಟ್ಟೆ ಇಟ್ಟಿದ್ದು, ಈ ಮರದ ಎಲೆಗಳನ್ನು ತಿಂದಿರುವ ಹುಳ ಗಳು, ಕೋಶಗಳ ರಚನೆಗಾಗಿ ಮರದಿಂದ ಇಳಿದು ಬಂದಿದೆ.

ಹೀಗೆ ಈ ಹುಳಗಳು ಶಾಲೆಯ ಕಂಪೌಂಡ್, ಗೋಡೆ ಹಾಗೂ ನೆಲದಲ್ಲಿ ಹರಿದಾಡುತ್ತಿರುವುದು ಕಾಣಸಿಕ್ಕಿವೆ. ಕೆಲವು ಹುಳಗಳು ಕೋಶಾವಸ್ಥೆಗೆ ತೆರಳಿ ರುವುದು ಕೂಡ ಕಂಡುಬಂದಿದೆ. ಆರಂಭದಲ್ಲಿ ಬೆರಳಣಿಕೆ ಸಂಖ್ಯೆಯಲ್ಲಿ ಮರಗಳಲ್ಲಿ ನೇತಾಡುತ್ತಿದ್ದ ಈ ಹುಳಗಳು, ಕಳೆದ ವಾರ ಮಳೆ ಬಂದ ನಂತರ ಹೆಚ್ಚಾಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಡಿ.12ರಂದು ಸಾವಿರಾರು ಸಂಖ್ಯೆಯಲ್ಲಿ ಕಂಡು ಬಂದ ಈ ಹುಳಗಳ ಸಂಖ್ಯೆ ಡಿ.13ರಂದು ಇನ್ನಷ್ಟು ಹೆಚ್ಚಿ ಲಕ್ಷಕ್ಕೂ ಮೀರಿತ್ತು. ಈ ಬಗ್ಗೆ ಆತಂಕ ಗೊಂಡ ಶಾಲಾ ಶಿಕ್ಷಕರು ಹಾಗೂ ಸ್ಥಳೀಯರು ಈ ಬಗ್ಗೆ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಿದರು. ಅದರಂತೆ ಗ್ರಾಪಂನವರು ಡಿ.14ರಂದು ಸ್ಥಳಕ್ಕೆ ಆಗಮಿಸಿ ಪರಿಶೀನೆ ನಡೆಸಿದರು.

ಬಳಿಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೂಚಿಸಿದ ರಾಸಾ ಯನಿಕವನ್ನು ಹುಳಗಳಿರುವ ಶಾಲಾ ಕಟ್ಟಡ, ಕಂಪೌಂಡ್, ಮರಗಳಿಗೆ ಸಿಂಪಡಿಸಿ ದ್ದಾರೆ. ಇದರಿಂದ ಬಹುತೇಕ ಹುಳಗಳು ಸತ್ತು ಬಿದ್ದಿವೆ. ಆದರೆ ಇನ್ನು ಕೂಡ ಕೆಲವು ಸಂಖ್ಯೆಯ ಹುಳಗಳು ಅಲ್ಲಲ್ಲಿ ಕಂಡುಬಂದಿವೆ ಎಂದು ನಿವೃತ್ತ ಶಿಕ್ಷಕ ಜಿ.ಎಸ್.ಪ್ರಭು ಮಾಹಿತಿ ನೀಡಿದ್ದಾರೆ.

‘ರಾಸಾಯನಿಕ ಸಂಪಡಿಸಿದ ನಂತರ ಹುಳಗಳು ನಿಯಂತ್ರಣಕ್ಕೆ ಬಂದಿದೆ. ಶಾಲೆಯ ಎದುರಿನ ಮೂರು ಮರ, ಹಿಂದಿನ ಮೂರು ಮರಗಳಲ್ಲಿ ಈ ಹುಳ ಗಳು ಕಂಡುಬಂದಿವೆ. ಈ ಹುಳ ಮೈಗೆ ತಾಗಿದರೆ ತುಂಬಾ ತುರಿಕೆ ಉಂಟಾ ಗುತ್ತದೆ. ಆದುದರಿಂದ ನಮಗೆ ಶಾಲೆಗೆ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಒಳಗೆ ಹೋದ ನಂತರ ನಾವು ಬಾಗಿಲು ಹಾಕಿಯೇ ಇದ್ದೇವು. ಹೊರಗಡೆ ಬಾರದ ಸ್ಥಿತಿ ಇತ್ತು. ಮೇ ಫ್ಲವರ್ ಮರದ ಎಲೆ ಗಳನ್ನು ಮಾತ್ರ ಅವು ತಿನ್ನುವುದು ಕಂಡುಬಂದಿದೆ’ ಎಂದು ಶಾಲಾ ಶಿಕ್ಷಕ ನವೀನ್ ಕೆ.ಎಸ್. ತಿಳಿಸಿದ್ದಾರೆ.

''ಅಪಾರ ಸಂಖ್ಯೆಯಲ್ಲಿ ಹುಳಗಳು ಇರುವ ಬಗ್ಗೆ ಮಾಹಿತಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ತಿಳಿದುಬಂದಿದೆ. ಈ ಸಂಬಂಧ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಔಷಧಿ ಸಿಂಪಡಿಸಿರುವುದರಿಂದ ಎಲ್ಲ ಹುಳಗಳು ಸತ್ತು ಹೋಗಿವೆ. ಇದು ಪತಂಗದ ಹುಳ ಆಗಿದ್ದು, ಕೋಶಾ ವಸ್ಥೆಗಾಗಿ ಮರದಿಂದ ಇಳಿದುಬಂದಿದೆ. ಹುಳದ ಮಾದರಿಯನ್ನು ಸಂಗ್ರಹಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಗುತ್ತಿದೆ''

-ಡಾ.ಸಚಿನ್, ಕೀಟ ತಜ್ಞ, ಬ್ರಹ್ಮಾವರ ಕೃಷಿ ಕೇಂದ್ರ

''ಈ ಹುಳಗಳ ಹಾವಳಿಯಿಂದ ಸಮೀಪದ ಅಂಗಡಿಯವರು ಕೂಡ ತೊಂದರೆ ಅನುಭವಿಸಿದ್ದಾರೆ. ಮತದಾನ ಕೇಂದ್ರವಾಗಿರುವ ಈ ಶಾಲೆಯಲ್ಲಿ ಹುಳಗಳು ಕಂಡುಬಂದಿರುವುದರಿಂದ ಕೂಡಲೇ ಗ್ರಾಪಂಗೆ ಮಾಹಿತಿ ನೀಡಿ, ಔಷಧಿ ಸಿಂಪಡಿಸಲಾಗಿದೆ. ಶಾಲಾ ಕಟ್ಟಡ ತುಂಬಾ ಈ ಹುಳ ಹರಿ ದಾಡುತ್ತಿದ್ದು, ಕೆಲವು ಹುಳಗಳು ಗೂಡು ಕಟ್ಟುತ್ತಿರುವುದು ಕೂಡ ಕಂಡುಬರುತ್ತಿವೆ''.

-ಜಿ.ಎಸ್.ಪ್ರಭು, ನಿವೃತ್ತ ಶಿಕ್ಷಕ, ಚೇರ್ಕಾಡಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X